ಆಚಾರ್ಯ ವಿದ್ಯಾಸಂಸ್ಥೆಯಲ್ಲಿ ವಿಶೇಷ ಸಮಾವೇಶ
ಬೆಂಗಳೂರು, ಜು.29: ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್ ಹಾಗೂ ಜಾಂಗ್ ಜಿಯಾನ್ ಮ್ಯಾಥೆಮೆಟಿಕಲ್ ಸೊಸೈಟಿ ಸಹಯೋಗಯೊಂದಿಗೆ ಗಣಿತ GAM 2013 ಸಮಾವೇಶವನ್ನು ಆಯೋಜಿಸಿದೆ.
JANGJEON ಮ್ಯಾಥೆಮೆಟಿಕ್ ಸೊಸೈಟಿ ಆಯೋಜಿಸಿರುವ 'ಗ್ಲೋಬಲ್ ಅಡ್ವಾನ್ಸ್ ಮೆಂಟ್ ಆಫ್ ಮ್ಯಾಥೆಮೆಟಿಕ್ಸ್ GAM 2013 26ನೇ ಸಮಾವೇಶವಾಗಿದೆ. ಆಗಸ್ಟ್ 1 ರಂದು ಬೆಂಗಳೂರಿನ ಹೆಸರಘಟ್ಟ ರಸ್ತೆಯ ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ ಈ ಸಮಾವೇಶ ನಡೆಯಲಿದೆ.
ಗಣಿತ ವಿಷಯದಲ್ಲಿ ಆಗಿರುವ ಸಂಶೋಧನೆ ಹಾಗೂ ಅನ್ವಯ ಅಭಿವೃದ್ಧಿ ಬಗ್ಗೆ ಬೆಳಕು ಚೆಲ್ಲಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಗಣಿತದ ಬಗ್ಗೆ ಉಪನ್ಯಾಸ, ಚರ್ಚೆ ಹಾಗೂ ಪ್ರಾತ್ಯಕ್ಷಿಕೆಗಳಲ್ಲದೆ ಸಂಶೋಧನಾ ವರದಿಗಳನ್ನು ಈ ಸಮಾವೇಶದಲ್ಲಿ ಕಾಣಬಹುದು.

ವಿವಿಧ ದೇಶಗಳಿಂದ ಸುಮಾರು 32ಕ್ಕೂ ಅಧಿಕ ಪ್ರತಿನಿಧಿಗಳು ವಿವಿಧ ವಿಷಯಗಳ ಮೇಲೆ ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ಇದರ ಜೊತೆಗೆ 150 ಅಧಿಕ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ದೇಶಗಳ ಗಣಿತಜ್ಞ ಸಮಾವೇಶ ಆಯೋಜನೆ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಗಣಿತ ಸಂಶೋಧಕರಿಗೆ ತಮ್ಮ ಅಭಿಪ್ರಾಯ ಹಂಚಿಕೆಗೆ ಸೂಕ್ತ ವೇದಿಕೆ ಒದಗಿಸಲಾಗುತ್ತಿದೆ.
1996ರಲ್ಲಿ ಡಾಕ್ಟರ್ ಟೆಕ್ಯಾನ್ ಕಿಮ್ ಅವರಿಂದ ಆರಂಭವಾದ JANGJEON ಮ್ಯಾಥೆಮೆಟಿಕ್ ಸೊಸೈಟಿ (JMS ) ಗಣಿತ ಸಂಶೋಧನೆ ವಿಷಯದಲ್ಲಿ ಮುಕ್ತವಾದ ಸಂವಾದ ಹಾಗೂ ಸಹಕರ ನೀಡುತ್ತಾ ಬಂದಿದೆ. ಹಲವಾರು ವಿದ್ವಾಂಸರು, ಗಣಿತಜ್ಞರು ವಿವಿಧ ರೀತಿಯಲ್ಲಿ ಮನುಕುಲದ ಏಳಿಗೆಗೆ ಶ್ರಮಿಸಿದ್ದಾರೆ.
ಈ ಸಮಾವೇಶದಲ್ಲಿ ಬೀಜ ಗಣಿತ, ಅನ್ವಯ ಗಣಿತ, ಅಂಕ ಗಣಿತ, ಕಂಪ್ಯೂಟರ್ ನೆಟ್ವರ್ಕ್, ಫಂಕ್ಷನಲ್ ಅನಾಲಿಸಿಸ್, ಭೌತ ಗಣಿತ, ಭೌತ ರಸಾಯನ ಶಾಸ್ತ್ರ, ಡಿಫೆರೆಂಟ್ ಈಕ್ವೆಷನ್ ,ನ್ಯೂಮೆರಿಕಲ್ ಅನಾಲಿಸಸ್ ಹಾಗೂ ಕಾಂಬಿನಾಟ್ಟ್ರಿಕ್ಸ್ ಮುಂತಾದ ವಿಷಯಗಳ ಮೇಲೆ ಚರ್ಚೆ, ಸಂವಾದ ನಡೆಯಲಿದೆ. ದೇಶ, ವಿದೇಶದ ಗಣಿತಜ್ಞರು ಒಂದೆಡೆ ಸೇರಿ ಸಂವಾದ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಮಾವೇಶದ ಅಧ್ಯಕ್ಷ, ವಿದ್ಯಾಸಂಸ್ಥೆ ಪ್ರಿನಿಪಾಲ್ ಪ್ರೊಫೆಸರ್ ಗುರುನಾಥ್ ರಾವ್ ವೈದ್ಯ ಹೇಳಿದ್ದಾರೆ.
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications