ಚಿತ್ರಗಳಲ್ಲಿ: ಶ್ರೀನಗರ ಸಚಿವಾಲಯಕ್ಕೆ ಬೆಂಕಿ
ಜಮ್ಮು ಮತ್ತು ಕಾಶ್ಮೀರ ಸಚಿವಾಲಯದಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.ತಕ್ಷಣವೇ ಘಟನಾ ಸ್ಥಳಕ್ಕೆ 12 ಅಗ್ನಿ ಶಾಮಕ ವಾಹನಗಳು ಧಾವಿಸಿದ್ದು, ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿರುವುದಕ್ಕೆ ಏನು ಕಾರಣ ಎಂಬುದು ಮಾತ್ರ ಇನ್ನು ತಿಳಿದು ಬಂದಿಲ್ಲ.
ಬಾಂಬ್ ಸ್ಫೋಟದ ನಂತರ ಬಿಹಾರದ ಬೋಧ್ ಗಯಾದಲ್ಲಿ ಶಾಂತಿ ಮಂತ್ರ ಮತ್ತೊಮ್ಮೆ ಕೇಳಿ ಬರುತ್ತಿದೆ. ಶಾಲಾ ಮಕ್ಕಳು ಭಗವಾನ್ ಬುದ್ಧನ ದೇಗುಲಕ್ಕೆ ಭೇಟಿ ಕೊಟ್ಟ ಚಿತ್ರ ಇಲ್ಲಿದೆ. ಮುಂಬೈ ಸೇರಿದಂತೆ ಉತ್ತರ ಭಾರತದಲ್ಲಿ ಮಳೆ ಮುಂದುವರೆದಿದೆ. ಜೋಧ್ ಪುರದ ಇದ್ಗಾದಲ್ಲಿ ರಮ್ಜಾನ್ ಅಲ್ ಮುಬಾರಕ್ ತಿಂಗಳ ಆಚರಣೆ ಆರಂಭವಾಗಿದೆ. ಕರ್ನಾಟಕದಲ್ಲೂ ಗುರುವಾರ(ಜು.11) ದಿಂದ ರಂಜಾನ್ ಮಾಸಾಚಾರಣೆ ಆರಂಭವಾಗಿದೆ.
ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆ ಶುರುವಾಗಿದೆ. ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಂತೆ ಬಡತನದ ರೇಖೆ ಕೆಳಗೆ ಇರುವವರಿಗೆ 1 ರೂ ನಂತೆ 1 ಕೆಜಿ ಅಕ್ಕಿ ಸಿಗಲಿದೆ. ಇನ್ನೂ ಅನೇಕ ಚಿತ್ರಗಳು ಇಂದಿನ ಚಿತ್ರ ಸುರಳಿಯಲ್ಲಿದೆ.

ಬೆಂಕಿ ಅನಾಹುತ
ಜಮ್ಮು ಮತ್ತು ಕಾಶ್ಮೀರ ಸಚಿವಾಲಯದಲ್ಲಿ ಗುರುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಮುಂಬೈ ಮಳೆ
ಮುಂಬೈ : ಪ್ರವಾಹ ಭರಿತ ರಸ್ತೆಗಳಲ್ಲಿ ಸಂಚರಿಸಲು ಕಷ್ಟಪಡುತ್ತಿರುವ ಜನ

ಗುರ್ ಗಾಂವ್ ಮಳೆ
ಗುರ್ ಗಾಂವ್ : ಜಲಮಯವಾದ ರಸ್ತೆಯಲ್ಲಿ ಕಷ್ಟಪಟ್ಟು ಚಲಿಸುತ್ತಿರುವ ಕಾರು

ಚಿಕ್ಕಮಗಳೂರಿನಲ್ಲಿ ಅನ್ನಭಾಗ್ಯ
ಚಿಕ್ಕಮಗಳೂರು : ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆ ಶುರುವಾಗಿದೆ. ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಂತೆ ಬಡತನದ ರೇಖೆ ಕೆಳಗೆ ಇರುವವರಿಗೆ 1 ರೂ ನಂತೆ 1 ಕೆಜಿ ಅಕ್ಕಿ ಸಿಗಲಿದೆ.

ರಂಜಾನ್ ಮುಬಾರಕ್
ಪವಿತ್ರ ರಂಜಾನ್ ಮಾಸಾಚಾರಣೆ ಅರಂಭಗೊಂಡಿದೆ.

ಅಮರನಾಥ ಯಾತ್ರೆ
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ನಿರಾಂತಕವಾಗಿ ಸಾಗಿದೆ.

ಬೋಧ್ ಗಯಾ
ಬೋಧ್ ಗಯಾ ದೇಗುಲದಲ್ಲಿ ಶಾಲಾ ಮಕ್ಕಳ ಪ್ರವೇಶ












Click it and Unblock the Notifications