ಜಿಪಿಎಸ್ : ಅಮೆರಿಕ ಸಮಕ್ಕೆ ನಿಂತ ಭಾರತ
ಬೆಂಗಳೂರು, ಜು.2: ಪಿಎಸ್ ಎಲ್ ವಿ-ಸಿ20 ಸೋಮವಾರ ರಾತ್ರಿ ಐಆರ್ ಎನ್ ಎಸ್ ಸ್-1ಎ ಯೊಂದಿಗೆ ಶ್ರೀಹರಿಕೋಟಾದಿಂದ ಅಂತರಿಕ್ಷ ಸೇರುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸ್ವಂತ ಉಪಗ್ರಹ ನಾವಿಕ ವ್ಯವಸ್ಥೆ ನಿರ್ಮಾಣದತ್ತ ಭಾರತ ಮೊದಲ ಹೆಜ್ಜೆ ಇಟ್ಟಿದೆ. ಅಮೆರಿಕ ಸೇರಿದಂತೆ ಪ್ರಮುಖ ದೇಶಗಳು ಹೊಂದಿರುವ ಜಿಪಿಎಸ್ ತಂತ್ರಜ್ಞಾನಕ್ಕೆ ಸಮಾನಾಂತರ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ.
ಭಾರತೀಯ ಪ್ರಾದೇಶಿಕ ನಾವಿಕ ಉಪಗ್ರಹ ವ್ಯವಸ್ಥೆ (ಐಆರ್ ಎನ್ ಎಸ್ ಎಸ್) ಎಂದು ಹೆಸರಿಸಲಾಗಿರುವ ಈ ಉಪಗ್ರಹ ವಿಶ್ವದ ಕೆಲವೇ ಕೆಲವು ನಾವಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಭಾರತದೊಳಗೆ ಹಾಗೂ ಸುತ್ತಲೂ ನಾವಿಕ ವ್ಯವಸ್ಥೆ ಮಾಡಲು ಅಮೆರಿಕ ಮಾಲಕತ್ವದ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ) ಗೆ ಇದು ಪರ್ಯಾಯವಾಗಲಿದೆ.

ಯುದ್ಧ ಹಾಗೂ ಸಂಘರ್ಷಗಳ ಸಮಯದಲ್ಲಿ ಏಕ ಮಾಲೀಕತ್ವ (ಒಂದೇ ದೇಶದ ಹಿಡಿತದಲ್ಲಿ) ವಿರುವ ಜಿಪಿಎಸ್ ನಂಥ ಜಾಗತಿಕ ವ್ಯವಸ್ಥೆಯನ್ನು ನಂಬಿಕೊಂಡಿರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರಮುಖ ದೇಶಗಳು ತಮ್ಮದೇ ನಾವಿಕ ವ್ಯವಸ್ಥೆಯನ್ನು ರೂಪಿಸಿವೆ. ಇದು ಭಾರತಕ್ಕೆ ಪ್ರತಿಕೂಲ ಪರಿಸ್ಥಿತಿಯಲ್ಲೂ ನಾವಿಕ ವ್ಯವಸ್ಥೆಯ ಲಭ್ಯತೆಯನ್ನು ಒದಗಿಸಲಿದೆ.
ಅಮೆರಿಕ ಜಿಪಿಎಸ್ ವ್ಯವಸ್ಥೆ ಹೊಂದಿದ್ದರೆ, ರಷ್ಯಾ GLONASS (ಗ್ಲೋಬಲ್ ನಾವಿಗೇಶನ್ ಸ್ಯಾಟ ಲೈಟ್ ಸಿಸ್ಟಂ) ಎಂಬ ವ್ಯವಸ್ಥೆಯನ್ನು ಸ್ವಂತವಾಗಿ ಹೊಂದಿದೆ. ಚೀನ 'ಬೀಡೌ' (ಕಂಪಾಸ್ ಎಂಬ ಹೆಸರೂ ಇದೆ) ನಾವಿಕ ಉಪಗ್ರಹ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಹಾಗೂ ಐರೋಪ್ಯ ಒಕ್ಕೂಟ ತನ್ನ ಸ್ವಂತ ಉಪಯೋಗಕ್ಕಾಗಿ ಗೆಲಿಲಿಯೊ ಹೆಸರಿನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತದೆ. [ಇದನ್ನೂ ಓದಿ: ಜಿಪಿಎಸ್ ಎನ್ನುವ ರಸ್ತೆಮಾತುಗಾರ]
ಭಾರತದ ಈ ನಾವಿಕ ಉಪಗ್ರಹ ವ್ಯವಸ್ಥೆ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೆ, ತಾಂತ್ರಿಕ ಸಾಮರ್ಥ್ಯ ವೃದ್ಧಿಗೂ ನೆರವಾಗಲಿದೆ. ನಮ್ಮಲ್ಲಿ ಈಗಾಗಲೇ ಸಂಪರ್ಕ ಉಪಗ್ರಹಗಳಿವೆ. ನಾವಿಕ ಉಪಗ್ರಗಳು ಎರಡನೆಯ ಹೆಜ್ಜೆಯಾಗಿದೆ ಎಂದು ಇಸ್ರೋ ಪ್ರಧಾನ ವಕ್ತಾರ ದೇವಿಪ್ರಸಾದ್ ಕಾರ್ಣಿಕ್ ಹೇಳಿದ್ದಾರೆ.
IRNSS: ಐಆರ್ ಎನ್ ಎಸ್ ಎಸ್ 7 ಉಪಗ್ರಹಗಳನ್ನು ಒಳಗೊಂಡಿದೆ. ಸುಮಾರು 1,425 ಕೆಜಿ ತೂಗುವ ಉಪಗ್ರಹ ಭೂ ಸಮಾಂತರ ಕಕ್ಷೆಯಿಂದ ಸುಮಾರು 36,000 ಕಿ.ಮೀ ಎತ್ತರದಲ್ಲಿ ಕಾರ್ಯ ನಿರ್ವಹಿಸಲಿದೆ. ಭಾರತದ ಭೂ ಪ್ರದೇಶದ ಮೇಲೆ 20 ಮೀಗೂ ಹೆಚ್ಚು ದೂರದಿಂದ ನಿಖರ ಚಿತ್ರ ತೆಗೆಯುವ ಗುರಿ ಹೊಂದಿದೆ. ಭಾರತದ ಸುತ್ತಮುತ್ತ 1,500 ಕಿ.ಮೀ ವ್ಯಾಪ್ತಿಗೂ ಹರಡಲಿದೆ. IRNSS ಸುಮಾರು 1,420 ಕೋಟಿ ರು ವೆಚ್ಚದ ಯೋಜನೆಯಾಗಿದೆ. ದಿಕ್ಸೂಚಿ ಉಪಗ್ರಹ ಇನ್ನಷ್ಟು ಮಾಹಿತಿಗೆ ಕ್ಲಿಕ್ಕಿಸಿ
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications