ಲವ್ ಸೆಕ್ಸ್ ಮೋಸ, ಪ್ರಿಯತಮನಿಗೆ ಬಿತ್ತು ಗೂಸ

ಸ್ನೇಹಿತನೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗಲೇ ಹೊರಕ್ಕೆ ತಳ್ಳಿ ಹಳ್ಳವೊಂದರಲ್ಲಿ ಬೀಳಿಸಲು ಆತ ಯತ್ನಿಸಿದ್ದಾನೆ. ಇದನ್ನು ನೋಡಿ ಸಾರ್ವಜನಿಕರು ಆತನನ್ನು ಮತ್ತು ಸ್ನೇಹಿತನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಪಾರು ಮಾಡಿಲಾಗಿದೆ.
ಪ್ರೇಮ ಕಥೆಯ ವಿವರ : ಚೆನ್ನಪಟ್ಟಣದ ನಯಾಜ್ ಎಂಬ ಮುಸ್ಲಿಂ ಕೋಮಿನ ಯುವಕ ರಾಮನಗರದ ನಾಜನೀನ್ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಆಕೆಯ ಸಮ್ಮತಿಯೂ ಇತ್ತು. ತಂದೆ ತಾಯಿ ಕಳೆದುಕೊಂಡು, ಸಂಬಂಧಿಕರ ಮನೆಯಲ್ಲಿದ್ದ ನಾಜನೀನ್ ನಯಾಜ್ ಜೊತೆ ಮನೆಬಿಟ್ಟು ಓಡಿಬಂದಿದ್ದಾಳೆ.
ನಯಾಜ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ವಾರಗಟ್ಟಲೆ ತನ್ನ ಸ್ನೇಹಿತನ ಮನೆಯಲ್ಲಿಟ್ಟು ಮದುವೆಗೆ ಮುಂಚೆ ತನ್ನನ್ನು ಕೂಡಿಕೊಳ್ಳಬೇಕೆಂದು ಒತ್ತಾಯಿಸಿದ್ದಾನೆ. ಆಕೆ ಇದಕ್ಕೆ ಸೊಪ್ಪು ಹಾಕಿಲ್ಲ. ಆತನ ಮದುವೆಯ ಭರವಸೆ ಬರೀ ನಾಟಕ ಮತ್ತು ಮೋಸವೆಂದು ಗೊತ್ತಾಗಿದೆ. ನಂತರ ಮನೆಗೆ ವಾಪಸ್ ಕಳಿಸಬೇಕೆಂದು ಒತ್ತಾಯಿದ್ದಾಳೆ.
ನಯಾಜ್ ತನ್ನ ಸ್ನೇಹಿತ ಟಿಪ್ಪು ಎಂಬಾತನ ಜೊತೆ ಆಟೋದಲ್ಲಿ ಕರೆದುಕೊಂಡು ಬರುತ್ತಿದ್ದಾಗ, ಜಟಾಪಟಿ ನಡೆದು ಆಕೆಯನ್ನು ಹೊರದಬ್ಬಿದ್ದಾನೆ. ಹಳ್ಳಕ್ಕೆ ಬಿದ್ದ ಆಕೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನು ನೋಡಿದ ಸಾರ್ವಜನಿಕರು ಸುಮ್ಮನಿರಬೇಕಲ್ಲ. ಸಿಕ್ಕಿದ್ದೇ ಚಾನ್ಸ್ ಎಂದು, ನಯಾಜ್ ಮತ್ತು ಆತನ ಸ್ನೇಹಿತ ಟಿಪ್ಪುವಿನ ಬಟ್ಟೆ ಹರಿದು, ಮುಖದಲ್ಲಿ ರಕ್ತ ಜಿನುಗುವ ಹಾಗೆ ಬಡಿದಿದ್ದಾರೆ.
ತಾನು ಆಕೆಗೆ ಮೋಸ ಮಾಡಿಲ್ಲ, ವಾಪಸ್ ಬಿಡಲೆಂದು ಕರೆದುಕೊಂಡು ಹೋಗುತ್ತಿದ್ದೆ. ಆಕೆಯೇ ಆಟೋದಿಂದ ಜಿಗಿದಿದ್ದಾಳೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರೂ ಸಾರ್ವಜನಿಕರು ಬಿಟ್ಟಿಲ್ಲ. ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಾಜನೀನ್ ಕೂಡ, ನಯಾಜ್ ತನ್ನನ್ನು ಕೊಲ್ಲಲು ಯತ್ನಿಸಿದ ಎಂದು ಆರೋಪಿಸಿದ್ದಾಳೆ. ಆತ ತನ್ನ ಮೇಲೆ ಅತ್ಯಾಚಾರ ನಡೆಸಲು ಕೂಡ ಯತ್ನಿಸಿದ, ಆದರೆ ಯಶಸ್ವಿಯಾಗಲಿಲ್ಲ ಎಂದು ದೂರಿದ್ದಾಳೆ. ಸದ್ಯಕ್ಕೆ ನಯಾಜ್, ಟಿಪ್ಪು ಮತ್ತು ನಾಜನೀನ್ ಕುಂಬಳಗೋಡು ಪೊಲೀಸರ ವಶದಲ್ಲಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications