ಚಿತ್ರಗಳಲ್ಲಿ : ಬಿಸಿಲು ಬಿಸಿಲು ಸುಡು ಸುಡು ಬಿಸಿಲು
ಬೆಂಗಳೂರು, ಮೇ. 22: ಬಿಸಿಲಿನ ತಾಪ ತಾಳಲಾರದೆ ಉತ್ತರ ಭಾರತ ತತ್ತರಿಸುತ್ತಿದೆ. ಮಧ್ಯಪ್ರದೇಶದಲ್ಲಿ ಸುಡು ಬಿಸಿಲಿಗೆ ಮೂವರು ಬಲಿಯಾಗಿದ್ದಾರೆ. ನಾಗಪುರದಲ್ಲಿ ಆರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಈ ಪಾಟಿ ಬಿಸಿಲು ಎದುರಿಸುತ್ತಿದೆ. ದೆಹಲಿ, ಗುರ್ ಗಾಂವ್, ನೋಯ್ಡಾದಲ್ಲಿ ಎಂದಿನಂತೆ ಪಾದರಸದ ಮಟ್ಟ ಏರುತ್ತಲೇ ಇದೆ.
ಪಂಜಾಬ್ ಹರ್ಯಾಣದಲ್ಲಿ 45 ಪ್ಲಸ್ ಡಿಗ್ರಿ ಸೆಲ್ಸಿಯಸ್ ಕಾಮನ್ ಆಗಿ ಬಿಟ್ಟಿದೆ. ನಾಗಪುರದಲ್ಲಿ 47.8 ಡಿಗ್ರಿ ತಾಪಮಾನಕ್ಕೆ ಜನ ಬೆಂದು ಹೋಗಿದ್ದಾರೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ಬಿಸಿಲಿನಲ್ಲೇ ಮನಸ್ಸಿಲ್ಲದ ಮನಸ್ಸಿನಿಂದ ಪಾದ ಬೆಳೆಸಿದ್ದಾರೆ.
ಸಮುದ್ರ ಮಟ್ಟದಿಂದ 8,848 ಅಡಿ ಎತ್ತರವಿರುವ ಎವರೆಸ್ಟ್ ಶಿಖರವನ್ನು ಅಂಗವಿಕಲರೊಬ್ಬರು ಎವರೆಸ್ಟ್ ಏರಿದ ಸಾಧನೆ ದಾಖಲಾಗಿದೆ. ಭಾರತದ ರಾಷ್ಟಮಟ್ಟದ ವಾಲಿಬಾಲ್ ಆಟಗಾರ್ತಿ ಅರುಣಿಮಾ ಸಿನ್ಹಾ ಅವರು ಕೃತಕ ಕಾಲಿನೊಂದಿಗೆ ಎವರೆಸ್ಟ್ ಏರಿದ್ದಾರೆ.
ಉಳಿದಂತೆ ಓಕ್ಲಾಹಾಮಾ ಚಂಡ ಮಾರುತ ಆರ್ಭಟ, ಕ್ಯಾನ್ಸ್ ಚಿತ್ರೋತ್ಸವ ಸಂಭ್ರಮ ಮುಂತಾದ ಚಿತ್ರಗಳಿದೆ.
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಮೊರದಾಬಾದ್: ಬಿಸಿಲಿನ ತಾಪ ನೀಗಿಸಿಕೊಳ್ಳಲು ರೈಲ್ವೆ ಪ್ರಯಾಣಿಕರು ನೀರು ಸಂಗ್ರಹಿಸುತ್ತಿರುವುದು
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಭುವನೇಶ್ವರ: ನಗರದ ಹೊರವಲಯದಲ್ಲಿ ಬಿಸಿಲು ಬೇಗೆಯಿಂದ ಬೆಂದ ಸ್ಲಂ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಆನಂದಿಸುತ್ತಿದ್ದಾರೆ.
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಕ್ಯಾನೆ ಚಿತ್ರೋತ್ಸವದಲ್ಲಿ ಆ ಕಾಲದ ಬೋಲ್ಡ್ ತಾರೆ, ಬೇಸಿಕ್ ಇನ್ ಸ್ಟಿಂಕ್ಟ್ ಚಿತ್ರ ಖ್ಯಾತಿಯ 55ರ ಹರೆಯ ನಟಿ ಶರೋನ್ ಸ್ಟೋನ್
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಕ್ಯಾನೆ ಚಿತ್ರೋತ್ಸವದಲ್ಲಿ ಸಪೂರ ಸುಂದರಿಯಾಗಿ ಐಶ್ವರ್ಯಾ ರೈ ಬಚ್ಚನ್
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಮುಂಬೈ: ಚೀನಾ ಹಾಗೂ ಭಾರತ ನಡುವಿನ ವ್ಯವಹಾರಿಕ ಸಭೆಯಲ್ಲಿ ಚೀನಾದ ಪ್ರಿಮಿಯರ್ ಲಿ ಕೆಗಿಯಾಂಗ್
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ರಾಜಸ್ಥಾನ: ಜೈಪುರದಲ್ಲಿ ಹೊಸ ರೈಲು ಉದ್ಘಾಟನೆಗೂ ಮುನ್ನ ಸಜ್ಜಾಗುತ್ತಿರುವುದು ಹೀಗೆ
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
80 ವರ್ಷ ವಯಸ್ಸಿನ ಜಪಾನಿ ಯುಚಿರೊ ಮಿಯುರಾ ಅವರು ಬೇಸ್ ಕ್ಯಾಂಪ್5,300 meters (17,388 feet) ನಿಂದ ಎವೆರೆಸ್ಟ್ ಹತ್ತಲು ಆರಂಭಿಸಲು ತೆರಳುತ್ತಿರುವ ದೃಶ್ಯ
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಓಕ್ಲಾಹಾಮಾದಲ್ಲಿ ಚಂಡಮಾರುತದ ಆರ್ಭಟಕ್ಕೆ ಸಿಲುಕಿ ನೆಲಕಚ್ಚಿರುವ ಕಟ್ಟಡ ಅವಶೇಷಗಳ ಬಳಿ ಮಾಲೀಕರು
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಉತ್ತರ ಭಾರತದಲ್ಲಿ ಸೂರ್ಯ ಭೂಮಿಗೆ ತುಂಬಾ ಹತ್ತಿರವಾಗಿದ್ದಾನೆ. ಎಲ್ಲೆಡೆ ಬಿಸಿಲು ತನ್ನ ರುದ್ರತನ ತೋರುತ್ತದೆ. ಈಗಾಗಲೇ ಕೆಲವರ ಬಲಿ ಪಡೆದಿದೆ.
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಪಶ್ಚಿಮ ಬಂಗಾಳ: ಕಾಲೇಜು ಯುವತಿಯರು ಬಿಸಿಲಿನ ತಾಪಕ್ಕೆ ಹೆದರಿ ತಂಪು ಕನ್ನಡಕಕ್ಕೆ ಮೊರೆ ಹೋಗಿದ್ದಾರೆ.
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಯುಪಿಎ 1 ಹಾಗೂ 2 ಸೇರಿ 9 ವರ್ಷವಾದರೂ ಸುಧಾರಿಸಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಗೆ ಏನು ಹೇಳೋಣ: ಸುಷ್ಮಾಸ್ವರಾಜ್
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಐಪಿಎಲ್: ಸ್ಪಾಟ್ ಫಿಕ್ಸಿಂಗ್ ಆರೋಪಿಗಳನ್ನು ಕೋರ್ಟಿನಿಂದ ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ
ಇಂದಿನ ಚಿತ್ರಸುರಳಿ ಬಿಚ್ಚಿ ನೋಡಿ
ಸಮಾಜ ಸುಧಾರಕ ರಾಜರಾಮ ಮೋಹನ್ ರಾಯ್ ಅವರ 241ನೇ ಜನ್ಮದಿನೋತ್ಸವದ ಅಂಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೂ ಅರ್ಪಿಸುತ್ತಿದ್ದಾರೆ.