ಲೋಕಸಭೆ ಕದನ : ಚುನಾವಣಾ ಸಮೀಕ್ಷೆಗಳ ಉಗ್ರಾಣ
ಬೆಂಗಳೂರು, ಮೇ. 22 : ಪ್ರಸ್ತುತ ಲೋಕಸಭೆಯ ಅವಧಿ ಇನ್ನೂ ಒಂದು ವರ್ಷ ಇರುವಾಗಲೆ ದೇಶದ ಚುಕ್ಕಾಣಿ ಯಾವ ಪಕ್ಷಕ್ಕೆ ಬಹುಮತ ಲಭಿಸಲಿದೆ, ಯಾವ ಪಕ್ಷ ಹಳ್ಳ ಹಿಡಿಯಲಿದೆ, ಯಾರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬ ಕುರಿತು ರಾಜಕೀಯ ಅಂಗಳದಲ್ಲಿ, ಮಾಧ್ಯಮಗಳಲ್ಲಿ, ಮತದಾರರಲ್ಲಿ ಭಾರೀ ಬಿಸಿಬಿಸಿ ಚರ್ಚೆ ಆರಂಭವಾಗಿದೆ.
ಮುದ್ರಣ, ಟಿವಿ ಮಾಧ್ಯಮಗಳು ಸಮೀಕ್ಷೆ ನಡೆಸುವ ಸಂಸ್ಥೆಗಳ ಸಹಾಯದೊಂದಿಗೆ ಚುನಾವಣಾ ಸಮೀಕ್ಷೆ ಆರಂಭಿಸಿವೆ. ಎಬಿಪಿ ನ್ಯೂಸ್ಗಾಗಿ ಎಸಿ ನೀಲ್ಸನ್, ಹೆಡ್ ಲೈನ್ಸ್ ಟುಡೆಗಾಗಿ ಸಿ-ವೋಟರ್ ಮತ್ತು ಸಿಎನ್ಎನ್ ಐಬಿಎನ್ಗಾಗಿ ಜಿಎಫ್ಕೆ ಸಂಸ್ಥೆಗಳು ಚುನಾವಣಾ ಸಮೀಕ್ಷೆ ನಡೆಸಿ, ನಾಲ್ಕನೇ ವರ್ಷಕ್ಕೆ ಕಾಲಿಟ್ಟಿರುವ ಯುಪಿಎ ಸರಕಾರಕ್ಕೆ ನಡುಕ ತಂದಿಟ್ಟಿವೆ.
ಈ ಸಂಸ್ಥೆಗಳು ನಡೆಸುವ ಸಮೀಕ್ಷೆಗಳು ಎಷ್ಟರಮಟ್ಟಿಗೆ ಸತ್ಯಾಸತ್ಯತೆ ಹೊಂದಿರುತ್ತವೆ, ಎಷ್ಟರಮಟ್ಟಿಗೆ ನಿಜವಾಗುತ್ತವೆ ಎಂಬುದು ಚರ್ಚಾಸ್ಪದ ವಿಷಯ. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಹಲವಾರು ಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆ ನಡೆಸಿದ ನಂತರ ಈ ಸಮೀಕ್ಷೆಗಳು ಭಾರೀ ಓಘವನ್ನು ಪಡೆದುಕೊಂಡಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಂದು ಹೇಳಿದ್ದು ಈಗ ನಿಜವಾಗಿದೆ.

ಈಗ ನಡೆಸಿರುವ ಮೂರು ಸಮೀಕ್ಷೆಗಳು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕಣಕ್ಕಿಳಿಸಿದರೆ ಭಾರೀ ಲಾಭ ಪಡೆದುಕೊಳ್ಳಲಿದೆ ಮತ್ತು ಯುಪಿಎ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದಿವೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಇನ್ನು ಸಮೀಕ್ಷೆಗಳ ಪ್ರವಾಹವೇ ಹರಿದುಬರಲಿದೆ. ಮಾಧ್ಯಮ ಸಂಸ್ಥೆಗಳು ಕೂಡ ಜನರ ನಾಡಿಮಿಡಿತವನ್ನು ಅರಿಯಲು ತುದಿಗಾಲಲ್ಲಿ ನಿಂತಿವೆ. ಎಲ್ಲ ಸರ್ವೇಗಳ ಕೊಂಡಿಗಳು ಈ ಪುಟದಲ್ಲಿ ದೊರೆಯಲಿವೆ. ನಿರೀಕ್ಷಿಸುತ್ತಿರಿ.
| ಎಬಿಪಿ ನ್ಯೂಸ್ | ಹೆಡ್ ಲೈನ್ಸ್ ಟುಡೆ | |
| ಯುಪಿಎ | 136 | 131 |
| ಎನ್ಡಿಎ | 206 | 210 |
| ಇತರರು | 203 | 204 |
* ಸಿಎನ್ಎನ್ ಐಬಿಎನ್ ಸಮೀಕ್ಷೆ : ಯುಪಿಎ ಸೋಲು ಖಚಿತ
* ಎಬಿಪಿ ನ್ಯೂಸ್ ಸಮೀಕ್ಷೆ : ಕಾಂಗ್ರೆಸ್-ಯುಪಿಎ ಧೂಳೀಪಟ
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications