ಮಾಜಿ ಸಿಎಂ ಮೇಲೆ ಕಾಮೆಂಟಿಗೆ ವಕೀಲೆ ಬಂಧನ

ತಮಿಳುನಾಡಿನ ರಾಜ್ಯಪಾಲ ರೋಶಯ್ಯ ಹಾಗೂ ಕಾಂಗ್ರೆಸ್ ಶಾಸಕ ಎ ಕೃಷ್ಣ ಮೋಹನ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದ ವಕೀಲೆಯ ಹೆಸರು ಜಯ ವಿದ್ಯಾಲ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕಾಶಂ ಜಿಲ್ಲೆಯ ಮೂಲದವರಾದ ಜಯಾ ಅವರು PUCL ವಕೀಲರ ಸಂಘದ ಸದಸ್ಯೆಯಾಗಿದ್ದಾರೆ. ಎಪ್ರಿಲ್ ನಲ್ಲಿ ಜಯಾ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಶಾಸಕ ಕೃಷ್ಣ ಮೋಹನ್ ವಿರುದ್ಧ ಅವಹೇಳನಕಾರಿ ಸಾಲುಗಳನ್ನು ಹಾಕಿದ್ದರು. ಕೃಷ್ಣ ಮೋಹನ್ ಅವರನ್ನು ಮತಿವಿಕಲ ಎಂದು ಜರೆದಿದ್ದರು. ಇದರಿಂದ ಕೋಪಗೊಂಡ ಶಾಸಕ ಕೃಷ್ಣ ಮೋಹನ್ ಅವರು ಏ.18 ವಿರುದ್ಧ ದೂರು ನೀಡಿದ್ದರು.
ಇದರ ಜೊತೆಗೆ ತಮಿಳುನಾಡಿನ ರಾಜ್ಯಪಾಲ ರೋಶಯ್ಯ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದಾಗ ಶಾಸಕ ಕೃಷ್ಣ ಮೋಹನ್ ಅವರು ಹಲವಾರು ಭೂ ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದು ವಕೀಲೆ ಜಯಾ ಪೋಸ್ಟ್ ಮಾಡಿದ್ದರು.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66 ಎ ಅನ್ವಯ ವಕೀಲೆ ಜಯಾ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಶಾಸಕ ಕೃಷ್ಣ ಮೋಹನ್ ಹಾಗೂ ರಾಜ್ಯಪಾಲ ರೋಶಯ್ಯ ವಿರುದ್ಧ ಅವಹೇಳನಕಾರಿ ಸಾಲುಗಳನ್ನು ಹಾಕಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications