ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಡುಪಿ, ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್
ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದೆ ಎನ್ನುವುದಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಪಕ್ಷದ ಪರ ಪ್ರಚಾರಕ್ಕೆ ನಾವು ಕ್ಷೇತ್ರಗಳನ್ನು ಸುತ್ತಾಡುತ್ತಿದ್ದಾಗ ನಮಗೆ ಆದ ಅನುಭವದ ಮಾತುಗಳು.
ಹೋದ ಸಲ ಬಿಜೆಪಿಯನ್ನು ಬೆಂಬಲಿಸಿದ ಬಹುತೇಕರು ಅದರಲ್ಲಿ ಮುಖ್ಯವಾಗಿ ಯುವಕರು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೆ ಪಕ್ಷದ ನಾಯಕರಿಂದ ಅವಮಾನವಾಗಿದೆ.
ಈ ಬೆಳವಣಿಗೆ ಬಿಜೆಪಿಯ ಪಾಲಿಗೆ ಒಳ್ಳೆದಲ್ಲ. ಕಳೆದ ಐದು ವರ್ಷಗಳಲ್ಲಿನ ಸರಕಾರದ ದುರಾಡಳಿತ ನೋಡಿ ಜನ ರೋಸಿ ಹೋಗಿದ್ದಾರೆ. ಪರ ಊರಿನಿಂದ ಬಂದು ಮಂಗಳೂರು ಮತ್ತು ಉಡುಪಿಯಲ್ಲಿ ನೆಲೆಸಿರುವವರು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿದ್ದಾರೆಂದು ಖಾದರ್ ಹೇಳಿದ್ದಾರೆ.
ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳು, ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ, ಸಾಲು ಸಾಲು ಹಗರಣಗಳಿಂದಾಗಿ ಈ ಬಾರಿ ಬರೀ ಈ ಎರಡು ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದೆಲ್ಲಡೆ ನೆಲಕಚ್ಚಲಿದೆ ಎಂದು ಖಾದರ್ ವಿಶ್ವಾಸದ ಮಾತನ್ನಾಡಿದ್ದಾರೆ.
Comments
karnataka assembly election congress bjp district news ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಬಿಜೆಪಿ ಜಿಲ್ಲಾಸುದ್ದಿ
English summary
Congress very much confident to sweep all the 13 seats in Udupi and Dakshina Kannada district in the Karnataka Assembly Election 2013.
Story first published: Tuesday, May 7, 2013, 10:04 [IST]