ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರ : ಸಿಂಧಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ಸಾವು

|
Google Oneindia Kannada News

Dyavappa Gowda Patiil
ಬಿಜಾಪುರ, ಏ. 27 : ಸಿಂಧಗಿ ಕ್ಷೇತ್ರದ ಜೆಡಿಯು ಅಭ್ಯರ್ಥಿ ದ್ಯಾವಪ್ಪ ಗೌಡ ಗುರುಲಿಂಗಪ್ಪ ಪಾಟೀಲ್ ತೀವ್ರ ಹೃಯಾಘಾತದಿಂದ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಂಜೆ ಪ್ರಚಾರ ನಡೆಸುತ್ತಿದ್ದ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಅವರನ್ನು ಸೊಲ್ಲಾಪುರದ ಆಶ್ವಿನಿ ಆಸ್ಪತ್ರಗೆ ದಾಖಲಿಸಲಾಗಿತ್ತು.

ಶನಿವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ದ್ಯಾವಪ್ಪ ಗೌಡ ಪಾಟೀಲ್ ಮೃತಪಟ್ಟಿದ್ದಾರೆ. ಸಜ್ಜನ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಪಾಟೀಲರು ಈ ಬಾರಿ ಬಿರುಸಿನಿಂದ ಪ್ರಚಾರ ಕಾರ್ಯ ಕೈಗೊಂಡಿದ್ದರು. ಪಾಟೀಲ್ ಪರವಾಗಿ ಮತ ಯಾಚಿಸಲು ಜೆಡಿಯು ಮುಂಖಡ ಶರದ್ ಯಾದವ್ ಸಿಂಧಗಿಗೆ ಭಾನುವಾರ ಆಗಮಿಸಬೇಕಾಗಿತ್ತು.

ಮಹಾರಾಷ್ಟ್ರದಿಂದ ಪಾಟೀಲರ ಮೃತದೇಹವನ್ನು ಇಂದು ರಾತ್ರಿ ಸ್ವ ಗ್ರಾಮಕ್ಕೆ ತರಲು ಸಿದ್ದತೆ ನಡೆದಿದ್ದು, ನಾಳೆ ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪಾಟೀಲರು ಮೃತಪಟ್ಟಿರುವುದರಿಂದ ಕ್ಷೇತ್ರದಲ್ಲಿ ಚುನಾವಣೆಗೆ ತಡೆ ಉಂಟಾಗಬಹುದೇ ಎಂಬ ಪ್ರಶ್ನೆ? ಈಗ ಉದ್ಭವವಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ನಿಯಮದಂತೆ ಕ್ಷೇತ್ರದ ಅಭ್ಯರ್ಥಿ ಮೃತಪಟ್ಟರೆ ಅಲ್ಲಿ ಚುನಾವಣೆ ನಡೆಸುವಂತಿಲ್ಲ. ಆದ್ದರಿಂದ ಚುನಾವಣೆ ಮುಂದೂಡುವ ಸಂಭವವಿದೆ.

ಕ್ಷೇತ್ರದ ಅಭ್ಯರ್ಥಿಗಳು

ಕಾಂಗ್ರೆಸ್ - ಶರಣಪ್ಪ ಟಿ.ಸುಣಗಾರ್
ಬಿಜೆಪಿ -ರಮೇಶ ಭೂಸನೂರ
ಜೆಡಿಎಸ್ - ಎಂ.ಸಿ.ಮನಗೂಳಿ
ಬಿಎಸ್ಆರ್ - ರಾಜು ತಾಳಿಕೋಟೆ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Bijapur district Sindagi constituency JDU candidate Dyavappa Gowda Patiil died from heart attack. Dyavappa Gowda is admited to hospetel on Friday. will election postponed in Sindagi constituency ?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X