ಸಾಮಾಜಿಕ ನ್ಯಾಯಪಾಲನೆ: ಇದು ಕುಮಾರಣ್ಣನ ತಾಕತ್ತು
ಬೆಂಗಳೂರು, ಏ.22: ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯಪಾಲನೆಯಲ್ಲಿ ಜೆಡಿಎಸ್ ಪಕ್ಷವು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಸಾಕಷ್ಟು ಮುಂದಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ 10 ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಇತರೆ ಪಕ್ಷಗಳಿಗೆ ಭರ್ಜರಿ ಸವಾಲು ಎಸೆದಿದ್ದಾರೆ.

10 ಸಾಮಾನ್ಯ ಕ್ಷೇತ್ರಗಳಲ್ಲಿ 4 ಪರಿಶಿಷ್ಟ ಜಾತಿ ಮತ್ತು 6 ಪರಿಶಿಷ್ಟ ಪಂಗಡ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಜೆಡಿಎಸ್ ನಿಜಕ್ಕೂ ಮಾದರಿಯಾಗಿದೆ. ಸೋಲು-ಗೆಲುವನ್ನು ಪಕ್ಕಕ್ಕಿಟ್ಟು ಒಮ್ಮೆ ಇತರೆ ಪಕ್ಷಗಳೂ ಈ ಪಟ್ಟಿಯನ್ನು ನೋಡುವುದು ಒಳಿತು.
ಒಟ್ಟಾರೆಯಾಗಿ ಹಾಲಿ ವಿಧಾನ ಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 36 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡಕ್ಕೆ ಮೀಸಲು ಕಾಯ್ದಿರಿಸಲಾಗಿದೆ, ಆದರೆ ಜೆಡಿಎಸ್ ಹೆಚ್ಚುವರಿಯಾಗಿ 10 ಸಾಮಾನ್ಯ ಕ್ಷೇತ್ರಗಳಲ್ಲಿ 6 ಪರಿಶಿಷ್ಟ ಪಂಗಡ, 4 ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ದಲಿತರಿಗೆ ಪ್ರಾಧಾನ್ಯತೆ ನೀಡಿದೆ.

ಇದು ಮತ್ತಷ್ಟು ಶ್ಲಾಘನೀಯವಾಗುತ್ತದೆ ಏಕೆಂದರೆ:
ಹಾಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಿಠ್ಕಲ್ ಮೀಸಲು ಕ್ಷೇತ್ರದಿಂದ ಸತತ 8 ಬಾರಿ ಜಯ ದಾಖಲಿಸಿದ್ದಾರೆ. ಆದರೆ ಆ ಮೀಸಲು ಕ್ಷೇತ್ರವು ಪುನರ್ ವಿಂಗಡಣೆ ವೇಳೆ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿಬಿಟ್ಟಿತು.
ಆದರೆ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ತಮಗೆ ರಾಜಕೀಯ ಭೂಮಿಕೆ ನೀಡಿದ್ದ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದೇ ತಡ ಅಲ್ಲಿಂದ ಕಾಲ್ಕಿತ್ತರು! ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಖರ್ಗೆ ಸಾಹೇಬರು ಅಲ್ಲಿಯೇ ಚುನಾವಣೆಗೆ ನಿಲ್ಲುವ ಧೈರ್ಯ ತೋರದಿರುವುದು ವಿಪರ್ಯಾಸವೇ ಸರಿ.

10 ಪರಿಶಿಷ್ಟ ಅಭ್ಯರ್ಥಿಗಳು ಯಾರೆಂದರೆ
ಕ್ಷೇತ್ರಗಳು -ಅಭ್ಯರ್ಥಿ -ಜಾತಿ
1. ಗಾಂಧಿನಗರ - ಸುಭಾಷ್ ಭರಣಿ - ಪರಿಶಿಷ್ಟ ಜಾತಿ
2. ಕೃಷ್ಣರಾಜ - ಹೆಚ್ ವಾಸು - ಪರಿಶಿಷ್ಟ ಜಾತಿ
3. ಶಿಗ್ಗಾಂವ್ - ಟಿಎನ್ ಸುಮಂಗಲ ಕಡಪ - ಪರಿಶಿಷ್ಟ ಜಾತಿ
4. ಹೊಸದುರ್ಗ - ಮಲ್ಲೇಶ್ ನಾಯಕ್ - ಪರಿಶಿಷ್ಟ ಜಾತಿ
5. ವರುಣ - ಚಲುವರಾಜು ನಾಯಕ್ - ಪರಿಶಿಷ್ಟ ಪಂಗಡ
6 ಹಾನಗಲ್ - ಮೋಹನ್ ಕುಮಾರ್ - ಪರಿಶಿಷ್ಟ ಪಂಗಡ
7. ಚನ್ನಗಿರಿ - ರಮೇಶ್ ನಾಯಕ್ - ಪರಿಶಿಷ್ಟ ಪಂಗಡ
8. ಸವದತ್ತಿ - ಡಿಬಿ ನಾಯಕ್ - ಪರಿಶಿಷ್ಟ ಪಂಗಡ
9. ಹಿರೇಕೆರೂರು - ಡಿ.ಎಂ ಸಾಲಿ - ಪರಿಶಿಷ್ಟ ಪಂಗಡ
10. ದಾವಣಗೆರೆ - ಉತ್ತರ ದಾಸ್ ಕರಿಯಪ್ಪ - ಪರಿಶಿಷ್ಟ ಪಂಗಡ

ಸಿಎಂ ಶೆಟ್ಟರ್ ವಿರುದ್ಧ ವಿಕಲಚೇತನ ಅಭ್ಯರ್ಥಿ
ಕುತೂಹಲಕಾರಿ ಸಂಗತಿಯೆಂದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸ್ಪರ್ಧಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಶೆಟ್ಟರ್ ಅವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಪಕ್ಷವು ತಬ್ರೆಜ್ ಎಂಬ ಅಂಗವಿಕಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಮಹಿಳೆಯರೂ 10 ಮಂದಿ ಇದ್ದಾರೆ!:
1. ಶ್ವೇತ - ಮಲ್ಲೇಶ್ವರಂ
2. ಹೇಮಲತಾ ಸುರೇಶ್ ರಾಜ್ - ಸಿವಿ ರಾಮನ್ ನಗರ
3. ಕನ್ಯಾಕುಮಾರಿ - ವಿಜಯನಗರ
4. ಅನಿತಾ ಕುಮಾರಸ್ವಾಮಿ - ಚನ್ನಪಟ್ಟಣ
5.ರೇಷ್ಮಾ ಪಡ್ನೇಕರ್ - ದೇವರ ಹಿಪ್ಪರಗಿ
6. ಡಾ. ಸುಮಂಗಲ ಕಡಪ - ಶಿಗ್ಗಾಂವ್
7. ಶಾರದ ಪೂರ್ಯ ನಾಯಕ್ - ಶಿವಮೊಗ್ಗ ಗ್ರಾಮಾಂತರ
8. ರಾಜಶ್ರೀ ಹೆಗಡೆ - ಬೆಳ್ತಂಗಡಿ
9. ಪರಿಮಳ ನಾಗಪ್ಪ - ಹನೂರು
10. ಶ್ರದ್ಧಾ ಧರ್ಮರಾಜ್ - ಬೆಳಗಾವಿ ಉತ್ತರ

ಜೆಡಿಎಸ್ ಜಾತಿವಾರು ಅಭ್ಯರ್ಥಿಗಳು ಹೀಗಿದ್ದಾರೆ:
ಪರಿಶಿಷ್ಟ ಜಾತಿ/ಪಂಗಡ - 61
ಮುಸ್ಲಿಂ - 20
ಕುರುಬರು - 13
ಕ್ರೈಸ್ತರು - 1
ಬ್ರಾಹ್ಮಣರು - 5
ಲಿಂಗಾಯತರು - 44
ಒಕ್ಕಲಿಗರು - 50
ರೆಡ್ಡಿಗಳು - 6
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications