ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ನಾಯಕರೇ ಟಾರ್ಗೆಟ್: ಡಿಸಿಎಂ ಅಶೋಕ್

By Srinath
|
Google Oneindia Kannada News

bangalore-car-blasts-bjp-leaders-targetted-dcm-r-ashok
ಬೆಂಗಳೂರು, ಎ.17: ರಾಜಧಾನಿಯಲ್ಲಿ ನಡೆದಿರುವ ಸ್ಫೋಟವು ಭಯೋತ್ಪಾದನೆ ಚಟುವಟಿಕೆಯಾಗಿದೆ. ಇದು ಅತ್ಯಂತ ಹೇಯ ಎಂದು ರಾಜ್ಯ ಗೃಹ ಸಚಿವ, ಉಪ ಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ.

ಚುನಾವಣೆ ನಿಮಿತ್ತ ಪಕ್ಷದ ರಾಷ್ಟ್ರೀಯ ವರಿಷ್ಠರೂ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆಡಳಿತಾರೂಢ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನೇ ಗುರಿಯಾಗಿಸಿಕೊಂಡು ಈ ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.

ಅಶೋಕ್ ಹೇಳಿದ್ದೇನು?:
* ಜನ ಈ ದಾಳಿಯಿಂದ ವಿಚಲಿತರಾಗಬಾರದು. ಗೃಹ ಸಚಿವನಾಗಿ ಧೈರ್ಯ ತುಂಬುವೆ. ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಲಾಗಿದೆ.
* ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ 11 ಮಂದಿ ಪೊಲೀಸರು ಸೇರಿದ್ದಾರೆ.
* ಪಾತಕಿಗಳು ಎಷ್ಟೇ ಬಲಾಢ್ಯರಾಗಿದ್ದರೂ ಅವರನ್ನು ಹಿಡಿಯಲಾಗುವುದು.
* ಯಾವ ಸಂಘಟನೆಯೂ ಹೊಣೆ ಹೊತ್ತಿಲ್ಲ.
* ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

IED ಬಳಕೆ: ಸುಧಾರಿತ ಸ್ಫೋಟ ತಂತ್ರಜ್ಞಾನ ಸಾಧನ (IED) ಬಳಕೆಯಾಗಿದೆ. ಸುಮಾರು ಅರ್ಧ ಕೆಜಿಯಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಔರಾದಕರ್ ಇದೀಗತಾನೆ ತಿಳಿಸಿದ್ದಾರೆ.

English summary
BJP leaders were targetted in Banglore Car blasts said DCM and Home Minister R Ashok. Condemning the terror act Ashok said security has been beefed up. And people should not get panic and remain calm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X