ಬಿಜೆಪಿ ನಾಯಕರೇ ಟಾರ್ಗೆಟ್: ಡಿಸಿಎಂ ಅಶೋಕ್
ಚುನಾವಣೆ ನಿಮಿತ್ತ ಪಕ್ಷದ ರಾಷ್ಟ್ರೀಯ ವರಿಷ್ಠರೂ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆಡಳಿತಾರೂಢ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನೇ ಗುರಿಯಾಗಿಸಿಕೊಂಡು ಈ ಭಯೋತ್ಪಾದಕ ದಾಳಿ ನಡೆಸಲಾಗಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಘಟನಾ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಶೋಕ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.
ಅಶೋಕ್
ಹೇಳಿದ್ದೇನು?:
*
ಜನ
ಈ
ದಾಳಿಯಿಂದ
ವಿಚಲಿತರಾಗಬಾರದು.
ಗೃಹ
ಸಚಿವನಾಗಿ
ಧೈರ್ಯ
ತುಂಬುವೆ.
ಕೇಂದ್ರ
ಸರಕಾರಕ್ಕೆ
ಮಾಹಿತಿ
ನೀಡಲಾಗಿದೆ.
*
ದಾಳಿಯಲ್ಲಿ
16
ಮಂದಿ
ಗಾಯಗೊಂಡಿದ್ದಾರೆ.
ಅದರಲ್ಲಿ
11
ಮಂದಿ
ಪೊಲೀಸರು
ಸೇರಿದ್ದಾರೆ.
*
ಪಾತಕಿಗಳು
ಎಷ್ಟೇ
ಬಲಾಢ್ಯರಾಗಿದ್ದರೂ
ಅವರನ್ನು
ಹಿಡಿಯಲಾಗುವುದು.
*
ಯಾವ
ಸಂಘಟನೆಯೂ
ಹೊಣೆ
ಹೊತ್ತಿಲ್ಲ.
*
ರಾಜ್ಯದಲ್ಲಿ
ಕಟ್ಟೆಚ್ಚರ
ವಹಿಸಲಾಗಿದೆ.
IED ಬಳಕೆ: ಸುಧಾರಿತ ಸ್ಫೋಟ ತಂತ್ರಜ್ಞಾನ ಸಾಧನ (IED) ಬಳಕೆಯಾಗಿದೆ. ಸುಮಾರು ಅರ್ಧ ಕೆಜಿಯಷ್ಟು ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಔರಾದಕರ್ ಇದೀಗತಾನೆ ತಿಳಿಸಿದ್ದಾರೆ.