ಚಿತ್ರಗಳು: ಬೆಂಗಳೂರು ಸ್ಫೋಟ, ಬೋಸ್ಟನ್ ಬಾಂಬ್
ಬೆಂಗಳೂರು, ಏ.17: ಬೋಸ್ಟನ್ ನಲ್ಲಿ ಸಂಭ್ರಮ ಹಾಳು ಮಾಡಿದ ಬಾಂಬ್ ಸ್ಫೋಟ, ಇಂಡಿಯನ್ ಪ್ರಿಮಿಯರ್ ಲೀಗ್ ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪಂದ್ಯ ಟಾರ್ಗೆಟ್ ಆಗಿತ್ತೆ? ಕರ್ನಾಟಕದ ಗೃಹ ಸಚಿವ ಆರ್ ಅಶೋಕ್ ಅವರು ದಾಳಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಬಿಜೆಪಿ ನಾಯಕರೇ ದಾಳಿ ಟಾರ್ಗೆಟ್ ಎಂದಿದ್ದಾರೆ.
ಏ.17, 2010ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸರಣಿ ಸ್ಫೋಟ ಸಂಭವಿಸಿದ ಕರಾಳ ನೆನಪು ಮಾಸುವ ಮುನ್ನವೇ ಅದೇ ದಿನಾಂಕದಂದು ಏ.17, 2013 ರಂದು ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟ ಸಂಭವಿಸಿರುವುದು ಕಾಕತಾಳೀಯವೋ ಪೂರ್ವ ನಿಯೋಜಿತವೋ ಗೊತ್ತಿಲ್ಲ.
ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಬೋಸ್ಟನ್ ಬಾಂಬ್ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದು, ಸಾರ್ವಜನಿಕ ಕ್ರೀಡಾಕೂಟಕ್ಕೆ ಬಾಂಬ್ ಎಸೆದಿದ್ದು ವಿಶ್ವದ ದೊಡ್ಡಣ್ಣನಿಗೆ ಎಚ್ಚರಿಕೆ ನೀಡಿದೆ. ಅದೇ ರೀತಿ ಇಲ್ಲೂ ಕೂಡಾ ಚುನಾವಣೆ ಕಾವು ಏರುತ್ತಿದ್ದಂತೆ ಬಾಂಬ್ ತಣ್ಣಗೆ ಹೊಗೆಯಾಡಿದೆ. ಅದೃಷ್ಟವಶಾತ್ ಗಾಯಗೊಂಡಿರುವ 16ಕ್ಕೂ ಹೆಚ್ಚು ಜನ ಪ್ರಾಣಾಪಯದಿಂದ ಪಾರಾಗಿದ್ದಾರೆ. ಬಾಂಬ್ ಸ್ಫೋಟದ ಚಿತ್ರಗಳು ನಿಮ್ಮ ಮುಂದೆ

ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ
ಮೊದಲಿಗೆ ಕಾರಿನಲ್ಲಿರುವ ಗ್ಯಾಸ್ ಸಿಲೆಂಡರ್ ಸ್ಫೋಟ ಎನ್ನಲಾಗಿತ್ತು. ನಂತರ ಇದು ತಮಿಳುನಾಡು ನೋಂದಣಿ ಇರುವ ಬೈಕ್ ಬಳಸಿ ಸ್ಫೋಟ ಮಾಡಿರುವುದು ದೃಢಪಟ್ಟಿದೆ. ಈಗ ಇಐಡಿ ಬಳಸಿ ರಿಮೋಟ್ ನಿಂದ ಸ್ಫೋಟಿಸಿರುವ ಮಾಹಿತಿ ಹೊರಬಿದ್ದಿದೆ.

ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ
ಬೆಂಗಳೂರಿನ ಹಳೆಯ ಬಡಾವಣೆ ಮಲ್ಲೇಶ್ವರಂ ಯನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆ ಎದ್ದಿದೆ. ಬಿಜೆಪಿ ಕಚೇರಿ ಟಾರ್ಗೆಟ್ ಎಂದು ಮೇಲ್ನೋಟಕ್ಕೆ ದೃಢಪಟ್ಟಿದ್ದರೂ ಪೊಲೀಸರು ಟಾರ್ಗೆಟ್ ಆಗಿದ್ದು 11 ಜನ ಕೆಎಸ್ ಆರ್ ಪಿ ಅಧಿಕಾರಿಗಳು ಆಸ್ಪತ್ರೆ ಸೇರಿದ್ದಾರೆ.

ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ
ಸಾಮಾಜಿಕ ಜಾಲ ತಾಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಶಕೀಲ್ ಅಹ್ಮದ್ ಅವರು ಕೆಟ್ಟದಾಗಿ ಟ್ವೀಟ್ ಮಾಡಿ ಬಿಜೆಪಿಗೆ ಇದು ವರದಾನವಾಗಲಿದೆ ಎಂದಿದ್ದಾರೆ. ಶಕೀಲ್ ರಂತೆ ಇನ್ನು ಕೆಲವರು ಸ್ಫೋಟದ ಬಗ್ಗೆ ಅಪಹಾಸ್ಯ ಮಾಡಿ ರಾಜಕೀಯ ಲಾಭದ ಬಗ್ಗೆ ಮಾತನಾಡಿರುವುದು ತೀವ್ರ ಖಂಡನೆ ಒಳಗಾಗಿದೆ. ಹೆಚ್ಚಿನ ವಿವರ ಇಲ್ಲಿ ಓದಿ

ಚಿತ್ರಗಳಲ್ಲಿ ಬೆಂಗಳೂರು ಸ್ಫೋಟ
ಸ್ವತಃ ವೈದ್ಯರಾಗಿರುವ ಸ್ಥಳೀಯ ಬಿಜೆಪಿ ಶಾಸಕ ಅಶ್ವಥನಾರಾಯಣ ಅವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಗಮನಿಸಿದ್ದಾರೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿರುವ ಗಾಯಾಳುಗಳ ವಿಚಾರಣೆಗೆ ತೆರಳಿದಿದ್ದಾರೆ. ಚಿತ್ರದ ಮೇಲ್ಭಾಗದಲ್ಲಿ ಸ್ಫೋಟಕ್ಕೆ ಬಳಸಿದ ಬೈಕ್ ನೋಡಬಹುದು.

ಬೋಸ್ಟನ್ ದುರಂತ ದೃಶ್ಯ
ಬಿಗ್ ಪ್ರೀಚ್ ರನ್ನಿಂಗ್ ಕಂಯ ಕರೆನ್ ಕಾಯ್ ಅವರು ಬೋಸ್ಟನ್ ದುರಂತ ಸಂತ್ರಸ್ತರನು ಸಂತೈಸುತ್ತಿದ್ದಾರೆ.

ಪಾಕಿಸ್ತಾನ ದುರಂತ ದೃಶ್ಯ
ಪೇಶಾವರ್: ಪಾಕಿಸ್ತಾನದಲ್ಲೂ ಈಗ ಚುನಾವಣಾ ವೈಷಮ್ಯ ಹೆಚ್ಚುತ್ತಿದ್ದು, ಆತ್ಮಾಹುತಿ ದಳ ಕಾರು ದಾಳಿ ನಡೆಸಿ ತಾಲಿಬಾನ್ ವಿರೋಧಿ ಪಕ್ಷಗಳ ವಿರುದ್ಧ ಬಾಂಬ್ ದಾಳಿ ನಡೆಸಲಾಗಿದೆ.

ಬೋಸ್ಟನ್ ದುರಂತ ದೃಶ್ಯ
ಬೋಸ್ಟನ್ ಮ್ಯಾರಥ್ಯಾನ್ ಬಾಂಬ್ ಸ್ಫೋಟದಲ್ಲಿ ಜೀವ ಕಳೆದುಕೊಂಡ 8 ವರ್ಷದ ಬಾಲಕ ಮಾರ್ಟಿನ್ ಸ್ಮರಣೆಯಲ್ಲಿ ಮೊಂಬತ್ತಿ ಹಿಡಿದು ಮೆರವಣಿಗೆ

ಬೆಂಗಳೂರು ಬಾಂಬ್ ಸ್ಫೋಟ
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಬಳಿ ಕಾರಿಗೆ ಬೆಂಕಿ ಹತ್ತಿಕೊಂಡಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್ ನಲ್ಲಿ ಚಿತ್ರಿಸಿ ಕಳಿಸಿದ್ದಾರೆ.

ಬೆಂಗಳೂರು ಬಾಂಬ್ ಸ್ಫೋಟ
ರಾಜಕೀಯ ಮುಖಂಡರಿಗೆ ರಕ್ಷಣೆ ನೀಡಲು ಬಂದು ಗಾಯಗೊಂಡ ಕೆಎಸ್ ಆರ್ ಪಿ ಪೊಲೀಸರು ಇದ್ದ ವಾಹನ ಜಖಂಗೊಂಡಿದೆ. ಹಿರಿಯ ಅಧಿಕಾರಿಗಳು ಹೆಚ್ಚಿನ ನೆರವಿಗಾಗಿ ಫೋನ್ ಕರೆಯಲ್ಲಿ ವ್ಯಸ್ತರಾಗಿದ್ದಾರೆ.

ಬೆಂಗಳೂರು ಬಾಂಬ್ ಸ್ಫೋಟ
ಇದು ಸ್ಫೋಟಕ್ಕೆ ಬಳಸಿದ ಬೈಕ್ ಅಲ್ಲ. ಕೆಎಸ್ ಆರ್ ಪಿ ವಾಹನದ ಬಳಿ ನಿಲ್ಲಿಸಲಾಗಿದ್ದ ಮತ್ತೊಂದು ವಾಹನ ಕೂಡಾ ಜಖಂ ಆಗಿದೆ.

ಬೋಸ್ಟನ್ ದುರಂತ
ಬೋಸ್ಟನ್ ದುರಂತದ ನಂತರ ತನಿಖಾ ಸಂಸ್ಥೆ ಎಫ್ ಬಿಐ ಕೈಗೆ ಸಿಕ್ಕ ದ್ವಂಸಗೊಂಡ ಫ್ರೆಶರ್ ಕುಕ್ಕರ್

ಬೆಂಗಳೂರು ಸ್ಪೋಟ ಗಾಯಾಳು
ಬಾಂಬ್ ಸ್ಫೋಟ ಘಟನಾ ಸ್ಥಳಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ಅರವಿಂದ ಲಿಂಬಾವಳಿ ಭೇಟಿ ನೀಡಿದ್ದಾರೆ

ಬೆಂಗಳೂರು ಸ್ಪೋಟ ಗಾಯಾಳು
ಎಲ್ಲಾ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ

ಬೆಂಗಳೂರು ಸ್ಪೋಟ
ರಾಜ್ಯದ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಕಮ್ಯಾಂಡ್ ಪಡೆ ನಿಯೋಜಿಸಲಾಗಿದೆ

ಬೆಂಗಳೂರು ಸ್ಫೋಟ ಚಿತ್ರ
ಮಲ್ಲೇಶ್ವರಂ ಬಳಿ ಸ್ಫೋಟಗೊಂಡು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬೈಕಿನ ಅವಶೇಷ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications