ಆಡಳಿತಾರೂಢ ಪಕ್ಷಕ್ಕೆ ಇನ್ನೂ ಅಭ್ಯರ್ಥಿಗಳ ಕೊರತೆ

ಬಿಟಿಎಂ ಲೇಔಟ್, ಯಶವಂತಪುರ, ಕಲಘಟಗಿ, ಮುದೋಳ, ನಾಗಠಾಣ, ದೇವನಹಳ್ಳಿ ಸೇರಿದಂತೆ ಇನ್ನೂ 12 ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಪ್ರಕಟಿಸಬೇಕಿದೆ. ಆದರೆ ಅದು ಕಗ್ಗಂಟಾಗಿ ಉಳಿದಿದೆ. ಪಟ್ಟಿ ಕಟ್ಟಲು ದೆಹಲಿಯಿಂದ ಹಾರಿಬಂದ ಅರುಣ್ ಜೇಟ್ಲಿಗೂ ಅದು ಸಾಧ್ಯವಾಗದೆ ಉಳಿದ ಹೆಸರುಗಳನ್ನು ನೀವೇ ಪ್ರಕಟಿಸಿಕೊಳ್ಳಿ ಎಂದು ಹೇಳಿ ಹೊರಟುಹೋಗಿದ್ದಾರೆ.
ಜತೆಗೆ, ಒಂದಿಬ್ಬರಾದರೂ ಕಾಂಗ್ರೆಸ್/ಜೆಡಿಎಸ್ ನಿಂದ ವಲಸೆ ಬರುವ ಆಸೆ/ನಿರೀಕ್ಷೆಯಲ್ಲೂ ಇದೆ. ದೇವನಹಳ್ಳಿಯಿಂದ ಜಿ. ಚಂದ್ರಣ್ಣ ಕಣಕ್ಕಿಳಿಯುವ ಸಾಧ್ಯತೆಯಿದ್ದರೆ ಗೋವಿಂದ ಕಾರಜೋಳ ಮುಧೋಳದಿಂದ ನಾಮಪತ್ರ ಸಲ್ಲಿಸಲು ಸನ್ನದ್ಧರಾಗಿದ್ದಾರೆ.
ಆಡ್ವಾಣಿ ಅವರ ಮಾತಿಗೆ ಕಟ್ಟುಬಿದ್ದು ಹೆಬ್ಬಾಳ, ಮಾಲೂರು ಮತ್ತು ಕೆಜಿಎಫ್ ಕ್ಷೇತ್ರಗಳಲ್ಲಿ ಕಳಂಕಿತ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಹೋದರೂ ಆ ಶಾಸಕರ ವಿಶ್ವಾಸ ಉಳಿಸಿಕೊಳ್ಳಲು ಅಳಿಯ ಅಲ್ಲ ಮಗಳ ಗಂಡ ಎಂಬಂತೆ ಆಯಾ ಶಾಸಕರು ಸೂಚಿಸುವಂತೆ ಅವರ ಕುಟಂಬಸ್ಥರಿಗೆ ಟಿಕೆಟ್ ನೀಡಬೇಕು ಎಂಬ ಆಲೋಚನೆಯೂ ರಾಜ್ಯ ಬಿಜೆಪಿ ಮಂದಿಗೆ ಇದೆ. ಆದರೆ ಮಾಲೂರಿನ ಕೃಷ್ಣಯ್ಯ ಶೆಟ್ಟರು ಗೋವಿಂದಾ ಅಂತ ಅದಾಗಲೇ ಬಿಜೆಪಿಗೆ ರಾಜೀನಾಮೆ ಬಿಸಾಕಿ, ಸ್ವತಂತ್ರರಾಗಿದ್ದಾರೆ.
ಆದರೆ ಕಟ್ಟಾ ಮತ್ತು ಸಂಪಂಗಿ ಪರಿಸ್ಥಿತಿ ಹಾಗಿಲ್ಲ. ಸಂಪಂಗಿ ಅವರ ತಾಯಿ ರಾಮಕ್ಕ ಅದಾಗಲೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿಯಾಗಿದೆ. ಜತೆಗೆ ಇವರಿಬ್ಬರೂ ಪಕ್ಷೇತರರಾಗಿ ಗೆದ್ದುಬಂದ ಮೇಲೆ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬ ವಾಗ್ದಾನವನ್ನೂ ನೀಡಲಾಗಿದೆ ಎಂಬ ಮಾತೂ ಕೇಳಿಬಂದಿದೆ.
ಇನ್ನು ಬಿಟಿಎಂಗೆ ನಾರಾಯಣ ರಾಜು ಮತ್ತು ಯಶವಂತಪುರಕ್ಕೆ ಶ್ರೀನಿವಾಸ್ ಅಥವಾ ಚಕ್ರಪಾಣಿ ಅವರನ್ನು ನಿಲ್ಲಿಸುವ ಮಾತೂ ಕೇಳಿಬರುತ್ತಿದೆ. ಆದರೆ ಉಳಿದ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ವಿರೋಧ ಪಕ್ಷಗಳಲ್ಲಿ ಕಾಣಿಸಿಕೊಂಡಿರುವುದರಿಂದ ಕೊನೆಯ ಕ್ಷಣದಲ್ಲಿ ಅರ್ಹ ಅಭ್ಯರ್ಥಿಗಳು ದೊರೆಯದೆ ಆಡಳಿತಾರೂಢ ಪಕ್ಷ ಪರಿತಪಿಸುವಂತಾಗಿದೆ. ಆದರೆ ಯಾವುದಕ್ಕೇ ಆಗಲಿ ಇನ್ನು ಕೇವಲ 2 ದಿನ ಬಾಕಿಯಿರುವುದರಿಂದ ಪಕ್ಷದ ತಿಣುಕಾಟ ಹೆಚ್ಚಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications