ಚಿತ್ರ ಸುದ್ದಿ: ಹಬ್ಬ, ಕ್ರಿಕೆಟ್, ರಾಜಕೀಯ..ಇನ್ನಷ್ಟು
ಬೆಂಗಳೂರು, ಏ.15: ಇಂಡಿಯನ್ ಪ್ರಿಮಿಯರ್ ಲೀಗ್ ನ ಬಿಸಿ ಎಲ್ಲಾ ಕಡೆ ಹಬ್ಬುತ್ತಿರುವಂತೆಯೇ, ಕರ್ನಾಟಕದಲ್ಲಿ ಚುನಾವಣಾ ಕಾವು ಏರುತ್ತಿದೆ. ದೇಶದ ಎಲ್ಲೆಡೆ ವಿವಿಧ ಬಗೆಯಲ್ಲಿ ಹಬ್ಬ ಆಚರಣೆ ನಡೆಯುತ್ತಿದೆ. ಅಲ್ಲಲ್ಲಿ ಅಪಘಾತಗಳು, ರಾಜಕೀಯ ಮುಖಂಡರ ಫೋಟೋ ಪೋಸ್ ಗಳ ನಡುವೆ ಪ್ರಾಣ್ ಅವರ ಅಪರೂಪದ ಚಿತ್ರ, ಕಳೆದವಾರ ಶಿರಡಿ ದೇಗುಲದ ದೃಶ್ಯ, ಫ್ಯಾಷನ್ ಲೋಕದ ಆಗು ಹೋಗು ತಿಳಿಸುವ ದೃಶ್ಯಾವಳಿ ನಿಮ್ಮ ಮುಂದಿದೆ.
ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಸಮಾರಂಭ ಚಿತ್ರಗಳು, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. ಕಳೆದ ಮುರ್ನಾಲ್ಕು ದಿನಗಳ ಪ್ರಮುಖ ಹಾಗೂ ಕುತೂಹಲ ಭರಿತ ಚಿತ್ರಗಳನ್ನು ನೀವು ನೋಡಬಹುದು.

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ನವದೆಹಲಿ : ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ತುತ್ತು ನೀಡುತ್ತಿರುವ ಬಾಲಕಿ. ಜೊತೆಯಲ್ಲಿ ದೆಹಲಿ ಬಿಜೆಪಿ ಅಧ್ಯಕ್ಷ ವಿಜಯ್ ಗೋಯಲ್ ಹಾಗೂ ಸುಷ್ಮಾ ಸ್ವರಾಜ್ ಅವರನ್ನು ಕಾಣಬಹುದು. ಬುರಾರಿಯಲ್ಲಿ ಅಂಬೇಡ್ಕರ್ ಜಯಂತಿ ಪ್ರಯಕ್ತ ಸಾಮೂಹಿಕ ಊಟದಲ್ಲಿ ಬಿಜೆಪಿ ನಾಯಕರು

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಐಪಿಎಲ್ 6: ಕಿಂಗ್ಸ್ XI ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಫೋಟೋ ತೆಗೆಯುವ ಚಿತ್ರ

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಬೆಂಗಳೂರು: ಇನ್ಫೋಸಿಸ್ ಟೆಕ್ನಾಲಜೀಸ್ ಸಿಇಒ ಎಸ್ ಡಿ ಶಿಬುಲಾಲ್ ಹಾಗೂ ಸಿಎಫ್ ಒ ರಾಜೀವ್ ಬನ್ಸಾಲ್ ಅವರು ಹೊಸ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದ ನಂತರ ಕಾಣಿಸಿದ್ದು ಹೀಗೆ. PTI Photo by Shailendra Bhojak

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಕೋಲ್ಕತ್ತಾ: ಈಡನ್ ಗಾರ್ಡನ್ ನಲ್ಲಿ ನಡೆದ ಕೆಕೆಆರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಗನಕ್ಕೆ ಹಾರಿದ ಚೀರ್ ಲೀಡರ್ಸ್. PTI Photo by Ashok Bhaumik

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಮುರ್ಷಿದಾಬಾದ್: ಚರಕ ಹಬ್ಬದ ಅಂಗವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂದೂ ಭಕ್ತಾದಿಗಳು ಕಸರತ್ತಿನ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿರುವುದು

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಒಂದು ಹಳೆಯ ಸ್ಮರಣೀಯ ಚಿತ್ರ: ಹಿರಿಯ ನಟ ಪ್ರಾಣ್ ಹಾಗೂ ಮನೋಜ್ ಕುಮಾರ್ ಅವರು ದಾದಾ ಸಾಹೇಬ್ ಫಾಲ್ಕೆ ಅವರ 141ನೇ ಜನ್ಮದಿನೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ (2010) ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ..ಪ್ರಾಣ್ ಅವರಿಗೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಎಲ್ಲರಿಗೂ ಗೊತ್ತಿದೆ.

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಶಿರಡಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಸೂರತ್: ಮುಸ್ಲಿಮ್ ಹಾಗೂ ಮರಾಠಿ ಸಮುದಾಯದ ಮಹಿಳೆಯರು ಗುಡಿ ಪಡ್ವಾ ಹಬ್ಬವನ್ನು ಒಟ್ಟಿಗೆ ಆಚರಿಸಿದ್ದು ಹೀಗೆ

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಅಯೋಧ್ಯಾ: ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಹಿಂದೂ ಸಭೆ ಸೇರಿಸಿ ಧಾನ್ಯಸ್ಥರಾಗಿರುವ ಭಂಗಿ

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಕೊಯಮತ್ತೂರು: ಈ ಪ್ರದೇಶದ ತಮಿಳರ ಸಾಂಪ್ರದಾಯಿಕ ನೃತ್ಯ ಶೈಲಿಯ ಅಭ್ಯಾಸದಲ್ಲಿ ನೃತ್ಯ ಪಟುಗಳು

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಹಾಗೂ ಅವರ ಪತ್ನಿ ಸುಬ್ಬಲಕ್ಷ್ಮಿ ಅವರು ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ

ಇತ್ತೀಚಿನ ಚಿತ್ರಗಳಲ್ಲಿ ಸುದ್ದಿಗಳು
ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಅಭರಣ ಉತ್ಸವದ ಅಂಗವಾಗಿ ನಟಿ ಶ್ರೀಯಾ ಸರನ್ ಜೊತೆ ವಿನ್ಯಾಸಗಾರ್ತಿ ಹಾಗೂ ಸಹ ಮಾಡೆಲ್
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications