ಅರ್ಚಕನಿಂದ ಮಹಿಳೆ ಕಿಡ್ನಾಪ್ ಅತ್ಯಾಚಾರ ಮಾರಾಟ

Woman kidnapped raped sold by priest
ಛಾತರಪುರ (ಮಧ್ಯಪ್ರದೇಶ), ಏ. 3 : ಐದು ವರ್ಷ ಮಗುವಿರುವ ಈ ವಿವಾಹಿತ ಮಹಿಳೆಯ ಪಾಡು ಯಾರಿಗೂ ಬೇಡ. ದೇವಸ್ಥಾನದ ಅರ್ಚಕ ಮತ್ತು ಆತನ ಚೇಲಾನಿಂದ ಅಪಹರಣ ಮತ್ತು ಅತ್ಯಾಚಾರಕ್ಕೊಳಗಾಗಿ ಆಕೆ ಮಾರಾಟವಾಗಿದ್ದಲ್ಲದೆ, ಕೊಂಡವರಿಂದಲೂ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ.

ಛಾತರಪುರ ಜಿಲ್ಲೆಯ ಕವಾರ್ ಗ್ರಾಮದ ನಿವಾಸಿಯಾಗಿರುವ 33 ವರ್ಷದ ಮಹಿಳೆಯನ್ನು ಅದೇ ಗ್ರಾಮದ ಅರ್ಚಕ ಬಾಲ ಪ್ರಸಾದ್ ಶುಕ್ಲಾ ಎಂಬಾತ ಮಗುವಿನ ಸಮೇತ ಕಿಡ್ನಾಪ್ ಮಾಡಿದ್ದ. ಈ ಘಟನೆ ನಡೆದಿರುವುದು ಮಾ.17ರಂದಾದರೂ ಆಕೆ ಸಿಕ್ಕಿರುವುದು ಏ.1ರಂದು ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಅರ್ಚಕ ಮತ್ತು ಸಹಚರ ದೇವೇಂದ್ರ ಶುಕ್ಲಾ ಆಕೆಯನ್ನು ಅಪಹರಿಸಿ, ಪತರ್ವ ಎಂಬ ಗ್ರಾಮದಲ್ಲಿ ಸಾಮೂಹಿಕವಾಗಿ ಬಲಾತ್ಕರಿಸಿ 40 ಸಾವಿರ ರು.ಗೆ ಮೂವರು ಸಹೋದರರಿಗೆ ಮಾರಾಟ ಮಾಡಿದ್ದಾರೆ. ಆ ಮೂವರು ಕಾಮುಕ ಸಹೋದರರಾದ ವಿಮಲೇಶ್ ಯಾದವ್, ಪಪ್ಪು ಯಾದವ್ ಮತ್ತು ವೀರೇಂದ್ರ ಯಾದವ್ ಆಕೆಯನ್ನು ಪಿಪ್ರಾ ಎಂಬ ಗ್ರಾಮದಲ್ಲಿ ಕೂಡಿಟ್ಟು ನಿರಂತರವಾಗಿ ಬಲಾತ್ಕರಿಸಿದ್ದಾರೆ.

ಮಹಿಳೆ ಪಿಪ್ರಾ ಗ್ರಾಮದಲ್ಲಿರುವುದು ಆಕೆಯ ಸಹೋದರನ ಗಮನಕ್ಕೆ ಬಂದಿದೆ. ಪೊಲೀಸರ ದಾಳಿಯ ಸುಳಿವು ಸಿಗುತ್ತಿದ್ದಂತೆ ಎಲ್ಲ ಐವರು ಪರಾರಿಯಾಗಿದ್ದಾರೆ. ಎಲ್ಲ ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ವ್ಯಾಪಕ ಬಲೆ ಬೀಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+