ಬಿಜೆಪಿಯಿಂದ ಕೆಜೆಪಿಗೆ ಹಾರಿದ ವಿ ಸೋಮಣ್ಣ

ಖಾಸಗಿ ಸುದ್ದಿ ವಾಹಿನಿ ಈ ಬಗ್ಗೆ ಸಂಜೆ ಐದರ ವೇಳೆ ಪ್ರಸಾರ ಸುದ್ದಿಯಲ್ಲಿ 'ಕೆಜೆಪಿ ಸೇರಲಿರುವ ಸೋಮಣ್ಣ' ಎಂದು ವಿವರವಾಗಿ ಮಾಹಿತಿ ಹೊರ ಹಾಕಿದ್ದಾರೆ. ಸೋಮಣ್ಣ ಅವರಿಗೆ ಎಲ್ಲಿ ಟಿಕೆಟ್ ಸಿಕ್ಕಿದೆ ನೋಡುವ ಫ್ಲಾಶ್ ಬ್ಯಾಕ್ ಸ್ಟೋರಿಯ ಕೆಲವು ಪ್ಯಾರಾ ಓದಿ ಕೊಳ್ಳಿ
ಸೋಮಣ್ಣ ಕೆಜೆಪಿಗೆ ಬಂದರೆ ಖಂಡಿತಾ ಟಿಕೆಟ್ ಕೊಡ್ತೀನಿ' ಎಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಘೋಷಿಸಿದ ಸುದ್ದಿ ಹೊರಬಂದಿತು. ಏ. 1 ಅಥವಾ 2ರಂದು ಕೆಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಆ ವೇಳೆಗೆ ಸೋಮಣ್ಣ ಕೆಜೆಪಿ ಸೇರ್ಪಡೆ ನಿಕ್ಕಿಯಾದರೆ ಚಾಮರಾಜನಗರದ ಯಾವುದಾದರೊಂದು (ಹನೂರು?) ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಹರಿದಾಡಿತ್ತು.
ಆದರೆ, ಇದರ ಮುಂದುವರೆದ ಭಾಗದಲ್ಲಿ ನಡೆದಿದ್ದೇ ಬೇರೆ. ಸಚಿವ ಸೋಮಣ್ಣ ಅವರು ಹೆಣ್ಣು ಮಗಳೊಬ್ಬರ ಕಣ್ಣೀರಿಗೆ ಸೋತು ಹನೂರು ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರಂತೆ. ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಜನತೆಗೆ ತಕ್ಕಮಟ್ಟಿಗೆ ಚಿರಪರಿಚಿತರಾಗಿರುವ ಪರಿಮಳ ನಾಗಪ್ಪ ಅವರು ಕಣ್ಣೀರು ಹಾಕಿದ್ದೇ ತಡ ಸೋಮಣ್ಣ ಕರಗಿ 'ಈ ಕ್ಷೇತ್ರ ನೀನೆ ಇಟ್ಟುಕೊಳ್ಳಮ್ಮ' ಎಂದು ಹೇಳಿದ್ದರು.
ನಂತರ ಹನೂರು ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಎಸ್ಪಿ ಪಕ್ಷದ ಪರಿಮಳಾ ನಾಗಪ್ಪ ಅವರು ವಿಧ್ಯುಕ್ತವಾಗಿ ಜೆಡಿಎಸ್ ಸೇರಿದರು. ಯಡಿಯೂರಪ್ಪ ನೇತೃತ್ವದ ಕೆಜೆಪಿ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡು 5ನೇ ಬಾರಿ ಪಕ್ಷ ಬದಲಾಯಿಸಿದ್ದು ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಹೀಗಾಗಿ ಸೋಮಣ್ಣ ಅವರಿಗೆ ಹನೂರು ಕ್ಷೇತ್ರ ಮತ್ತೆ ಒಲಿದು ಬಂದಿದೆ.
ವಿಜಯನಗರ ಸಾಮ್ರಾಜ್ಯದ ಗೋವಿಂದರಾಜನಗರದಲ್ಲಿ ತನ್ನ ಮುಂದೆ ಬೆಳೆದ ಪ್ರಿಯಾಕೃಷ್ಣ ಎಂಬ ಕಾಂಗ್ರೆಸ್ಸಿನ ಶ್ರೀಮಂತ ಯುವ ನಾಯಕನ ವಿರುದ್ಧ ಮತ್ತೊಮ್ಮೆ ಸೋಲಿನ ರುಚಿ ಕಾಣುವ ಭೀತಿ ಕೂಡಾ ಸೋಮಣ್ಣ ಅವರಿಗೆ ಕಾಡುತ್ತಿದೆ ಎನ್ನಲಾಗಿದೆ. ಆದರೂ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಸೋಮಣ್ಣ ಅವರು ಸಿದ್ದ ಗಂಗಾ ಮಠಕ್ಕೆ ಹೋಗಿ ಬಂದ ಮೇಲೆ ಎಲ್ಲವೂ ಬದಲಾಗಿದೆ. ಮತ್ತೊಮ್ಮೆ ಯಡಿಯೂರಪ್ಪ ಅವರ ನೆರಳಾಗಿ ವೀರಶೈವ ನಾಯಕ ಸೋಮಣ್ಣ ಕಾಣಿಸಿಕೊಳ್ಳುವುದು ಖಚಿತವಾಗಿದೆ ಎಂದು ತಿಳಿದು ಬಂದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು?












Click it and Unblock the Notifications