ಗೋವಿಂದರಾಜನಗರ ರಾಜ ಸೋಮಣ್ಣ ಬಿಜೆಪಿಗೇ ಅಂಕಿತ

ಇದೇ ವೇಳೆ, ಹನೂರಿನ ತಾಯಿ ಪರಿಮಳಾ ಅವರು ದೂರವಾಣಿಯಲ್ಲಿ ಹರಿಸಿದ ಕಣ್ಣಿರ ಕೋಡಿಗೆ ಕರಗಿ ನೀರಾದ ಸೋಮಣ್ಣ 'ಇಲ್ಲಮ್ಮಾ, ಖಂಡಿತಾ ನಾಗಪ್ಪನಂತಹ ಸಜ್ಜನನಿಗೆ ಅನ್ಯಾಯ ಮಾಡೋಲ್ಲ. ಖುದ್ದು ಯಡಿಯೂರಪ್ಪನೇ ನನ್ನ ಮನೆ ಬಾಗಿಲಿಗೆ ಬಂದು 'ಹನೂರಿನಿಂದ ಸ್ಪರ್ಧಿಸು' ಎಂದು ರಾಜಾಜ್ಞೆ ಮಾಡಿದರೂ ನಾನು ಮಾತ್ರ ಖಂಡಿತಾ ನಿಮಗೆ ಅನ್ಯಾಯವಾಗುವಂತೆ ಹನೂರಿನಿಂದ ಸ್ಪರ್ಧಿಸೋಲ್ಲ' ಎಂದು ಅಭಯ ನೀಡಿರುವ ಬೆನ್ನಿಗೇ...
ನನ್ನ ಜಾಯಮಾನಕ್ಕೆ ಜೆಡಿಎಸ್ಸೂ ಆಗಿಬರೋಲ್ಲ, ನನ್ನ ಜಾತಕಕ್ಕೆ ಕೆಜೆಪಿನೂ ಆಗಿಬರೋಲ್ಲ. ಹಾಗಾಗಿ ಜ್ಯೋತಿಷಿಗಳು ಹೇಳಿದಂತೆ (ಪ್ರಹ್ಲಾದ) ಜೋಷಿ ಮನೆಯಲ್ಲೇ ಠಿಕಾಣಿ ಮುಂದುವರಿಸುವೆ ಎಂದು ಘಂಟಾಘೋಷವಾಗಿ ಘೋಷಿಸಿದ್ದಾರೆ ವಿಜಯನಗರದ ವೀರಪುತ್ರ ಸೋಮಣ್ಣ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹಾಕಿದ್ದ ಕಾಳಿಗೆ ಮತ್ತೊಬ್ಬ ಸಚಿವ ಉಮೇಶ್ ಕತ್ತಿ ಬಲಿಯಾಗಿದ್ದ ಮಾದರಿಯಲ್ಲೇ, ಸ್ವಕ್ಷೇತ್ರದಲ್ಲಿ ಶುಕ್ರವಾರ ಬೆಳಗಿನ ವಾಯುವಿಹಾರದಲ್ಲಿ ಜೋಲಿ ತಪ್ಪಿ ತಪ್ಪು (ರಾಜಕೀಯ) ಹೆಜ್ಜೆ ಹಾಕುತ್ತಿದ್ದ ಸೋಮಣ್ಣ ಅವರು ಅದೇ ಸಿಎಂ ಜಗದೀಶ್ ಶೆಟ್ಟರ್ ಅವರ (ಮೊಬೈಲ್) ಕಾಲಿಗೆ ಬಲಿಯಾಗಿದ್ದಾರೆ ಎಂದು ಬಿಜೆಪಿ ಪಕ್ಷದ ಆಂತರಿಕ ಮೂಲಗಳು ಪಿಸುಗುಟ್ಟಿವೆ.
ಸದ್ಯ ಗೋವಿಂದರಾಜನಗರ ಸಿಕ್ಕಿತಲ್ಲಾ!:
ಇದೇ ಕಾಲಕ್ಕೆ ತಮ್ಮ ವಿಜಯನಗರ ಸಾಮ್ರಾಜ್ಯವನ್ನು ಪ್ರಿಯಾಕೃಷ್ಣ ಎಂಬ ಪ್ರಿನ್ಸ್ ತನ್ನ ಕಬ್ಜಾಗೆ ತೆಗೆದುಕೊಂಡುಬಿಟ್ಟಿರುವುದರಿಂದ ಅಲ್ಲೇ ಪಕ್ಕದಲ್ಲೇ ಇರುವ ಗೋವಿಂದರಾಜನಗರದಲ್ಲಿ ಸೆಟಲ್ ಆಗುವುದಾಗಿಯೂ, ಹಿಂದಿನ ಚುನಾವಣೆಯ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಾಗಿಯೂ ವೀರಪುತ್ರ ಸೋಮಣ್ಣ ಪ್ರಮಾಣಪೂರ್ವಕವಾಗಿ ಹೇಳಿಬಿಟ್ಟಿದ್ದಾರೆ.
ಅಲ್ಲಿಗೆ ವಿ ಸೋಮಣ್ಣ ಎಂಬ ವಸತಿ ಸಚಿವರು ಬಿಜೆಪಿಯಲ್ಲೇ ಮುಂದವರಿಯುವುದು ನಿಕ್ಕಿಯಾಗಿದ್ದು, ಈ ಬಗ್ಗೆ ಯಡಿಯೂರಪ್ಪ ಆಗಲಿ ಅಥವಾ ಮತ್ಯಾರೇ ಆಗಲಿ ತಮ್ಮ ಬಗ್ಗೆ ಅನ್ಯಥಾ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವುದು ಬೇಡ ಎಂದು ಸೋಮಣ್ಣ ಮಾರುತ್ತರ ಬರೆದು ಕಳಿಸಿದ್ದಾರೆ.
ಜತೆಗೆ, ಸೋಮವಾರ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮಿ ಅವರ 106ನೆಯ ಜನ್ಮದಿನದಂದು ತುಮಕೂರಿನಲ್ಲಿ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ, ಸೀದಾ ಗೋವಿಂದ ರಾಜನಗರಕ್ಕೆ ವಾಪಸಾಗಿ ಮನೆ ಮನೆಗೂ ಮತಯಾಚನೆಗೆ ತೆರಳುವೆ ಎಂದೂ 'ಗೋವಿಂದರಾಜ ನಗರದ ರಾಜ' ಸೋಮಣ್ಣ ಅವರು ಅಧಿಕೃತವಾಗಿ ಪ್ರಕಟಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications