ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಔಟ್

ದೇವನಹಳ್ಳಿ ಖಾಸಗಿ ರೆಸಾರ್ಟ್ನಲ್ಲಿ ಎರಡು ನಡೆದ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಸಿ ಹಾಲಿ 71 ಮಂದಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಒಂದೇ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಮಾರ್ಪಾಡುಗಳು ಹೈಕಮಾಂಡ್ ಮಟ್ಟದಲ್ಲೇ ನಡೆಯಲಿವೆ. 2150ಕ್ಕೂ ಅಧಿಕ ಅರ್ಜಿಗಳನ್ನು ಸದ್ಯಕ್ಕೆ 600 ಅರ್ಜಿಗಳಿಗೆ ಇಳಿಸಲಾಗಿದೆ. ಬೆಂಗಳೂರಿನ 28 ಕ್ಷೇತ್ರಕ್ಕೆ 84 ಜನ ಸಂಭಾವ್ಯ ಅಭ್ಯರ್ಥಿಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದರು.
ಮೊದಲ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ನಾಯಕರ ಹೆಸರುಗಳು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವೆ ರಾಣಿ ಸತೀಶ್, ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಂ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಆರಾಧ್ಯ ಮುಖಂಡರಾದ ತಿಮ್ಮೇಗೌಡ ಅವರುಗಳ ಹೆಸರುಗಳು ಮೊದಲ ಪಟ್ಟಿಯಲ್ಲಿತ್ತು. [ಬೆಂಗಳೂರು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ]
46 ಕ್ಷೇತಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ:
(ಕ್ಷೇತ್ರ : ಅಭ್ಯರ್ಥಿ ಹೆಸರು)
* ಚಾಮರಾಜನಗರ : ಪುಟ್ಟರಂಗ ಶೆಟ್ಟಿ
* ಯಮಕನಮರಡಿ : ಸತೀಶ್ ಜಾರಕಿಹೊಳಿ,
* ಉಡುಪಿ : ಪ್ರಮೋದ್ ಮಧ್ವರಾಜ್,
* ತೇರದಾಳ: ಉಮಾಶ್ರೀ
* ಕೆ.ಅರ್ ನಗರ : ಪುಟ್ಟಸ್ವಾಮಿಗೌಡ
* ಶಿಗ್ಗಾಂವ್ : ಅಜ್ಜಂಪೀರ್ ಖಾದ್ರಿ
* ಗಾಂಧಿನಗರ : ದಿನೇಶ್ ಗುಂಡೂರಾವ್
* ಗೋವಿಂದರಾಜ ನಗರ : ಪ್ರಿಯಾ ಕೃಷ್ಣ,
* ವರುಣಾ : ಸಿದ್ದರಾಮಯ್ಯ
* ವಿಜಯನಗರ : ಎಂ.ಕೃಷ್ಣಪ್ಪ,
* ಶಾಂತಿನಗರ: ಹ್ಯಾರಿಸ್
* ಉಲ್ಲಾಳ : ಯು.ಟಿ.ಖಾದರ್,
* ಕೃಷ್ಣರಾಜ : ಎಂ.ಕೆ. ಸೋಮಶೇಖರ್
* ಚಿಕ್ಕೋಡಿ : ಪ್ರಕಾಶ್ ಹುಕ್ಕೇರಿ,
* ಬೀದರ್(ನಗರ) : ರಹೀಂ ಖಾನ್
* ಬೆಳಗಾವಿ ಉತ್ತರ: ಫಿರೋಜ್ ಶೇಠ್
* ಟಿ.ನರಸೀಪುರ: ಡಾ.ಹೆಚ್.ಸಿ.ಮಹದೇವಪ್ಪ
* ರಾಮದುರ್ಗ: ಅಶೋಕ್ ಪಟ್ಟಣಶೆಟ್ಟಿ
* ಹನೂರು: ನರೇಂದ್ರ
* ಅರಕಲಗೂಡು: ಎ.ಮಂಜು
* ಮಧುಗಿರಿ: ಕೆ.ಎನ್. ರಾಜಣ್ಣ
* ಹಿರೇಕೆರೂರು: ಬಿ.ಸಿ.ಪಾಟೀಲ್
* ಭಾಲ್ಕಿ: ಈಶ್ವರ ಕಂಡ್ರೆ
* ಜೇವರ್ಗಿ: ಅಜಯ್ ಸಿಂಗ್,
* ಚಿತ್ತಾಪುರ: ಪ್ರಿಯಾಂಕ ಖರ್ಗೆ
* ಬಬಲೇಶ್ವರ : ಎಂ.ಬಿ.ಪಾಟೀಲ್,
* ಕಲಘಟಗಿ: ಸಂತೋಷ್ ಲಾಡ್
* ನಾಗಠಾಣಾ : ರಾಜೂ ಅಲಗೂರ
* ಧಾರವಾಡ: ವಿನಯ್ ಕುಲಕರ್ಣಿ
* ಅಫ್ಜಲ್ ಪುರ: ಮಾಲೀಕಯ್ಯ ಗುತ್ತೇದಾರ್
* ಹಳಿಯಾಳ: ಆರ್.ವಿ.ದೇಶಪಾಂಡೆ
* ಸೇಡಂ : ಶರಣ ಪ್ರಕಾಶ್,
* ಗೋಕಾಕ್: ರಮೇಶ್ ಜಾರಕಿಹೊಳಿ
* ನಿಪ್ಪಾಣಿ : ಕಾಕಾ ಸಾಹೇಬ್ ಪಾಟೀಲ್
* ಬಂಟ್ವಾಳ : ರಾಮನಾಥ ರೈ
* ಮಹಾಲಕ್ಷ್ಮೀಲೇಔಟ್ : ನೆ.ಲ ನರೇಂದ್ರಬಾಬು
* ಬ್ಯಾಟರಾಯನಪುರ : ಕೃಷ್ಣಬೈರೇಗೌಡ
* ಶಿವಾಜಿ ನಗರ: ರೋಷನ್ ಬೇಗ್,
* ಸರ್ವಜ್ಞನಗರ: ಕೆ.ಜೆ.ಜಾರ್ಜ್
* ಗುಂಡ್ಲುಪೇಟೆ: ಮಹದೇವ್ ಪ್ರಸಾದ್
* ಬಿಟಿಎಂ ಲೇಔಟ್: ರಾಮಲಿಂಗಾರೆಡ್ಡಿ
* ಎಚ್.ಡಿ.ಕೋಟೆ: ಚಿಕ್ಕಣ್ಣ,
* ಕೊರಟಗೆರೆ: ಡಾ.ಜಿ.ಪರಮೇಶ್ವರ್
* ಕನಕಪುರ- ಡಿ.ಕೆ.ಶಿವಕುಮಾರ್
* ಹುನಗುಂದ- ವಿಜಯ್ ಕಾಶಪ್ಪನವರ್
* ಗುಲ್ಬರ್ಗ ಉತ್ತರ- ಖಮರುಲ್ ಇಸ್ಲಾಂ
* ಪಿರಿಯಾಪಟ್ಟಣ- ವೆಂಕಟೇಶ್
* ನಂಜನಗೂಡು- ಶ್ರೀನಿವಾಸಪ್ರಸಾದ್
* ಗದಗ- ಎಚ್.ಕೆ.ಪಾಟೀಲ್
* ಹುಮ್ನಾಬಾದ್- ರಾಜಶೇಖರಪಾಟೀಲ
* ಮುದ್ದೇಬಿಹಾಳ- ಸಿ.ಎಸ್.ನಾಡಗೌಡ
* ದೇವರಹಿಪ್ಪರಗಿ- ಪಾಟೀಲ್ ನಡಹಳ್ಳಿ
* ಕಾರ್ಕಳ- ಗೋಪಾಲ ಭಂಡಾರಿ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications