ಬೆಂ. ಗ್ರಾಮಾಂತರ ಜಿಲ್ಲಾಧಿಕಾರಿ ಅಯ್ಯಪ್ಪ ಬಂಧನ

Illegal Assets- Bangalore rural DC MK Ayyappa arrested
ಬೆಂಗಳೂರು‌, ಮಾರ್ಚ್ 13: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಂಕೆ ಅಯ್ಯಪ್ಪ ಅವರನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸರಕಾರಕ್ಕೆ ಸೇರಿದ 32 ಎಕರೆ ಭೂಮಿಯನ್ನು ಹಾಲಿ ಶಾಸಕರೊಬ್ಬರ ಸಂಬಂಧಿಗೆ ಧಾರೆ ಎರೆದ ಆರೋಪ ಇವರ ಮೇಲಿದೆ.

ಅಯ್ಯಪ್ಪ, ವಿಶೇಷ ತಹಸೀಲ್ದಾರ್ ಗೋಸ್ವಾಮಿ, ಉಪ ನೋಂದಣಾಧಿಕಾರಿ ರವಿಕುಮಾರ್, ಕಂದಾಯ ಇಲಾಖೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನೂ ಇದೇ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ 32 ಎಕರೆ ಸರಕಾರಿ ಭೂ ದಾಖಲೆ ತಿದ್ದಿದ ಆರೋಪದ ಮೇಲೆ ಅಯ್ಯಪ್ಪ ಅವರನ್ನು ಬುಧವಾರ ಮಧ್ಯಾಹ್ನ ಬೆಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ಭೂ ದಾಖಲೆ ತಿದ್ದಿದ ನಾಲ್ವರೂ ಆರೋಪಿಗಳು ಯಲಹಂಕದ ನರಸಿಂಹಯ್ಯ ಅವರಿಗೆ 32 ಎಕರೆ ಭೂಮಿಯನ್ನು ಪರಭಾರೆ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತ ಕೋರ್ಟಿನಲ್ಲಿ ದೂರು ದಾಖಲಾಗಿತ್ತು. ನರಸಿಂಹಯ್ಯ ಯಲಹಂಕ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಅವರ ಸಂಬಂಧಿ.

ಜಿಲ್ಲಾಧಿಕಾರಿ ಅಯ್ಯಪ್ಪ ಅವರು ಡಿನೋಟಿಫಿಕೇಶನ್ ಸೇರಿದಂತೆ ಅನೇಕ ಭೂ ಅಕ್ರಮಗಳನ್ನು ಎದುರಿಸುತ್ತಿದ್ದಾರೆ.

ವಿಶ್ವನಾಥ್ ನಿರಾಕರಣೆ: 'ಪ್ರಕರಣ ನಡೆದಿರುವುದು ನಿಜ. ದಾಖಲೆ ತಿದ್ದಿರುವ ಆರೋಪ ನಿಜ. ಆದರೆ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ' ಎಂದು ಶಾಸಕ ವಿಶ್ವನಾಥ್ ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣದಲ್ಲಿ ಶಾಸಕ ವಿಶ್ವನಾಥ್ ಅವರು 15ನೆಯ ಆರೋಪಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+