ವಿಧಾನಸಭೆ:C-Voter ಸಮೀಕ್ಷೆ ಫಲಿತಾಂಶ ಹೇಳೋದೇನು?
ಬೆಂಗಳೂರು, ಮಾ.5: ಚುನಾವಣೆಗೆ ಮುಂದಿನ ಸರಕಾರ ಅಧಿಕಾರ ಹಿಡಿಯಲು ಇನ್ನೂ ಕನಿಷ್ಠ 3 ತಿಂಗಳು ಇದೆ. ಆದರೆ ಚುನಾವಣೆ ಪೂರ್ವ ಸಮೀಕ್ಷೆಗಳ ಭರಾಟೆ ಜೋರಾಗಿಯೇ ನಡೆದಿದೆ. ಆ ಸಮೀಕ್ಷೆ ಈ ಸಮೀಕ್ಷೆ ಎಂದು ಇರೋ ನಾಲ್ಕಾರು ಪಾರ್ಟಿಗಳಲ್ಲೇ ನಡುಕ ಹುಟ್ಟುಹಾಕುತ್ತಿದೆ ಈ ಸಮೀಕ್ಷೆಗಳು. ಆದರೆ 4 ಕೋಟಿ ಮತದಾರರು ಎಲ್ಲಿ, ಈ ಸಮೀಕ್ಷೆಗೆ ಒಳಪಡುವ ಸಾವಿರದ ಮಂದಿ ಎಲ್ಲಿ?
ಆದರೂ ಫಲಿತಾಂಶದ ಮೂಡ್ ಕ್ರಿಯೇಟ್ ಮಾಡಲು, ಮತದಾರನ ಪಲ್ಸ್ ಅರಿಯಲು, ರಾಜಕೀಯ ಪಕ್ಷಗಳ ಹಾವು-ಮುಂಗುಸಿ ಆಟಕ್ಕೆ ಇದು ಸಹಾಯಕವಾಗಬಲ್ಲದು. ಇದು ಕಳೆದ ತಿಂಗಳು ಫೆಬ್ರವರಿಯಲ್ಲಿ ನಡೆಸಲಾದ ಸಮೀಕ್ಷೆ.
TV9 ನ್ಯೂಸ್ ಚಾನೆಲ್ ಸೋಮವಾರ ಸಂಜೆ C-Voter ಸಮೀಕ್ಷೆಯನ್ನು ಪ್ರಸಾರ ಮಾಡಿದೆ. ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶವು ಆಡಳಿತಾರೂಢ ಬಿಜೆಪಿಗೆ ಆತಂಕ ಉಂಟು ಮಾಡುವಂತಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ಸಿಗೆ ಆನಂದವೋ ಆನಂದ. ಇನ್ನು, ಬಹುಚರ್ಚಿತ ನೂತನ ಪಕ್ಷ ಕೆಜೆಪಿಗೆ ಆಯೋಮಯ ಸ್ಥಿತಿ. ಈ ಸಿ-ವೋಟರ್ ಸಂಸ್ಥೆ ನಡೆಸಿರುವ ಚುನಾವಣಾ ಪೂರ್ಣ ಸಮೀಕ್ಷೆ ಕಾಂಗ್ರೆಸ್ಸಿಗೆ ಪೂರ್ಣ ಬಹುಮತ ಬರಲಿದೆ ಎಂದು ಹೇಳಿದೆ.
Karnataka Opinion Poll- Tv9 C Voter Survey ಫಲಿತಾಂಶ ಇಲ್ಲಿದೆ:

ಬಿಜೆಪಿಗೆ ಅಧಿಕಾರ ನಷ್ಟ
ಆಡಳಿತಾರೂಢ ಬಿಜೆಪಿ ಗೆಲ್ಲೋದು 62-70 ಸ್ಥಾನವಷ್ಟೇ.

ಕುಮಾರಸ್ವಾಮಿಗೆ ಭ್ರಮನಿರಸನ
ಎಚ್ ಡಿ ಕುಮಾರಸ್ವಾಮಿಗೆ ಭ್ರಮನಿರಸನ- ಜೆಡಿಎಸ್ ಗೆಲ್ಲೋದು ಕೇವಲ 19-25 ಸ್ಥಾನವಷ್ಟೇ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ
ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ: ಹೌದು ಕಾಂಗ್ರೆಸ್ 118-126 ಸ್ಥಾನ ಗೆದ್ದು ಬರುತ್ತದೆ.

ಪಕ್ಷೇತರರು, ಇತರೆ ಚಿಲ್ರೆ ಪಕ್ಷಗಳ ಕಥೆಯೇನು?
ಪಕ್ಷೇತರರು, ಇತರೆ ಚಿಲ್ರೆ ಪಕ್ಷಗಳ ಕಥೆ ಅಷ್ಟೇ ಕಣ್ಣ್ಣೊ. ಕಳೆದ 5 ವರ್ಷಗಳಿಂದ ಇನ್ನಿಲ್ಲದಂತೆ ಕಾಡಿದ ನಾಲ್ಕೂ ಮುಕ್ಕಾಲು ಪಕ್ಷೇತರರಿಗೆ ಗೇಟ್ ಪಾಸ್. ಆದರೂ ಅವರು-ಇವರೂ ಅಂತ 06-10 ಸ್ಥಾನ ಗಳಿಸಬಹುದು ಅಷ್ಟೇ.

ಕೆಜೆಪಿ ಬೋರ್ಡಿಗೇ ಇಲ್ಲ
ಸನ್ಮಾನ್ಯ ಯಡಿಯೂರಪ್ಪ ನೇತೃತ್ವದ ಕೆಜೆಪಿ ಬೋರ್ಡಿಗೇ ಇಲ್ಲ. ಅಂದರೂ ಕೆಜೆಪಿ 04-08 ಸ್ಥಾನದೊಂದಿಗೆ ಸಿಂಗಲ್ ಡಿಜಿಟ್ ಗೆ ತೃಪ್ತಿಪಟ್ಟುಕೊಳ್ಳಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications