Get Updates
Get notified of breaking news, exclusive insights, and must-see stories!

ಸುಪ್ರೀಂ ನ್ಯಾಯತಕ್ಕಡಿ ಮುಂದೆ ಕರ್ನಾಟಕ ಬೆಪ್ಪುತಕ್ಕಡಿ

cauvery-final-award-to-be-notified-on-feb-20
ನವದೆಹಲಿ, ಫೆ.20: ಕರ್ನಾಟಕದಲ್ಲಿಂದು ಬಂದ್ ಆರಂಭವಾಗಿದೆ. ಬಂದ್ ಗೆ ಅಡ್ಜಸ್ಟ್ ಆದ ಜನ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನಿದ್ದಾರೆ. ಆದರೆ ವಿಷಯ ಅದಲ್ಲ. ಇನ್ನೇನು ಕೆಲವೇ ಗಂಟೆಗಳಲ್ಲಿ ಕರ್ನಾಟಕಕ್ಕೆ ಉಲ್ಕೆಯೊಂದು ಅಪ್ಪಳಿಸಲಿದೆ. ಆಗ ಇದೇ ಜನ ಏನು ಮಾಡುತ್ತಾರೆ ಎಂಬುದು ಕರ್ನಾಟಕದ ಭವಿಷ್ಯವನ್ನು ನಿರ್ಧರಿಸಲಿದೆ.

ಆದರೆ, ಕರ್ನಾಟಕದ ಜನತೆಗೆ ಆ ಉಲ್ಕೆಯ ಆಘಾತದಿಂದ ಸುಧಾರಿಸಿಕೊಳ್ಳುವುದು ದುಸ್ತರವಾಗಲಿದೆ. ಉಲ್ಕಾಪಾತಕ್ಕೆ ಗರ್ಭಪಾತವಾದರೂ ಆಗುತ್ತದಾ ಅಂದರೆ No chance, ಕಾವೇರಿ ನೀರು ಹಂಚಿಕೆ ಕುರಿತು ಐ ತೀರ್ಪಿನ ಅಧಿಸೂಚನೆ ಇಂದು ಯಾವುದೇ ಕ್ಷಣ ಅಧಿಕೃತವಾಗಿ ಹೊರಬೀಳಬಹುದಾಗಿದೆ. ಸುಪ್ರೀಂಕೋರ್ಟ್ ನ್ಯಾಯತಕ್ಕಡಿಯ ಮುಂದೆ ಕರ್ನಾಟಕ ಬೆಪ್ಪುತಕ್ಕಡಿಯಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ.

ಇಂದು ಅಧಿಸೂಚನೆ ಹೊರಬೀಳುತ್ತಿದ್ದಂತೆ ಶತಮಾನದಿಂದ 'ಕಾವೇರಿ ನಮ್ಮದು' ಎಂದು ಅದರ ಮೇಲೆ ನಿರರ್ಥಕ ಅಧಿಕಾರ ಹೊಂದಿದ್ದ ಕರ್ನಾಟಕ ಸರಕಾರ, ಆ ಅಪ್ರಯೋಜಕ ಅಧಿಕಾರವನ್ನೂ ಕಳೆದುಕೊಳ್ಳಲಿದೆ. ತಮಿಳುನಾಡು ಸರಕಾರ ಸುಪ್ರೀಂಕೋರ್ಟ್ ಅಂಗಳದಲ್ಲಿ ನಿಂತು 'ಕರ್ನಾಟಕದಿಂದ ನಮಗೆ ನೀರು ಬಿಡಿಸಿ' ಎಂದು ಬಾಯಿ ಬಡಿದುಕೊಳ್ಳುವ ಪ್ರಮೇಯವೂ ಇರುವುದಿಲ್ಲ.

ನೀರು ಪಾಲು: ಅಧಿಸೂಚನೆಯ ಫಲವಾಗಿ ಅಸ್ತಿತ್ವಕ್ಕೆ ಬರಲಿರುವ ಏಕಾಧಿಪತ್ಯದ 'ಕಾವೇರಿ ನೀರು ನಿರ್ವಹಣಾ ಮಂಡಳಿ' ತಮಿಳುನಾಡಿಗೆ ಎಷ್ಟು ಬೇಕಾದರೂ ನೀರು ಹರಿಸಬಹುದು. ಕರ್ನಾಟಕ (ಇಷ್ಟು ದಿನ ಮಾಡಿದಂತೆ) ಬಾಯ್ಮುಚ್ಚಿಕೊಂಡು ಇರಬೇಕಾಗುತ್ತದೆ. ಮುಖ್ಯ ಇಂಜಿನಿಯರ್ ಇಬ್ಬರ ಅಧ್ಯಕ್ಷತೆಯಲ್ಲಿ ಮಂಡಳಿ ಕಾರ್ಯನಿರ್ವಹಿಸಲಿದೆ.

ಕಾವೇರಿ ನದಿ ಪಾತ್ರದಲ್ಲಿ ಬರುವ ಎಲ್ಲ ಜಲಾಶಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಈ ಮಂಡಳಿಯ ಅಧೀನಕ್ಕೆ ಒಳಪಡಲಿವೆ. ಇದರಿಂದಾಗಿ ರಾಜ್ಯ ಸರ್ಕಾರಗಳು ಜಲಾಶಯದ ಮೇಲಿನ ಅಧಿಕಾರವನ್ನು ಕಳೆದುಕೊಳ್ಳಲಿವೆ. ಅಲ್ಲಿಗೆ ಕರ್ನಾಟಕ ಕಾವೇರಿ ಕೊಳ್ಳದ ರೈತರು ಮತ್ತು ಬೆಂಗಳೂರು ಮಂದಿಯ ಹಿತಾಸಕ್ತಿ/ಆಶೋತ್ತರಗಳು ನೀರುಪಾಲಾಗಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+