ಬಜೆಟ್ : ಗಾಂಭೀರ್ಯದ ನಡುವೆ ಸ್ವಲ್ಪ ಸ್ವಾರಸ್ಯ!

ಶಂಕರಲಿಂಗೇ ಗೌಡರ ಪ್ರತಿಭಟನೆ : ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರ ವಿರುದ್ಧ ಹರಿಹಾಯುತ್ತಲೇ ಇರುತ್ತಿದ್ದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ವಿಶಿಷ್ಟ ರೀತಿಯಲ್ಲಿ ಸದನಕ್ಕೆ ಎಂಟ್ರಿ ಕೊಟ್ಟು, ವಿಭಿನ್ನ ರೀತಿಯಲ್ಲಿ ಸರಕಾರದ ವಿರುದ್ಧವೇ ಪ್ರತಿಭಟನೆ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬಾರದೆಂದು ಆಗ್ರಹಿಸಿ ನೀರು ತುಂಬಿದ ಬೆಳ್ಳಿ ಚಂಬುವನ್ನು ತಲೆಯ ಮೇಲೆ ಹೊತ್ತುಬಂದ 'ರೆಬೆಲ್ ಸ್ಟಾರ್' ಶಂಕರಲಿಂಗೇ ಗೌಡ, ಬಜೆಟ್ ಮಂಡನೆ ಆರಂಭವಾಗುವ ಮೊದಲು ಬಾಟಲಿಯಲ್ಲಿದ್ದ ನೀರನ್ನು ತಲೆಯ ಮೇಲೆ ಸುರಿದುಕೊಂಡು ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ಸಲ್ಲಿಸಿದರು.
ಚಾಮರಾಜ ಕ್ಷೇತ್ರದಿಂದ ಸತತವಾಗಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೌಡರು, 2002ರಲ್ಲಿ 'ಭಾರತದ ಅತ್ಯುತ್ತಮ ನಾಗರಿಕ' ಮತ್ತು 2005ರಲ್ಲಿ 'ಕರ್ನಾಟಕದ ಮಕ್ಕಳ ಸ್ನೇಹಿ ಎಂಎಲ್ಎ' ಎಂಬ ಗೌರವಕ್ಕೆ ಪಾತ್ರರಾಗಿರುವ ಗೌಡರು ಬಾಟಲಿ ನೀರನ್ನು ತಲೆ ಮೇಲೆ ಸುರಿದುಕೊಳ್ಳುತ್ತಿದ್ದಂತೆ ಇಡೀ ಸದನ ಗಹಗಹಿಸಿ ನಗಲು ಆರಂಭಿಸಿತು.
ಕೊನೆಗೆ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಸ್ವತಃ ಬಂದು ಶಂಕರಲಿಂಗೇ ಗೌಡರನ್ನು ಮನವೊಲಿಸಿ ಎಳೆದುಕೊಂಡು ಹೋದರು. ಹೋಗುವ ಮುನ್ನ ಬಾಟಲಿಯಲ್ಲಿ ಇದ್ದದ್ದು ನೀರೋ, ಸೀಮೆ ಎಣ್ಣೆಯೋ ಎಂಬುದನ್ನು ಮೂಸಿ ನೋಡಲು ಅಶೋಕ್ ಮರೆಯಲಿಲ್ಲ.
ಸಿಹಿ ತಿನ್ನಿಸಿದ ರೇಣುಕಾ : ಕೆಲ ದಿನಗಳ ಹಿಂದೆ ಈಶ್ವರಪ್ಪ ಅವರನ್ನು ಶಿವಮೊಗ್ಗದಲ್ಲಿ ಗುಟ್ಟಾಗಿ ಭೇಟಿಯಾಗಿದ್ದರ ಪ್ರಭಾವವೋ ಏನೋ, ಅಬಕಾರಿ ಸಚಿವ ರೇಣುಕಾಚಾರ್ಯ ಅವರು ಜಗದೀಶ್ ಶೆಟ್ಟರ್ ಅವರಿಗೆ, ಬಜೆಟ್ ಮಂಡನೆಯ ನಂತರ ಸಿಹಿ ತಿನ್ನಿಸಿ ಅವರ ವಿರೋಧಿಗಳು ಮತ್ತು ಬೆಂಬಲಿಗರು ಕೂಡ ಅಚ್ಚರಿ ಪಟ್ಟುಕೊಳ್ಳುವಂತೆ ಮಾಡಿದರು.
ಶೆಟ್ಟರ್ ಅವರು ವಿರೋಧಿಗಳಿಂದ ಟೀಕೆಗೆ ಗುರಿಯಾದ ಸುದೀರ್ಘವಾದ ಬಜೆಟ್ ಮಂಡಿಸಿ ಮುಗಿಸುತ್ತಿದ್ದಂತೆ ರೇಣುಕಾಚಾರ್ಯ ಅವರು ಚಂಗನೆ ಎಗರಿ ಬಂದು ಸ್ವೀಟ್ ಡಬ್ಬ ತೆಗೆದು ಶೆಟ್ಟರ್ ಅವರ ಬಾಯಲ್ಲಿ ಸಿಹಿ ತುರುಕೇ ಬಿಟ್ಟರು. ರೇಣುಕಾಚಾರ್ಯ ಅವರ ಜೊತೆ, ಯಡಿಯೂರಪ್ಪ ಅವರ ಬಣದೊಡನೆ ಗುರುತಿಸಿಕೊಂಡಿದ್ದ ಮುರುಗೇಶ್ ನಿರಾಣಿ ಅವರು ಕೂಡ ಕಾಣಿಸಿಕೊಂಡಿರುವುದು ಯಡಿಯೂರಪ್ಪ ಬಳಗಕ್ಕೆ ನುಂಗಲಾಗದ ತುಪ್ಪವಾಗಿದೆ.
ರೇವಣ್ಣ ಭರ್ತಿ ಗುರುಕಿ : ನಾಲ್ಕು ಗಂಟೆ ಸತತವಾಗಿ ಬಜೆಟ್ ಓದುತ್ತಿದ್ದರೆ ಯಾರಿಗಾದರೂ ಆಕಳಿಕೆ ಬರದೆ ಇರುತ್ತದಾ? ಹಲವರು ಬಾಯಿಮುಂದೆ ಚಿಟಿಕೆ ಹೊಡೆಯುತ್ತ ಕಷ್ಟಪಟ್ಟು ಎಚ್ಚರವಾಗಿದ್ದರೆ, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ಭರ್ತಿ ಒಂದು ಜೋಂಪು ಎಳೆದರು. ನಂತರ ಬಜೆಟ್ ಬಗ್ಗೆ ಪ್ರತಿಕ್ರಿಯೆ ಕೇಳುತ್ತಿದ್ದಂತೆ, ಬಜೆಟ್ ನಿರಾಶಾದಾಯಕವಾಗಿದೆ, ರೈತರಿಗೆ ವಿರೋಧವಾಗಿದೆ, ಜನರಿಗೆ ಬರೀ ಆಸೆ ತೋರಿಸಲಾಗಿದೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.
ಮಳೆ ನೀರಿನ ಧಾಂತನಕಧೀಂ : ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಗದೀಶ್ ಶೆಟ್ಟರ್ ಅವರು ಭರವಸೆಗಳ ಮಳೆ ಸುರಿಸಿ ಮುಗಿಸುತ್ತಿದ್ದಂತೆ, ಬೆಂಗಳೂರಿನಲ್ಲಿ ಇಡೀ ದಿನ ಮೋಡಾಚ್ಛಾದಿತವಾಗಿದ್ದ ಆಗಸ ಕೆಲ ಹನಿಗಳನ್ನು ಸುರಿಸಿ ಬೆಂದು ಕಾದಿದ್ದ ನೆಲಕ್ಕೆ ತಂಪೆರೆಯಿತು. ಇದು ಕಣ್ಣೀರಾ ಪನ್ನೀರಾ ಎಂಬುದನ್ನು ಜನರೇ ನಿರ್ಧರಿಸಬೇಕು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications