ತಕ್ಷಣ ತ.ನಾಡಿಗೆ ಅಗತ್ಯ ನೀರು ಹರಿಸಿ: ಸು.ಕೋರ್ಟ್

ಕೆಆರ್ ಎಸ್ ಅಣೆಕಟ್ಟೆಯಲ್ಲಿ ಇಂದಿನ ನೀರಿನ ಪ್ರಮಾಣ: 11.21 ಟಿಎಂಸಿ ನೀರಿದೆ. ಇದರಲ್ಲಿ 2.9 ಟಿಎಂಸಿ ನೀರು ಮಾತ್ರ ಬಳಕೆಗೆ ಸಾಧ್ಯ. ಉಳಿದದ್ದು (8.3 TMC) ಡೆಡ್ ಸ್ಟೋರೆಜ್ ಗೆ ಬೇಕಾಗುತ್ತದೆ. ಆದರೂ ತಮಿಳುನಾಡಿಗೆ ಪ್ರತಿನಿತ್ಯ 2.44 ಟಿಎಂಸಿ ನೀರು ಹರಿಸಬೇಕಾಗಿದೆ.
ಈ ಮಧ್ಯೆ, ಇಂದಿನ ಸು.ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕರ್ನಾಟಕಕ್ಕೆ ಅವಕಾಶವಿಲ್ಲವಾಗಿದ್ದು, ಇಂದಿನಿಂದಲೇ ನೀರು ಬಿಡುವುದು ಅನಿವಾರ್ಯವಾಗಿದೆ.
'ಇದು ಕರ್ನಾಟಕ ಸರಕಾರದ ಸಂಪೂರ್ಣ ವೈಫಲ್ಯ. ಇನ್ನು, ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ. ಕೋರ್ಟ್ ನಿಂದನೆಯಾದರೂ ಪರವಾಗಿಲ್ಲ. ನಮಗೆ ಅಗತ್ಯವಿರುವ ನೀರನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ' ಎಂದು ರೈತ ಮುಖಂಡರು ಹೇಳಿದ್ದಾರೆ.












Click it and Unblock the Notifications