ಬೆಂಗಳೂರು ನಗರ ಹೊರವಲಯದಲ್ಲಿ ಸ್ಪೀಕರ್ ಬೋಪಯ್ಯ?

ಇದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಅಂತೆಕಂತೆ ಕಥೆಗಳು ಸೃಷ್ಟಿಯಾಗಿದೆಯೇ ಹೊರತು ಕರಾರುವಕ್ಕಾದ ಉತ್ತರ ಸಿಗುತ್ತಿಲ್ಲ. ಆದರೆ ಜನಶ್ರೀ ವಾಹಿನಿಗೆ ಲಭಿಸಿದ ಮಾಹಿತಿಯ ಪ್ರಕಾರ ಬೋಪಯ್ಯ ನೇಪಾಳಕ್ಕೂ ಹೋಗಿಲ್ಲ, ತವರಿನಲ್ಲೂ ಇಲ್ಲ ಬದಲಿಗೆ ಬೆಂಗಳೂರು ಹೊರವಲದಲ್ಲಿದ್ದಾರೆ ಎಂದು ವರದಿ ಮಾಡಿದೆ.
ಸ್ಪೀಕರ್ ಅವರು ಬೆಂಗಳೂರು ಹೊರವಲದ ನೈಸರ್ಗಿಕ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಇದ್ದಾರೆ. ಅವರು ಪ್ರೋಟೋಕಾಲ್ ಉಲ್ಲಂಘನೆ ಮಾಡಿಲ್ಲ ಎಂದು ವಿಧಾನಸಭಾ ಕಾರ್ಯಾಲಯದ ಅಧಿಕಾರಿಗಳು ತಮ್ಮ ವಾಹಿನಿಗೆ ತಿಳಿಸಿದ್ದಾರೆಂದು ಜನಶ್ರೀ ವಾಹಿನಿ ವರದಿ ಬಿತ್ತರಿಸುತ್ತಿದೆ.
ಅವರು ಎರಡೂ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಅವರು ತಮ್ಮ ತವರೂರು ಬಿಟ್ಟು ಬೆಂಗಳೂರು ಅಥವಾ ಹೊರದೇಶಕ್ಕೆ ಹೊರಡಲೇ ಇಲ್ಲ. ಮಡಿಕೇರಿ ಹೊರವಲಯದಲ್ಲೇ ಇರಬಹುದು ಎಂದು ಟಿವಿ9 ಅನುಮಾನ ವ್ಯಕ್ತ ಪಡಿಸಿದೆ.
ಒಂದು ಮೂಲಗಳ ಪ್ರಕಾರ ಬೋಪಯ್ಯ ಫೆಬ್ರವರಿ ಮೂರನೇ ತಾರೀಕಿನ ಮುನ್ನ ತನ್ನ ಕಚೇರಿಗೆ ಹಾಜರಾಗುವುದು ಸಂಶಯ ಎನ್ನಲಾಗಿದೆ. ಒಂದು ವೇಳೆ ರಾಜ್ಯಪಾಲ ಭಾರದ್ವಾಜ್ ಬಿಕ್ಕಟ್ಟು ಪರಿಹರಿಸಲು ಮಧ್ಯಪ್ರವೇಶಿಸಿ ಸ್ಪೀಕರ್ ಗೆ ಕಚೇರಿಗೆ ಹಾಜರಾಗಲು ಸೂಚನೆ ನೀಡಿದರೆ ಮಾತ್ರ ಈ ದಿನಾಂಕದ ಮುನ್ನ ಅವರು ಕಚೇರಿಗೆ ಹಾಜರಾಗಬಹುದು.
ವಿಪರ್ಯಾಸ ಅಂದರೆ ಇದೇ ಅಲ್ವೇ : ರಾಜಕೀಯದ ಚದುರಂಗದಾಟಕ್ಕೆ ಸ್ಪೀಕರ್ ಕುರ್ಚಿಯನ್ನೂ ಬಳಸಿಕೊಳ್ಳಬಹುದು ಎಂದು ಒಂದು ರೀತಿಯಲ್ಲಿ ಪರಿಚಯಿಸಿ ಕೊಟ್ಟವರು ಯಡಿಯೂರಪ್ಪ. ಈಗ ಇದೇ ಕುರ್ಚಿಯನ್ನು ಅವರ ವಿರುದ್ದವೇ ತಿರುಗಿಸಿ ಬಿಜೆಪಿ ತಾತ್ಕಾಲಿಕ ಜಯದ ನಗೆ ಬೀರಿದ್ದಂತೂ ನಿಜ.
2010ರಲ್ಲಿ ಬಾಲಚಂದ್ರ ಜಾರಕಿಹೊಳೆ ನೇತೃತ್ವದಲ್ಲಿ 16 ಮಂದಿ ಶಾಸಕರು ಯಡಿಯೂರಪ್ಪ ವಿರುದ್ದ ಬಂಡಾಯ ಎದ್ದಾಗ ಸ್ಪೀಕರ್ 16 ಶಾಸಕರನ್ನು ಅನರ್ಹಗೊಳಿಸಿದ್ದರು. ಯಡಿಯೂರಪ್ಪ ಅಡ್ಡ ದಾರಿಯ ಮೂಲಕ ವಿಶ್ವಾಸ ಮತ ಗೆದ್ದಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಸ್ಪೀಕರ್ ತೀರ್ಪಿಗೆ ಅಸ್ತು ಎಂದಿದ್ದರೂ ಸುಪ್ರೀಂಕೋರ್ಟ್ ಸ್ಪೀಕರ್ ಬೋಪಯ್ಯ ಅವರಿಗೆ ಛೀಮಾರಿ ಹಾಕಿದ್ದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications