ನಿಗಮ, ಮಂಡಳಿಗೆ ಹೊಸಬರು, ಬಿಜೆಪಿ ಹೊಸ ದಾಳ

ಬಿಜೆಪಿ ಸಿದ್ಧಾಂತಕ್ಕೆ ಬಲಿ ಕೊಟ್ಟು ಕೆಜೆಪಿಗೆ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಸರ್ಕಾರ ಬಿದ್ದರೂ ಚಿಂತೆಯಿಲ್ಲ ಎಂದು ದೆಹಲಿ ನಾಯಕರು ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರಿಗೆ ಹೇಳಿದ್ದರು.
ಅದರಂತೆ ತಕ್ಷಣಕ್ಕೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನದಲ್ಲಿ ಭಾರಿ ಬದಲಾವಣೆ ಮಾಡಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದರು. ಆದರೆ, ಕೆಲ ಅಧ್ಯಕ್ಷರ ನೇಮಕಾತಿಯಲ್ಲಿ ಭಿನ್ನಾಭಿಪ್ರಾಯ ಮೂಡಿದ್ದರಿಂದ ಪಟ್ಟಿ ಬಿಡುಗಡೆ ಮುಂದೂಡಲ್ಪಟ್ಟಿತ್ತು.
ಮೊದಲ ಹಂತದಲ್ಲಿ 16 ಜನ ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಲಾಗಿದೆ, ಪಟ್ಟಿ ಇಂತಿದೆ:
* ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ: ಮಹಾಂತೇಶ್ ಗೌಡ ಪಾಟೀಲ್
* ಕಾಡಾ ಮಲಪ್ರಭಾ ನಿಗಮ: ಅಡಿವೆಪ್ಪ
* ಕೈಗಾರಿಕಾ ಅಭಿವೃದ್ಧಿ ಮಂಡಳಿ : ಜಿಎಂ ಸುರೇಶ್
* ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ : ಪದ್ಮಕರ್ ಪಾಟೀಲ್
* ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ: ಮೊಹಿಸಿನ್
* ಪ್ರೊ. ನಂಜುಡಪ್ಪ ವರದಿ : ತ್ರಿವಿಕ್ರಮ ಜೋಶಿ
* ಈಶಾನ್ಯ ಸಾರಿಗೆ: ಶಿವಾನಂದ
* ಎನ್ ಜಿ ಇಎಫ್, ಹುಬ್ಬಳ್ಳಿ: ರಂಗಾಬದ್ದಿ
* ಆಹಾರ ನಾಗರಿಕ: ಪ್ರಕಾಶ್ ಖಂಡ್ರೆ
* ಕೈಮಗ್ಗ ಅಭಿವೃದ್ಧಿ ಮಂಡಳಿ: ರಾಜಶೇಖರ್ ಶೀಲವಂತ
* ಖಾದಿ ಅಭಿವೃದ್ಧಿ ಮಂಡಳಿ: ಉಮೇಶ್ ಬಂದೂವಾಡಕರ್
* ವಾಯುವ್ಯ ಸಾರಿಗೆ ಸಂಸ್ಥೆ: ಕರಿಗೌಡರ್
* ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: ಅಶೋಕ್ ಗಸ್ತಿ
* ಕಾಡಾ ಭದ್ರಾ: ಗಿರೀಶ್ ಪಾಟೀಲ್
* ಕಾಡಾ ತುಂಗಭದ್ರಾ: ಗಿರಿಗೌಡ
* ಇಂಧನ ಅಭಿವೃದ್ಧಿ ಮಂಡಳಿ: ಷಣ್ಮುಖ ಗುರಿಕಾರ್
ಸರಿ ಸುಮಾರು 30ಕ್ಕೂ ಅಧಿಕ ನಿಗಮ ಮಂಡಳಿ ಅಧ್ಯಕ್ಷರು ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಲಭ್ಯ ಮಾಹಿತಿ ಪ್ರಕಾರ ಈ ಕೆಳಗೆ ಕಂಡವರ ಕುರ್ಚಿ ಅಲುಗಾಡುತ್ತಿದೆ.
ಶಾಸಕ ಬಿ.ಪಿ ಹರೀಶ್, ಎಂ.ಡಿ ಲಕ್ಷ್ಮಿ ನಾರಾಯಣ, ಚಿಕ್ಕನಗೌಡರ್, ರುದ್ರೇಶ್, ಮರಿಸ್ವಾಮಿ, ಅಶೋಕ್ ಕಾಟ್ವೆ, ರಾಮಚಂದ್ರ, ಶಂಕರ ಗೌಡ ಪಾಟೀಲ, ಎ.ಆರ್ ಕೃಷ್ಣಮೂರ್ತಿ, ಲಿಂಬಣ್ಣನವರ್, ತಾರಾ ಅನುರಾಧಾ, ವಿಜಯ್ ಕುಮಾರ್, ನಾರಾಯಣ ಸ್ವಾಮಿ, ಅಶ್ವಥ್ ಸೇರಿದಂತೆ 30 ಜನ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications