ಆತಂಕದಲ್ಲಿ ಕಾಲ್ ಸೆಂಟರ್ ಮಹಿಳಾ ಉದ್ಯೋಗಿಗಳು

ಇದಕ್ಕೆಲ್ಲ ಕಾರಣ ಕಳೆದ ತಿಂಗಳು ನಡೆದುಹೋದ ಭಯಾನಕ ರೇಪ್ ಅಂಡ್ ಮರ್ಡರ್ ಮತ್ತು ಕಳೆದ ವಾರ ಇಲ್ಲೇ ನೋಯ್ಡಾದಲ್ಲಿ ನಡೆದ ಭಯಾನಕ ರೇಪ್ ಅಂಡ್ ಮರ್ಡರ್. ಇದರಿಂದ ಮಹಿಳಾ ಉದ್ಯೋಗಿಗಳು ತೀವ್ರವಾಗಿ ಘಾಸಿಗೊಂಡಿದ್ದಾರೆ ಎಂದು ಅಸೋಚಾಮ್ ನಡೆಸಿದ ದಿಢೀರ್ ಸಮೀಕ್ಷೆಯಿಂದ ತಿಳಿದುಬಂದಿದೆ.
ಭಾರತದ ಈ ರಾಜಧಾನಿ ಪ್ರದೇಶದಲ್ಲಿ (National Capital Region) ಐಟಿ ಉದ್ಯಮ ಅದರಲ್ಲೂ ಬಿಪಿಒ ಕಂಪನಿಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯೇ ಹೆಚ್ಚಾಗಿದೆ. ಆದರೆ ಈ ಉದ್ಯೋಗಿಗಳು ಇತ್ತೀಚಿನ ಘಟನಾವಳಿಗಳಿಂದ ನಿಜಕ್ಕೂ ಅಧೀರರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Associated Chambers of Commerce and Industry of India ನಡೆಸಿದ ಈ ಸಮೀಕ್ಷೆಯಲ್ಲಿ ಐಟಿ ಉದ್ಯಮ ಅದರಲ್ಲೂ ಬಿಪಿಒ ಕಂಪನಿಗಳಲ್ಲಿ ಮಹಿಳಾ ಉದ್ಯೋಗಿಗಳಲ್ಲಿ ಮೂವರಿಗೆ ಒಬ್ಬರಂತೆ ಅನೇಕರು ಕೆಲಸ ಬಿಟ್ಟಿದ್ದಾರೆ ಅಥವಾ ಕೆಲಸದ ಅವಧಿಯನ್ನು ಕಡಿಮೆ ಮಾಡಿದ್ದಾರೆ. ಶೇ. 82 ಮಂದಿ ಮಹಿಳಾ ಉದ್ಯೋಗಿಗಳು ಸೂರ್ಯ ಮುಳುಗುತ್ತಿದ್ದಂತೆ ಕಚೇರಿಯಿಂದ ಹೊರನಡೆದು ಗೂಡು ಸೇರಿಕೊಳ್ಳುತ್ತಿದ್ದಾರೆ.
ಶೇ. 67 ಮಂದಿ ಹೇಳುವಂತೆ ಕೆಲಸ ಮಾಡುವ ಸ್ಥಳಗಳಲ್ಲಿ ಭದ್ರತೆಯ ವಾತಾವರಣವಾಗಲಿ ಸೌಹಾರ್ಧ ಪರಿಸ್ಥಿತಿಯಾಗಲಿ ನೆಲೆಸಿಲ್ಲವಂತೆ. ಇನ್ನು, ಮಹಿಳಾ ಉದ್ಯೋಗಿಗಳ ಪೋಷಕರಂತೂ ತಮ್ಮ ಮಗಳು ಕೆಲಸಕ್ಕೆ ಹೋಗುವುದಕ್ಕೆ ಸುತರಾಂ ಒಲ್ಲೆ ಎನ್ನುತ್ತಿದ್ದಾ. ಆ ದುಡ್ಡೂ ಬೇಡ, ಅದರ ಸಹವಾಸವೂ ಬೇಡ ಎನ್ನುತ್ತಿದ್ದಾರೆ.
ಸಂಬಳ ಕಡಿಮೆಯಾದರೂ ಪರವಾಗಿಲ್ಲ. ಬೆಳಗಿನ ಹೊತ್ತಿನಲ್ಲಿ ಯಾವುದಾದರೂ ಕೆಲಸಕ್ಕೆ ಹೋದರಾಯಿತು. ರಸ್ತೆಗಳಲ್ಲಿ ಜನ ಇರುತ್ತಾರೆ. ಹೇಗೋ ಧೈರ್ಯವಾಗಿ ಮನೆಗೆ ವಾಪಸಾಗಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುತ್ತಿದೆ ಸಮೀಕ್ಷೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications