ಕೆಬಿಸಿ: ಆಸಿಡ್ ದಾಳಿಯ ಸೋನಾಲಿಗೆ 25ಲಕ್ಷ ಬಹುಮಾನ
ಮುಂಬೈ,ಡಿ.26: ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರಲ್ಲಾ ಕೌನ್ ಬನೇಗಾ ಕರೋಡ್ ಪತಿ ಅದರಲ್ಲಿ ಮಿಸ್ ಯೂನಿವರ್ಸ್ ಲಾರಾ ದತ್ತಾ ಮೊನ್ನೆ ಪಾಲ್ಗೊಂಡಿದ್ದರು. ಅವರ ಎದುರು ಕುಳಿತಿದ್ದುದು ಲಾರಾಗಿಂತ ಹೆಚ್ಚು ಜನಾಕರ್ಷಿತ ಅಮಿತಾಭ್. ಆದರೆ ಆ ಒಂದು ನಿರ್ದಿಷ್ಟ ಕಾರ್ಯಕ್ರಮವನ್ನು ನೋಡುತ್ತಿದ್ದ ಜನ ಮಾತ್ರ ಅವರಿಬ್ಬರತ್ತಲೂ ಆಕರ್ಷಿತರಾಗಲೇ ಇಲ್ಲ. ಬದಲಿಗೆ ಅಂದಿನ ಅತಿಥಿ ಸೋನಾಲಿ ಅವರತ್ತಲೇ ಗಮನಹರಿಸಿದ್ದರು.
ಏನಪ್ಪಾ ಸೋನಾಲಿಯದು ಅಂತಹ ವಿಶೇಷ ಎನ್ನುವವರಿಗೆ ಇಲ್ಲಿದೆ ಹೆಚ್ಚಿನ ಮಾಹಿತಿ...

ಈ ಸೋನಾಲಿ ಮುಖರ್ಜಿ ಮೂಲತಃ ಜಾರ್ಖಂಡಿನ ಧನಬಾದಿನವಳು. ಆಗಿನ್ನೂ (2003ರಲ್ಲಿ) ಅವಳು ಹದಿನಾರರ ಕುಸುಮಬಾಲೆ. ಪದವಿಗಾಗಿ ಸಮಾಜಶಾಸ್ತ್ರ ಓದುತ್ತಿದ್ದಳು.ಭವಿಷ್ಯದ ಬಗ್ಗೆ ಸುಂದರ ಕನಸು ಕಾಣುತ್ತಾ ಅಮ್ಮನ ಮನೆಯಲ್ಲಿ ನಿದ್ರಿಸುತ್ತಿದ್ದವಳ ಮೇಲೆ ವಿದ್ಯಾರ್ಥಿಗಳ ಗುಂಪೊಂದು ಧೋ ಅಂತ ಆಸಿಡ್ ಸುರಿದಿತ್ತು. ಅಷ್ಟೇ... ಅದಾದ ನಂತರ ನಾನಾ ಆಸ್ಪತ್ರೆಗಳ ವಿವಿಧ ವೈದ್ಯರು ಬರೋಬ್ಬರಿ 22 ಬಾರಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಆದರೆ ಅವಳು ಎದೆಗುಂದಿಲ್ಲ. ಈ ಮಧ್ಯೆ, ನಮ್ಮ ನ್ಯಾಯಾಂಗ ಅವಳಿಗಿನ್ನೂ ನ್ಯಾಯ ಒದಗಿಸುವಲ್ಲಿ ಅನ್ಯಾಯವೆಸಗಿದೆ ಎಂದೇ ಹೇಳಬಹುದು. ಹಾಗಾಗಿ, ಅದೊಮ್ಮೆ 'ಜೀವನ ಸಾಕಾಗಿದೆ. ಸಾಯುತ್ತೇನೆ. ಅವಕಾಶ ಕಲ್ಪಸಿ' ಎಂದು ಮೊರೆಯಿಟ್ಟಳು. ಆದರೆ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಅದಕ್ಕೂ ಅವಕಾಶವಿಲ್ಲ. 'ದಯಾಮರಣಕ್ಕೆ ಅವಕಾಶ ಇಲ್ವಮ್ಮಾ' ಎಂದು ಗೋಣುಚೆಲ್ಲಿತು.
'ನನಗಾದ ಗಾಯಕ್ಕೆ ಇದು ಅತ್ಯುತ್ತಮ ಔಷಧ': ಆದರೆ ಒಬ್ಬ ಅಮಿತಾಭ್ ತಾನು ನಡೆಸಿಕೊಡುವ ಕೆಬಿಸಿ ಮೂಲಕ ಇಡೀ ದೇಶವೇ ನೋಡುತ್ತಿದ್ದಂತೆ ಅವಳಿಗೆ 25 ಲಕ್ಷ ರೂ. ಗಳ ಬಹುಮಾನವನ್ನು ದಕ್ಕಿಸಿ, ಅರ್ಹ ನ್ಯಾಯವನ್ನೊದಗಿಸಿದ್ದಾರೆ. 'ನನಗಾದ ಗಾಯಕ್ಕೆ ಇದು ಅತ್ಯುತ್ತಮ ಔಷಧ' ಎಂದು ಸೋನಾಲಿಯೂ ಕೆಬಿಸಿಯಲ್ಲಿ ಜಯಶಾಲಿಯಾಗಿದ್ದಕ್ಕೆ ಪ್ರತಿಕ್ರಿಯಿಸಿದ್ದಾಳೆ.
ಅಮಿತಾಭ್ ರಿಂದ 25 ಲಕ್ಷ ರೂ ಚೆಕ್ ಸ್ವೀಕರಿಸುತ್ತಿದ್ದಂತೆ ಆಸಿಡ್ ದಾಳಿಯಿಂದ ಅರೆಗುರುಡು ಮತ್ತು ಶ್ರವಣಶಕ್ತಿ ಕಳೆದುಕೊಂಡಿರುವ ಸೋನಾಲಿಗೆ ಕೋಟ್ಯಂತರ ಜನರ ಚಪ್ಪಾಳೆ ಮತ್ತು ಮೆಚ್ಚುಗೆಯ ನೋಟ ಖಂಡಿತ ಕಣ್ಣಿಗೆ ಕಟ್ಟಿರುತ್ತದೆ. ಇದೇ ವೇಳೆ, ಕೇವಲ ನಾಲ್ಕು ತಿಂಗಳ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದು ರಾಜಾರೋಷವಾಗಿ ತಿರುಗಾಡಿಕೊಂಡಿರುವ ಆ ಆಸಿಡ್ ದಾಳಿಕೋರರಿಗೆ ಅಮಿತಾಭ್ ಅವರ ಒಂದೊಂದು ಮಾತೂ ಭರ್ಜಿಯಂತೆ ನಾಟಿರಲೂ ಸಾಕು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications