ಮುಗ್ಧ ಮಕ್ಕಳ ಸಾವಿಗೆ ಕಂಬನಿ ಮಿಡಿದ ಒಬಾಮಾ

ಎಂದು ವೈಟ್ ಹೌಸ್ನಿಂದ ಸಂತಾಪಸೂಚಕ ಭಾಷಣ ಮಾಡಿರುವ ಬರಾಕ್ ಒಬಾಮಾ, ಕೊರಳುಬ್ಬಿಬಂದು ದುಃಖ ತಡೆಯಲಾರದೆ ಜೀವ ಕಳೆದುಕೊಂಡ 5ರಿಂದ 10 ವರ್ಷದ ಮಕ್ಕಳಿಗಾಗಿ ಕಣ್ಣೀರುಗರೆದಿದ್ದಾರೆ. ಮಾತುಗಳನ್ನು ಆಡುತ್ತಿದ್ದಾಗಲೇ ತಮ್ಮ ತೋರುಬೆರಳಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತ, ರಾಜಕೀಯವನ್ನು ಬದಿಗೊತ್ತಿ ಇಂತಹ ದುರ್ಘಟನೆ ಮರುಕಳಿಸದಂತೆ, ಗನ್ ಸಂಸ್ಕೃತಿ ತಡೆಯಬೇಕೆಂದು ಕರೆ ನೀಡಿದ್ದಾರೆ.
"ಕಳೆದ ಹಲ ವರ್ಷಗಳಲ್ಲಿ ಇಂತಹ ಅನೇಕ ಘಟನೆಗಳನ್ನು ಅಮೆರಿಕ ನೋಡಿದೆ. ನ್ಯೂಟೌನ್ನ ಶಾಲೆಯೇ ಆಗಲಿ, ಓರೆಗಾಂವ್ನ ಶಾಪಿಂಗ್ ಮಾಲ್ ಆಗಲಿ, ವಿಸ್ಕನ್ಸಿನ್ನ ದೇವಸ್ಥಾನ ಆಗಲಿ, ಆರೋರಾದ ಸಿನೆಮಾ ಮಂದಿರವಾಗಲಿ, ಶಿಕಾಗೋದ ಬೀದಿಯೇ ಆಗಲಿ, ಇಂತಹ ಅನೇಕ ದುರ್ಘಟನೆಗಳನ್ನು ಅಮೆರಿಕ ಕಂಡಿದೆ. ಸತ್ತವರೆಲ್ಲ ನಮ್ಮವರೆ, ಈ ಶಾಲೆಯ ಮಕ್ಕಳು ನಮ್ಮ ಮಕ್ಕಳೆ" ಎಂದು ದುಃಖತಪ್ತರಾಗಿ ಭಾವುಕರಾಗಿ ಕಂಬನಿ ಮಿಡಿದ್ದಾರೆ.
"ಇಂದು ಸಂಜೆ ಅಮೆರಿಕದ ಎಲ್ಲ ಪಾಲಕರು ಮಾಡುವಂತೆ ಮನೆ ಸೇರಿದ ಮಕ್ಕಳನ್ನು ನಾನು ಮತ್ತು ಮಿಷೆಲ್ ಪ್ರೀತಿಯಿಂದ ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಳ್ಳುತ್ತೇವೆ. ನಾವು ಅವರನ್ನೆಷ್ಟು ಪ್ರೀತಿಸುತ್ತೇವೆ ಎಂದು ಮುದ್ದಿಸಿ ಹೇಳುತ್ತೇವೆ. ಆದರೆ, ಕನೆಕ್ಟಿಕಟ್ನಲ್ಲಿರುವ ಅನೇಕ ಪಾಲಕರು ಇಂದು ರಾತ್ರಿ ಹೀಗೆ ಮಾಡಲಾರರು. ಆ ಪಾಲಕರಿಗೆ ಇಂತಹ ಪ್ರೀತಿಯ ಅಪ್ಪುಗೆಯ ಅವಶ್ಯಕತೆಯಿದೆ. ನನ್ನ ಕೈಯೆಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ" ಎಂದು ಒಬಾಮಾ ಮನದಾಳದ ಮಾತು ಹೇಳಿದ್ದಾರೆ.
ಹಿಂದೆಂದೂ ಕಂಡುಕೇಳರಿಯದಂತಹ ಭೀಕರ ಹತ್ಯಾಕಾಂಡದಲ್ಲಿ 20 ವರ್ಷದ ಬಂದೂಕುಧಾರಿಯೊಬ್ಬ ಕನೆಕ್ಟಿಕಟ್ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಗೆ ನುಗ್ಗಿ ಮನಬಂದಂತೆ ಗುಂಡುಹಾರಿಸಿ 5ರಿಂದ 10 ವರ್ಷ ವಯಸ್ಸಿನ 20 ಮಕ್ಕಳು ಮತ್ತು ಶಿಕ್ಷಕರು ಸೇರಿದಂತೆ 28 ಜನರನ್ನು ಶುಕ್ರವಾರ ಬೆಳಗಿನ ಜಾವ 9.30ಕ್ಕೆ ಭೀಕರವಾಗಿ ಹತ್ಯೆಗೈದಿದ್ದಾನೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications