ನಾರ್ವೆ ಪೊಲೀಸರ ಅತಿರೇಕದ ಕ್ರಮಕ್ಕೆ ಹೊಸ ತಿರುವು

ಅನುಪಮಾ ಚಂದ್ರಶೇಖರ್ ಅವರ ತಂದೆ ಮತ್ತು ಚಂದ್ರಶೇಖರ್ ಅವರ ಸಂಬಂಧಿ ವಿ ಶೈಲೇಂದರ್ ಅವರು ಹೈದರಾಬಾದಿನಲ್ಲಿರುವ NRI ವಿಶೇಷ ಘಟಕದ ಕಾರ್ಯದರ್ಶಿಯನ್ನು ಭೇಟಿಯಾಗಿ ಪ್ರಕರಣವನ್ನು ವಿವರಿಸಿ, ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದಾರೆ. ಈ ಮಧ್ಯೆ, ಟೆಕ್ಕಿ ಚಂದ್ರಶೇಖರ್ ಕುಟಂಬಸ್ಥರು ಪೊಲೀಸರ ಅತಿರೇಕದ ಕ್ರಮವನ್ನು ಪ್ರತಿಭಟಿಸಿ, ಕೇಂಧ್ರ ಸಚಿವೆ ಡಿ. ಪುರಂದೇಶ್ವರಿ ಅವರನ್ನೂ ಭೇಟಿ ಮಾಡಲು ನಿರ್ಧರಿಸಿದೆ.
ತಕ್ಷಣ ಇದಕ್ಕೆ ಸ್ಪಂದಿಸಿದ NRI ವಿಶೇಷ ಘಟಕ ನಾರ್ವೆಯಲ್ಲಿರುವ ಭಾರತೀಯ ರಾಯಭಾರಿ ಮತ್ತು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಯಾಗೂ ಮನವಿ ಸಲ್ಲಿಸಲಾಗಿದೆ.
ಹಿಂದಿನ ಸುದ್ದಿ: ನಾರ್ವೆ ಟಿಸಿಎಸ್ ಕಂಪನಿಯಲ್ಲಿ ಟೆಕ್ಕಿಗಳಾಗಿರುವ ಆಂಧ್ರ ಮೂಲದ ದಂಪತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು, ದಂಪತಿಯು ತಮ್ಮ ಮಗುವಿಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ನಾರ್ವೆಯಲ್ಲಿ ಇಂತಹ ಕೌಟುಂಬಿಕ ಕಿರುಕುಳ ಪ್ರಕರಣ 2ನೆಯ ಬಾರಿಗೆ ನಡೆದಿದ್ದು ನಾರ್ವೆ ಪೊಲೀಸರ ಕ್ರಮದ ಬಗ್ಗೆ ಎನ್ನಾರೈಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈಗಿನ ಪ್ರಕರಣ ಏನೆಂದರೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ದೊಂಡಪಡು ಮೂಲದ ವಿ ಚಂದ್ರಶೇಖರ್ ಮತ್ತು ಅವರ ಪತ್ನಿ ಅನುಪಮಾ ಅವರು ಓಸ್ಲೊ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರುಗಳಾಗಿದ್ದಾರೆ. ಈ ದಂಪತಿ ತಮ್ಮ 7 ವರ್ಷದ ಮಗನಿಗೆ ಶಿಸ್ತು ಕಲಿಸಲು ಕಠಿಣ ಶಿಕ್ಷೆ ನೀಡಿದ್ದಾರೆ ಎಂಬುದು ಆರೋಪ.












Click it and Unblock the Notifications