ದೀಪಾವಳಿ ಧಮಾಕಾ, ಬಸ್ ರೇಟ್ ಒನ್ ಟು ಡಬಲ್

ಶನಿವಾರದಿಂದ ಆರಂಭವಾಗುವ ಐದು ದಿನಗಳ ದೀಪಾವಳಿ ರಜೆಯ ಭರಪೂರ ಲಾಭ ಪಡೆದುಕೊಂಡಿರುವ ಖಾಸಗಿ ಬಸ್ಸುಗಳು ಲಂಗುಲಗಾಮಿಲ್ಲದೆ ಟಿಕೆಟ್ ದರವನ್ನು ಹೆಚ್ಚಿಸಿವೆ.
ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಖಾಸಗಿ ಬಸ್ಸುಗಳು ಟಿಕೆಟ್ ದರವನ್ನು ಮಾಮೂಲಿ ದಿನಗಳಿಗಿಂತ ಶೇ.40 ರಿಂದ ಶೇ.50 ಹೆಚ್ಚಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಬಾರಿ ಟಿಕೆಟ್ ದರವನ್ನು ಮನ ಬಂದಂತೆ ಹೆಚ್ಚಿಸಿ ಪ್ರಯಾಣಿಕರ ಜೇಬಿಗೆ ಲಕ್ಷ್ಮಿ ಪಟಾಕಿ ಇಟ್ಟಿದೆ.
ಬೆಂಗಳೂರಿನಿಂದ ಹೊರಡುವ ಖಾಸಗಿ ಬಸ್ಸುಗಳು ಪ್ರಯಾಣಿಕರ ಬೇಡಿಕೆಯ ಅನುಸಾರ ಟಿಕೆಟ್ ದರವನ್ನು ಮನಬಂದಂತೆ ನಿಗದಿ ಮಾಡಿವೆ. ಯಾವ ಮಟ್ಟಿಗೆ ಟಿಕೆಟ್ ದರ ಹೆಚ್ಚಿಸಿವೆ ಅಂದರೆ ಬಸ್ ಖರೀದಿಗೆ ಬ್ಯಾಂಕಿನಿಂದ ಪಡೆದ ಸಾಲದ ಒಂದು ವರ್ಷದ ಇಎಂಐ ಕಂತು ದೀಪಾವಳಿ ಮುಗಿಯುವುದರೊಳಗೆ ತೀರಿಸ ಬೇಕೆನ್ನುವಷ್ಟರ ಮಟ್ಟಿಗೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಾಮೂಲಿ ದಿನಗಳಲ್ಲಿ ಟಿಕೆಟ್ ದರ ರೂ. 550 ಇದ್ದರೆ 3400 ರೂಪಾಯಿ ವರೆಗೆ ಹೆಚ್ಚಿಸಿ ದರೋಡೆ ಮಾಡುತ್ತಿವೆ. ಒಂದು ಟಿಕೆಟ್ ಮೇಲೆ ಈ ಮಟ್ಟಿನ ಲಾಭವಾದರೆ ಒಂದು ಟ್ರಿಪ್ ನಲ್ಲಿ ಅವರು ಮಾಡುವ ಲಾಭದ ಮೊತ್ತ ಎಷ್ಟಾಗಬಹದು!!
ಬೆಂಗಳೂರಿನಿಂದ ರಾಜ್ಯದ ಆಯ್ದ ಕೆಲ ನಗರಗಳಿಗೆ ಖಾಸಗಿ ಬಸ್ಸುಗಳ ದೀಪಾವಳಿ 2012 ಟಿಕೆಟ್ ದರ ಇಂತಿದೆ:
ಬೆಂಗಳೂರು - ಹುಬ್ಬಳ್ಳಿ - ರೂ. 2200 ರಿಂದ 3400 (ಮಾಮೂಲಿ ದರ ರೂ. 400 ರಿಂದ 550)
ಬೆಂಗಳೂರು - ಉಡುಪಿ - ರೂ. 850 ರಿಂದ 1100 (ಮಾಮೂಲಿ ದರ ರೂ. 375 ರಿಂದ 500)
ಬೆಂಗಳೂರು - ಮೈಸೂರು - ರೂ. 250 ರಿಂದ 400 (ಮಾಮೂಲಿ ದರ ರೂ. 110 ರಿಂದ 180)
ಬೆಂಗಳೂರು - ರಾಯಚೂರು - ರೂ. 850 ರಿಂದ 1050 ( ಮಾಮೂಲಿ ದರ ರೂ.400 ರಿಂದ 650)
ಬೆಂಗಳೂರು - ಶಿವಮೊಗ್ಗ - ರೂ 750 ರಿಂದ 900 (ಮಾಮೂಲಿ ದರ ರೂ.230 ರಿಂದ 400)
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications