ಸ್ಟೌವ್ ಸ್ಫೋಟ: ಗೃಹಿಣಿ ಸಾವು, ಪತಿಗೆ ಗಾಯ

ಮೃತ ಗೃಹಿಣಿಯನ್ನು 24 ವರ್ಷದ ನಾಗವೇಣಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಆಕೆ ಪತಿ 30 ವರ್ಷದ ಯೋಗೀಶ್ ಗೆ ತೀವ್ರವಾಗಿ ಗಾಯಗಳಾಗಿದೆ. ಮೈ ಕೈ ಸುಟ್ಟಿಗೊಂಡಿದ್ದ ಯೋಗೀಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯೋಗೀಶ್ ದೇಹ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮಹದೇವಪುರ ಬಳಿಯ ಶಾಪಿಂಗ್ ಮಾಲ್ ನಲ್ಲಿ ಕಸ ಗುಡಿಸುವ ಕೆಲಸ ಮಾಡುವ ನಾಗವೇಣಿ ಹಾಗೂ ಗಾರ್ಮೆಂಟ್ಸ್ ಸಂಸ್ಥೆ ನೌಕರ ಯೋಗೀಶ್ ಗರುಡಾಚಾರ್ ಪಾಳ್ಯದಲ್ಲಿ ವಾಸವಾಗಿದ್ದರು.
ಭಾನುವಾರ ರಾತ್ರಿ ನಾಗವೇಣಿ ಎಂದಿನಂತೆ ಅಡುಗೆ ಮಾಡಲು ಅಣಿಯಾಗುತ್ತಿದ್ದಾಗ ಅವರ ಎರಡು ವರ್ಷದ ಮಗು ಗಲಾಟೆ ಮಾಡಲು ಆರಂಭಿಸಿದೆ. ಮಗುವನ್ನು ಅಜ್ಜಿ ಕೈಗೆ ಕೊಟ್ಟು ಹೊರಗೆ ಕರೆದುಕೊಂಡು ಹೋಗಲು ಹೇಳಿ ನಾಗವೇಣಿ ಮತ್ತೆ ಅಡುಗೆ ಮನೆಗೆ ಬಂದಿದ್ದಾರೆ.
ತರಕಾರಿ ಹೆಚ್ಚಿಕೊಂಡು ಇನ್ನೇನು ಸ್ಟೌವ್ ಹಚ್ಚಬೇಕು ಎಂದು ಬೆಂಕಿ ಕಡ್ಡಿ ಗೀರಲು ನೋಡಿದ್ದಾರೆ. ಅದರೆ, ಬೆಂಕಿ ಪೊಟ್ಟಣದಲ್ಲಿ ಕಡ್ಡಿ ಖಾಲಿಯಾಗಿರುತ್ತದೆ. ಗಂಡನಿಗೆ ಬೆಂಕಿ ಕಡ್ಡಿ ತರುವಂತೆ ಹೇಳಿದ್ದಾರೆ.
ಅದರೆ, ದುರಾದೃಷ್ಟಕ್ಕೆ ಇದೇ ಸಮಯಕ್ಕೆ ಕರೆಂಟ್ ಕೈ ಕೊಟ್ಟಿದೆ. ಅತ್ತ ಯೋಗೀಶ್ ಮೇಣದ ಬತ್ತಿಯೊಂದಿಗೆ ಬರುತ್ತಿದ್ದಂತೆ ಇತ್ತ ಸ್ಟೌವ್ ನಿಂದ ಸೀಮೆಎಣ್ಣೆ ಸೋರಿಕೆಯಾಗಿದೆ.
ಯೋಗೀಶ್ ಸ್ಟೌವ್ ಗೆ ಹತ್ತಿರವಾಗುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಹತ್ತಿರವಿದ್ದ ನಾಗವೇಣಿ ಬಟ್ಟೆಗೆ ಬೆಂಕಿ ತಗುಲಿದೆ. ಬೆಂಕಿ ನಂದಿಸಲು ಮುಂದಾದ ಯೋಗೀಶ್ ಗೂ ಬೆಂಕಿ ಹತ್ತಿಕೊಂಡಿದೆ.
ಸೀಮೆಎಣ್ಣೆ ಸೋರಿಕೆಯಿಂದ ಸ್ಟೌವ್ ಸ್ಫೋಟಗೊಂಡಿದೆ. ಶಬ್ದ ಕೇಳಿ ಮನೆಯೊಳಗೆ ಬಂದ ನಾಗವೇಣಿ ತಾಯಿ ಅಡುಗೆ ಮನೆಯಲ್ಲಿ ಬೆಂಕಿಯಲ್ಲಿ ಬೇಯುತ್ತಿದ್ದ ಮಗಳನ್ನು ಕಂಡು ಹೌಹಾರಿದ್ದಾರೆ. ತಕ್ಷಣವೇ ನೆರೆಹೊರೆಯವರ ಸಹಾಯ ಪಡೆದು ದಂಪತಿಯನ್ನು ರಕ್ಷಿಸಲು ಯತ್ನಿಸಿದ್ದಾರೆ.
ಅದರೆ, ನಾಗವೇಣಿಗೆ ತೀವ್ರ ಸುಟ್ಟುಗಾಯಗಳಾಗಿ ಅಂಬ್ಯುಲೆನ್ಸ್ ತರುವಷ್ಟರಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ರಕ್ಷಿಸಲು ಹೋಗಿ ಪತಿ ಯೋಗೀಶ್ ಕೂಡಾ ತೀವ್ರವಾಗಿ ಗಾಯಗೊಂಡಿದ್ದು, ಜೀವನ್ಮರಣ ಹೋರಾಟ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸ್ ಇನ್ಸ್ ಪೆಕ್ಟರ್ ಕೆಎಸ್ ನಾಗರಾಜ್ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕೃಷ್ಣಭಟ್ ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications