ದೇವದಾಸಿ ಅಮ್ಮನಿಂದ ಪದವೀಧರ ಪುತ್ರನಿಗೆ ಮುಕ್ತಿ

ಇದು ನಡೆದಿರುವುದು ಏಷ್ಯಾದ ಮ್ಯಾಂಚೆಸ್ಟರ್ ಎಂದು ಹೆಸರುವಾಸಿಯಾಗಿದ್ದ ದಾವಣಗೆರೆಯ ಜಗಳೂರು ಬಳಿಯ ಗ್ರಾಮವೊಂದರಲ್ಲಿ. ದುರ್ದೈವವೆಂದರೆ ನೂಲಿನ ಗಿರಣಿಗಳ ನಾಡಿನಲ್ಲಿ ಈ ದುರದೃಷ್ಟ ವ್ಯಕ್ತಿಯ ಮೈಮೇಲೆ ಒಂದು ನೂಲೂ ಇರಲಿಲ್ಲ. ಮಲ ಮೂತ್ರಾದಿಯಾಗಿ ಎಲ್ಲವನ್ನೂ ಆ ಕೋನೆಯಲ್ಲೇ ಮಾಡುತ್ತಾ, ಜೀವನ ದೂಡುತ್ತಿದ್ದ ನತದೃಷ್ಟ 37 ವರ್ಷದ ಕೇಶವಮೂರ್ತಿ.
ಕೇಶವಮೂರ್ತಿಯ ಸುದೀರ್ಘ ಕಾಲದ ಬಂಧನಕ್ಕೆ ಸ್ಥಳೀಯ ಶಾಸಕ, ಹಿರಿಯ ಸರಕಾರಿ ಅಧಿಕಾರಿಗಳು ಭಾನುವಾರ ಕೊನೆಗೂ ಮಂಗಳಹಾಡಿದ್ದಾರೆ. ಕೋಲಾಪುರ ಗ್ರಾಮದಲ್ಲಿ ಚೌಡಮ್ಮ ಎಂಬ ಮಹಿಳೆ 1995 ರಲ್ಲಿ ತನ್ನ ಪುತ್ರ ಕೇಶವಮೂರ್ತಿಯನ್ನು ಏಕಾಂತಕ್ಕೆ ತಳ್ಳಿದ್ದರು.
ಚೌಡಮ್ಮ ಗಂಡನಿಂದ ದೂರವಾಗಿ ದೇವದಾಸಿಯಾಗಿದ್ದಳು. ದೇವದಾಸಿ ಅಂದರೆ ಮಹಿಳೆಯರು ದೇವರ ಜತೆ ಮದುವೆಯಾಗುವುದು. ಇಂಇತಪ್ಪ ತಾಯಿ ಚೌಡಮ್ಮನನ್ನು ಹೀಗ್ಯಾಕಮ್ಮಾ ಎಂದು ಪ್ರಶ್ನಿಸಿದ್ದೇ ಕೇಶವ ಮಾಡಿದ ಮಹಾಪರಾಧವಾಗಿತ್ತು. ಕೇಶವನ ಯೌವನ ಜೀವನದ ಬಾಗಿಲು ಬಂದ್ ಮಾಡಿದ ಅಮ್ಮ ಚೌಡಮ್ಮ, ಮುಂದೆ ಆತನನ್ನು ಹೊರ ಪ್ರಪಂಚಕ್ಕೆ ತೋರಿಸಲೇ ಇಲ್ಲ.
ವಿಷಯ ತಿಳಿಯುತ್ತಿದ್ದ ಸ್ಥಳೀಯ ಆಡಳಿತ, ಪೊಲೀಸರು ಕೇಶವನನ್ನು ಬಿಡುಗಡೆಗೊಳಿಸಿದರು. ಗುಡ್ಡೆಯಂತೆ ಬೆಳೆದಿದ್ದ ಗಡ್ಡವನ್ನು ಬೋಳಿಸಿ, ಬೆಟ್ಟದಾಕಾರದಲ್ಲಿದ್ದ ತಲೆಗೂದಲನ್ನು ಕಟ್ ಮಾಡಿ, ಕೇಶವನನ್ನು ಸ್ವಚ್ಚಗೊಳಿಸಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ನಿತ್ರಾಣಗೊಂಡಿದ್ದ ಕೇಶವನನ್ನು ಸೀದಾ ಬೆಂಗಳೂರಿನ ನಿಮ್ಹಾನ್ಸ್ ಗೆ ಕಳಿಸಲಾಗಿದೆ. ಹಿರಿಯ ವೈದ್ಯರ ತಂಡ ವಿಶೇಷ ಮುತುವರ್ಜಿ ವಹಿಸಿ ಕೇಶವನ ಆರೈಕೆಯಲ್ಲಿದ್ದಾರೆ.












Click it and Unblock the Notifications