ಅಮೂಲ್ಯಳನ್ನು ದತ್ತು ಪಡೆದ ಬಿಎಸ್ ಯಡಿಯೂರಪ್ಪ

ಅ.10 ರಿಂದ ಒಂದು ವರ್ಷ ಅವಧಿಗೆ ಹುಲಿ ಅಮೂಲ್ಯಳ ಖರ್ಚು ವೆಚ್ಚಕ್ಕೆ ದತ್ತು ಸ್ವೀಕಾರ ಶುಲ್ಕ ಒಂದು ಲಕ್ಷ ರೂ.ಪಾವತಿಸಿ ನವೀಕರಿಸಿದ್ದಾರೆ. ಈ ಹುಲಿಯನ್ನು ನಿರಂತರ ಐದನೇ ಬಾರಿಗೆ ಅಂದರೆ 2008, ಅ.10ರಂದು ದತ್ತು ಸ್ವೀಕರಿಸಿದ್ದರು.
2012 ಏ.1ರಿಂದ ಇಲ್ಲಿಯವರೆಗೆ ಒಟ್ಟು 172 ಪ್ರಾಣಿಗಳನ್ನು ದತ್ತು ಕೊಡಲಾಗಿದ್ದು, 123 ಜನರು ದತ್ತು ಸ್ವೀಕರಿಸಿದ್ದಾರೆ. ಇದಕ್ಕಾಗಿ ಅವರು 17,17,034 ರೂ.ಪಾವತಿಸಿದ್ದಾರೆ ಎಂದು ಮೃಗಾಲಯ ಆಡಳಿತ ತಿಳಿಸಿದೆ.
2011-12ರಲ್ಲಿ ಸುಮಾರು 286 ಜನರು 375 ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ ಹಾಗೂ 34,55,283 ರು ಸಂಗ್ರಹವಾಗಿದೆ ಎಂದು ಮೃಗಾಲಯದ ವೆಬ್ ತಾಣ ಪ್ರಕಟಿಸಿದೆ.
ಪ್ರಾಣಿ ದತ್ತು ಸ್ವೀಕಾರ ಸುಲಭ: ಮೈಸೂರು ಮೃಗಾಲಯದ ಪ್ರಾಣಿ ದತ್ತು ಪಡೆಯುವ ಯೋಜನೆಯನ್ನು ಮೃಗಾಲಯ ಪ್ರಾಧಿಕಾರ ನೂತನ ಯೋಜನೆ ಪರಿಚಯಿಸಿದೆ. ಪ್ರಾಣಿ ದತ್ತು ಸ್ವೀಕಾರದ ಬಗ್ಗೆ ವಿವಿಧ ಪ್ರಾಣಿಗಳ ದತ್ತು ಸ್ವೀಕಾರದ ಮೌಲ್ಯಗಳನ್ನು ಇಲಾಖೆ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಪ್ರಾಣಿಗಳನ್ನು ದತ್ತು ಪಡೆದುಕೊಳ್ಳುವವರು ಹಾಗೂ ಮೃಗಾಲಯಕ್ಕೆ ಕೊಡುಗೆಗಳನ್ನು ನೀಡಲು ಬಯಸುವ ದಾನಿಗಳು ಹಣವನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ,
Member Secretary - Zoo Authority of Karnataka
IFSC : SYN B0001720
A/C No : 1720-214-0000028
ನಿಗದಿತ ಹಣವನ್ನು ವರ್ಗಾಯಿಸಬಹುದಾಗಿದೆ.
ಮೃಗಾಲಯ ಖಾತೆಯಲ್ಲಿ ಸ್ವೀಕೃತವಾದ ಅಂಶವು ಸ್ಥಿರಪಟ್ಟ ಕೂಡಲೇ ಮೃಗಾಲಯವು ಅಂತಹವರಿಗೆ ದತ್ತು ಸ್ವೀಕಾರ ಪ್ರಮಾಣ ಪತ್ರ, ಪಾಸ್, ಇತ್ಯಾದಿಗಳನ್ನು ನೀಡಲಿದೆ. ದತ್ತು ಸ್ವೀಕಾರದಿಂದ ಆದಾಯ ತೆರಿಗೆ ನಿಯಮಾವಳಿಗಳ ನಿಯಮ 80 ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಕೂಡಾ ಇದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ವೆಬ್ ತಾಣ: www.mysorezoo.info
ಇಮೇಲ್ ಮಾಡಿ: [email protected]
ಶ್ರೀ ಚಾಮರಾಜೇಂದ್ರ ಮೃಗಾಲಯ
ಇಂದಿರಾನಗರ, ಮೈಸೂರು- 570 010
ಸಂಪರ್ಕಿಸಿ: 0821-2440752, 0821-2520302
ಫ್ಯಾಕ್ಸ್ ಸಂಖ್ಯೆ: 0821-2563494
ಮಂಗಳವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8.30 ರಿಂದ ಸಂಜೆ 5.30 ರವರೆಗೂ ಮೃಗಾಲಯ ಸಾರ್ವಜನಿಕರಿಗೆ ಪ್ರವೇಶ ಅವಕಾಶ ಇರುತ್ತದೆ. ಪ್ರವೇಶ ಶುಲ್ಕ ಹಿರಿಯರಿಗೆ 40 ರು, ಕಿರಿಯರಿಗೆ (5ರಿಂದ 12 ವರ್ಷ) 20 ರು. 5 ವರ್ಷ ಕೆಳಗಿನ ಮಕ್ಕಳಿಗೆ ಪ್ರವೇಶ ಉಚಿತ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications