ಬಿಲಾವಲ್ ಜೊತೆ ಲವ್, ರಬ್ಬಾನಿಗೆ ಶಿಕ್ಷೆ ಖಾಯಂ?

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಅಧ್ಯಕ್ಷ, ಬಿಲಾವಲ್ ನಡುವೆ ಪ್ರೇಮದ ಪರಿಣಾಮ ಇತ್ತೀಚೆಗೆ ರಾಜಕೀಯವಾಗಿ ಹೆಸರು ಮಾಡುತ್ತಿದ್ದ ಹೀನಾ ರಬ್ಬಾನಿ ಅವರು ತಮ್ಮ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮೂಲಗಳ ಪ್ರಕಾರ, ರಬ್ಬಾನಿಗೆ ರಾಜೀನಾಮೆ ನೀಡುವಂತೆ ಆಡಳಿತ ಪಕ್ಷ ಈಗಾಗಲೇ ಸಮನ್ಸ್ ಜಾರಿ ಮಾಡಿದೆ. ಆದರೆ, ಜರ್ದಾರಿ ಅವರ ಸಲಹೆ ಮೇರೆಗೆ ರಾಜೀನಾಮೆ ಪತ್ರಗಳನ್ನು ಫ್ಯಾಕ್ಸ್ ಮಾಡದೆ ಹಾಕಿ ಇಟ್ಟಿದ್ದಾರೆ ಎನ್ನಲಾಗಿದೆ.
ರಬ್ಬಾನಿ ಪತಿ ಗತಿ ಏನು? : ಹೀನಾ ಹಾಗೂ ಬಿಲಾವಲ್ ಮಧ್ಯೆ ಇರುವ ಹೈ ಫ್ರೊಫೈಲ್ ಲವ್ ಸ್ಟೋರಿಯನ್ನು ಪಾಕಿಸ್ತಾನದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಅದರೆ, ಹೀನಾ ಪತಿ ಲಕ್ಷಾಧಿಪತಿ ಫಿರೋಜ್ ಗುಲ್ಜಾರ್ ಬುಧವಾರ (ಸೆ.26) ಹೀನಾ ಮತ್ತು ಬಿಲಾವಲ್ ನಡುವಿನ ದೂರವಾಣಿ ಕರೆ ವಿವರ ನೀಡುವಂತೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ.
ಬಾಂಗ್ಲಾದಲ್ಲಿ ಪ್ರೇಮ ಕತೆ ಸೋರಿಕೆ : ಬಾಂಗ್ಲಾ ದೇಶದ ಟ್ಯಾಬ್ಲಾಯ್ಡ್ Weekly Blitz ಪತ್ರಿಕೆಯಲ್ಲಿ ಸೆ.23ರಂದು ಇವರಿಬ್ಬರ ನಡುವೆ ಇರುವ ಪ್ರೇಮ ಸಂಬಂಧದ ಬಗ್ಗೆ ವಿಸ್ತಾರವಾಗಿ ಬರೆಯಲಾಗಿತ್ತು. ಜೊತೆಗೆ ಪ್ರಣಯಭರಿತ ಚಿತ್ರಗಳನ್ನು ಪ್ರಕಟಿಸಿ ಸಂಚಲನ ಮೂಡಿಸಿತ್ತು.
35 ವರ್ಷದ ಹೀನಾ ರಬ್ಬಾನಿ ಮತ್ತು 24 ವರ್ಷದ ಬಿಲಾವಲ್ ಭುಟ್ಟೋ ನಡುವೆ ಬಹುಕಾಲದಿಂದ ಪ್ರೇಮವಿದೆ . ಇಬ್ಬರೂ ಮದುವೆಯಾಗಲು ಸಿದ್ಧರಿದ್ದಾರೆ . ಆದರೆ ಇದಕ್ಕೆ ಆಸಿಫ್ ಅಲಿ ಜರ್ದಾರಿಯ ಒಪ್ಪುತ್ತಿಲ್ಲ ಎಂದು ಪತ್ರಿಕೆ ವರದಿ ಮಾಡಿತ್ತು.
ಹೀನಾ ರಬ್ಬಾನಿ ಖಾರ್ ಅವರು ಪಾಕಿಸ್ತಾನದ ದೊಡ್ಡ ಉದ್ಯಮಿ ಫಿರೋಜ್ ಗುಲ್ಜಾರ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಫಿರೋಜ್ ಗುಲ್ಜಾರ್ ಈಗ ಹೀನಾ ಜೊತೆ ವಾಸಿಸುತ್ತಿಲ್ಲ.
ಎರಡು ಮಕ್ಕಳ ತಾಯಿ ಹೀನಾರನ್ನು ತಮ್ಮ ಮಗನಿಗೆ ತಂದುಕೊಳ್ಳಲು ಜರ್ದಾರಿ ಬಿಲ್ ಕುಲ್ ಒಪ್ಪಿಗೆ ನೀಡುತ್ತಿಲ್ಲ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಬಿಲಾವಲ್ ಅಜ್ಜ ಜುಲ್ಫಿಕರ್ ಅಲಿ ಭುಟ್ಟೋ ಆರಂಭಿಸಿದ್ದು, ನಂತರ ಬಿಲಾವಲ್ ತಾಯಿ ಬೆನಜೀರ್ ಭುಟ್ಟೋ ಪಕ್ಷವನ್ನು ಬೆಳೆಸಿದ್ದರು. ಈಗ ಬಿಲಾವಲ್ ನ ಪ್ರೇಮದ ಫಲವಾಗಿ ಪಕ್ಷದಲ್ಲಿ ಒಡಕು ಮೂಡುತ್ತಿರುವುದು ಅಧ್ಯಕ್ಷ ಜರ್ದಾರಿಗೆ ಮುಜುಗರ ತಂದಿದೆ ಎಂದು ಪತ್ರಿಕೆ ಹೇಳಿದೆ.
ಹೀನಾ ತನ್ನ ಪತಿ ಗುಲ್ಖಾರ್ ಗೆ ತಲಾಕ್ ಕೊಟ್ಟು ಬಿಲಾವಲ್ ಜೊತೆ ಸಿಡ್ಜರ್ಲೆಂಡ್ ನಲ್ಲಿ ನೆಲೆಸಲು ಸರ್ವ ಸಿದ್ಧತೆ ನಡೆಸಿದ್ದಾರೆ. ಇಬ್ಬರ ನಡುವೆ ನಿರಂತರವಾಗಿ ಪ್ರೇಮ ಪತ್ರ ಹರಿದಾಡಿದೆ. ಹೀನಾ ಮೇಲಿನ ಪ್ರೇಮಕ್ಕಾಗಿ ಪಿಪಿಪಿ ತೊರೆಯುವ ಮಾತನ್ನಾಡಿರುವ ಬಿಲಾವಲ್ ತಮ್ಮ ತಾಯಿಯ ಕನಸನ್ನು ಭಗ್ನಗೊಳಿಸಿದ್ದಾರೆ ಎಂದು ಪತ್ರಿಕೆಯಲ್ಲಿ ಹೇಳಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications