ಬ್ರಿಟನ್ನಿನ ರಾಯಲ್ ಸೊಸೆ ಮಾನ ಹರಾಜು

ರಾಜಕುಮಾರ ವಿಲಿಯಮ್ಸ್ ಪತ್ನಿ ಕ್ಯಾಥರೀನ್ ಕೇಟ್ ಅವರ ತೆರೆದ ಎದೆ ಚಿತ್ರವನ್ನು ಫ್ರಾನ್ಸಿನ 'ಕ್ಲೋಸರ್' ನಿಯತಕಾಲಿಕೆ, ಇಟಲಿ, ಐರ್ಲೆಂಡ್ ನ ಪತ್ರಿಕೆಗಳು ಪ್ರಕಟಿಸಿದೆ.
ಫ್ರಾನ್ಸ್ನ ಚಾಟಿಯೂ ಪ್ರಾಂತ್ಯದ ಹೋಟೆಲೊಂದರ ಈಜುಕೊಳದಲ್ಲಿ ಕಳೆದ ವಾರ ಕ್ಯಾಥರೀನ್ ತಮ್ಮ ಪತಿಯೊಂದಿಗೆ ಅರೆ ನಗ್ನಾವಸ್ಥೆಯಲ್ಲಿ ಸೂರ್ಯ ಸ್ನಾನ (ಸನ್ ಬಾತ್) ಮಾಡುತ್ತಿದ್ದ ಸಂದರ್ಭದಲ್ಲಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
'ಕ್ಲೋಸರ್', ಈ ಚಿತ್ರಗಳನ್ನು ತನ್ನ ಮುದ್ರಣ ಹಾಗೂ ಆನ್ಲೈನ್ ಆವೃತ್ತಿಗಳೆರಡಲ್ಲೂ ಪ್ರಕಟಿಸಿದೆ. ತನ್ನ ಮುಖಪುಟದಲ್ಲಿ ಈ ಚಿತ್ರಗಳನ್ನು ಪ್ರಕಟಿಸಿರುವ 'ಕ್ಲೋಸರ್', ಅದಕ್ಕೆ 'ಓ ಮೈ ಗಾಡ್' ಎಂಬ ತಲೆ ಬರಹ ನೀಡಿದೆ.
ಮಾನ ಕಾಯ್ದ ಬ್ರಿಟಿಷ್ ಮಾಧ್ಯಮ: ಗಾಸಿಪ್ ಸುದ್ದಿಗಳು, ವಿವಾದಿತ ಸುದ್ದಿಗಳನ್ನು ಮೊಟ್ಟ ಮೊದಲಿಗೆ ಹೊರ ತರುವುದರನ್ನು ಎತ್ತಿದ ಕೈ ಎನಿಸಿರುವ ಬ್ರಿಟಿಷ್ ಮಾಧ್ಯಮಗಳು ಮಾತ್ರ ಕೇಟ್ ನಗ್ನ ಚಿತ್ರ ಪ್ರಕಟಿವಿಲಿಯಮ್ಸ ಪತ್ನಿ ಕೇಟ್ ಅವರ ಅರೆನಗ್ನ ಚಿತ್ರ ಪ್ರಕಟಿಸಲು ಹಿಂದೇಟು ಹಾಕಿವೆ.
ರಾಜಕುಮಾರಿ ಡಯಾನ ಸಾವಿನ ನಂತರ ಮಾಧ್ಯಮದ ಮೇಲೆ ಕೇಳಿ ಬಂದ ದೋಷಾರೋಪ ಮತ್ತು ಮಾಧ್ಯಮ ನೈತಿಕತೆಯ ತನಿಖೆಗೆ ಹೆದರಿ ಮಾಧ್ಯಮಗಳು ಈ ಚಿತ್ರವನ್ನು ಪ್ರಕಟಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಕಳೆದ ತಿಂಗಳು ಸುದ್ದಿ ಮಾಡಿದ್ದ ಹ್ಯಾರಿ ನಗ್ನ ಚಿತ್ರವನ್ನು ಮರ್ಡೋಕ್ ಮಾಲೀಕತ್ವದ 'ದಿ ಸನ್' ಮಾತ್ರ ಪ್ರಕಟಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಹ್ಯಾರಿ ಚಿತ್ರವನ್ನು ಪ್ರಕಟಿಸಲಾಗಿತ್ತು ಎಂದು ಅದು ಹೇಳಿತ್ತು.
ಆದರೆ ಈ ಬಾರಿ, ಕೇಟ್ ಅರೆ ನಗ್ನ ಚಿತ್ರವನ್ನು ತಾನು ಪ್ರಕಟಿಸುವುದಿಲ್ಲ ಎಂದು 'ದಿ ಸನ್' ಹೇಳಿಕೆ ನೀಡಿ ಅಚ್ಚರಿ ಮೂಡಿಸಿತ್ತು.
'ರಾಜ ದಂಪತಿಯ ಖಾಸಗಿತನವನ್ನು ಉಲ್ಲಂಘಿಸುವ ಉದ್ದೇಶ ನಮಗಿಲ್ಲ' ಎಂದು 'ದಿ ಸನ್' ಸಂಪಾದಕ ಡೊಮಿನಿಕ್ ಮೋಹನ್ ಹೇಳಿದ್ದರು.
ಪ್ಯಾರೀಸ್ ನ ಪಪರಜ್ಜಿಗಳ ಭೀತಿಯಿಂದ ತಪ್ಪಿಕೊಳ್ಳಲು ಯತ್ನಿಸಿದ ಲೇಡಿ ಡಯಾನಾ ಅವರು ಪ್ಯಾರೀಸ್ ನಲ್ಲಿ 1997ರಲ್ಲಿ ಅಪಘಾತಕ್ಕೀಡಾಗಿ ದುರಂತ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications