ಫೆಡರರ್ ಕನಸು ಭಗ್ನ, ಯುಎಸ್ ಓಪನ್ ನಿಂದ ಹೊರಕ್ಕೆ

17 ಬಾರಿ ಗ್ರ್ಯಾಂಡ್ ಸ್ಲಾಮ್ ಪದಕ ಗೆದ್ದಿರುವ ಫೆಡರರ್ 33ನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್ ಹಾಗೂ ಸತತ 9ನೇ ಯುಎಸ್ ಓಪನ್ ಸೆಮಿಸ್ ಪ್ರವೇಶಿಸುವ ನಿರೀಕ್ಷೆಯಿತ್ತು. ಆದರೆ, ಗುರುವಾರ ಮುಂಜಾನೆ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ 7-6 (7/1), 6-4, 3-6, 6-3 ಅಂತರದಿಂದ 6ನೇ ಸೀಡ್ ನ ಬೆರ್ಡಿಕ್ ಗೆಲುವು ಸಾಧಿಸಿದ್ದಾರೆ. ಸೆಮಿಸ್ ನಲ್ಲಿ ಇಂಗ್ಲೆಂಡಿನ ಆಂಡಿ ಮರ್ರೆಯನ್ನು ಬೆರ್ಡಿಕ್ ಎದುರಿಸಲಿದ್ದಾರೆ.
'ವಿಂಬಲ್ಡನ್ ಗೆದ್ದು ನಂ.1 ಆದ ಮೇಲೆ ಈ ಸೋಲು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ನಾನು ಮತ್ತೆ ನನ್ನ ತಂತ್ರಗಳನ್ನು ಬದಲಿಸಬೇಕಾಗುತ್ತದೆ' ಎಂದು ಫೆಡರರ್ ಪಂದ್ಯ ನಂತರ ದುಃಖದಿಂದ ಪ್ರತಿಕ್ರಿಯಿಸಿದ್ದಾರೆ.
2003ರಲ್ಲಿ ಡೇವಿಡ್ ನಲ್ಬಾಂಡಿಯನ್ ವಿರುದ್ಧ ನಾಲ್ಕನೇ ಸುತ್ತಿನಲ್ಲಿ ಸೋತಿದ್ದ ನಂತರ ಇದು ಫೆಡರರ್ ಅವರ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಕ್ವಾಟರ್ ಫೈನಲ್ ಗೂ ಮುನ್ನ 15 ಬಾರಿ ಫೆಡರರ್ ಹಾಗೂ ಬೆರ್ಡಿಕ್ ಪರಸ್ಪರ ಸೆಣಸಾಟ ನಡೆಸಿದ್ದು, ಬೆರ್ಡಿಕ್ 4 ಬಾರಿ ಗೆದ್ದಿದ್ದರೆ, ರೋಜರ್ 11 ಬಾರಿ ಗೆಲುವು ಸಾಧಿಸಿದ್ದರು.
ವಿಶ್ವದ ನಂ.1 ಆಟಗಾರನನ್ನು ಸೋಲಿಸಿರುವುದು ಸಹಜವಾಗಿ ಖುಷಿ ತಂದಿದೆ. ಇನ್ನಷ್ಟು ಉತ್ಸಾಹದಿಂದ ಸೆಮಿಫೈನಲ್ ನಲ್ಲಿ ಆಡುತ್ತೇನೆ ಎಂದು 26 ವರ್ಷದ ಚೆಕ್ ಗಣರಾಜ್ಯದ ಆಟಗಾರ ಬೆರ್ಡಿಕ್ ಹೇಳಿದ್ದಾರೆ. 2010ರ ವಿಂಬಲ್ಡನ್ ಫೈನಲ್ ನಲ್ಲಿ ಫೆಡರರ್ ವಿರುದ್ಧ ಸೋಲುಂಡಿದ್ದ ಬೆರ್ಡಿಕ್ ಈಗ ಅದರ ಸೇಡು ತೀರಿಸಿಕೊಂಡಿದ್ದಾರೆ. ಆದರೆ, 2010ರ ವಿಂಬಲ್ಡನ್ ಯಶಸ್ಸಿನ ನಂತರ ಮತ್ತೊಮ್ಮೆ ಉತ್ತಮ ಆಡುತ್ತಿರುವ ಬೆರ್ಡಿಕ್ ಈಗ ಯುಸ್ ಓಪನ್ ಸೆಮಿಸ್ ಪ್ರವೇಶಿಸಿದ್ದಾರೆ.
ಇದಕ್ಕೂ ಮುನ್ನ ನಾಲ್ಕನೇ ಸುತ್ತಿನಲ್ಲಿ ಅರ್ಜೆಂಟೀನಾದ ಯುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೋಲುಂಡ ಅಮೆರಿಕದ ಜನಪ್ರಿಯ ಆಟಗಾರ ಆಂಡಿ ರಾಡಿಕ್ ಕಣ್ಣೀರಿಡುತ್ತಾ ಟೆನಿಸ್ ಗೆ ಗುಡ್ ಬೈ ಹೇಳಿದ್ದರು.
ಮರ್ರೆ ಹಾಗೂ ಬೆರ್ಡಿಕ್ ಸೆಮಿಸ್ ಪಂದ್ಯದಲ್ಲಿ ಸೆಣಸಲಿದ್ದು, ಇನ್ನೆರಡು ಕ್ವಾಟರ್ ಫೈನಲ್ ಪಂದ್ಯಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಡೆವಿಡ್ ಫೆರರ್ ಹಾಗೂ ಜಾಂಕೋ ಟಿಪ್ಸರೆವಿಕ್ ಮತ್ತು ಜೋಕೊವಿಕ್ ಹಾಗೂ ಯುವಾನ್ ಡೆಲ್ ಪೊಟ್ರೊ ಪಂದ್ಯ ನಡೆಯಬೇಕಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications