ಸಹಪಾಠಿ ಜತೆ ಎಂಎಂಎಸ್: ಯುವಕನ ಆತ್ಮಹತ್ಯೆ

ಉತ್ತರ ಗೋವಾದ ಸತ್ತಾರಿ ತಾಲೂಕಿನ ಮೋರ್ಲೆಮ್ ಗ್ರಾಮದ ಅರ್ಜುನ್ ಮಾಯಂಕರ್ (21) ತನ್ನ ಸಹಪಾಠಿಯ ಜತೆ ಒಂದಷ್ಟು ಸರಸವಾಡಿದ್ದಾನೆ. ಅದು ಮೊಬೈಲಿನಲ್ಲಿ ಚಿತ್ರೀಕರಣಗೊಂಡು ಎಂಎಂಎಸ್ ಮೂಲಕ ವ್ಯಾಪಕವಾಗಿ ಸರಿದಾಡಿದೆ.
ಹೀಗೆ ತನ್ನ ಬಂಡವಾಳ ಬಯಲಾಗುತ್ತಿದ್ದಂತೆ ಸಹಪಾಠಿ ಮನೆಯವರು ತನ್ನ ಮನೆಯವರಿಗೆ ಎಲ್ಲಿ ಕೆಡುಕುಂಟುಮಾಡುತ್ತಾರೋ ಎಂದು ಅರ್ಜುನ್ ದಿಗಿಲಿಗೆ ಬಿದ್ದಿದ್ದಾನೆ. ಅದರಲ್ಲೂ ತನ್ನ ಸೋದರಿಗೆ ಏನು ಸಂಕಷ್ಟ ಎದುರಾಗುವುದೋ ಎಂಬುದು ಅವನನ್ನು ತೀವವ್ರವಾಗಿ ಕಾಡಿದೆ.
ಇದಕ್ಕೆಲ್ಲ ತನ್ನ ಸಾವೇ ಮುಕ್ತಿ ಕರುಣಿಸಲಿದೆ ಎಂದು ಬಗೆದ ಅರ್ಜುನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮರಣ ಪತ್ರ ಬರೆದಿಟ್ಟು ಸತ್ತಿರುವ ಅರ್ಜುನ್, ತನ್ನ ಗೆಳತಿಯ ಮನೆಯವರು ಎಂಎಂಎಸ್ ಬಗ್ಗೆ ತನ್ನನ್ನು ಬೆದರಿಸುತ್ತಿದ್ದರು ಎಂದಿದ್ದಾನೆ.
ಅಂದಹಾಗೆ ಖುದ್ದು ಅರ್ಜುನನೇ ಸರಸದ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ತೆಗೆದಿದ್ದ. ವಿಡಿಯೋವನ್ನು ನೋಡಿದ ಎರಡೂ ಕಡೆಯವರು ಇಬ್ಬರಿಗೂ ಪರಸ್ಪರ ಮದುವೆ ಮಾಡುವ ಆಲೋಚನೆ ಮಾಡುತ್ತಾರೆ. ಈ ಸಂಬಂಧ ಹುಡುಗ-ಹುಡುಗಿ ಮದುವೆಗೆ ಒಪ್ಪಿ, ಸ್ಥಳೀಯ ನೋಟರಿ ಬಳಿ ನೋಂದಣಿಯನ್ನೂ ಮಾಡಿಸುತ್ತಾರೆ. ಆದರೆ ಅದು ಬರಕತ್ತಾಗುವುದಿಲ್ಲ.
ಹುಡುಗಿಯ ತಾಯಿ ಮತ್ತು ಅವಳ ಮೂವರು ಸೋದರರು ಅರ್ಜುನನಿಗೆ ಬೆದರಿಕೆ ಹಾಕತೊಡಗುತ್ತಾರೆ. ಅಷ್ಟೇ ಅಲ್ಲ, ಅವನ ಸೋದರಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ಬೆದರಿಸುತ್ತಾರೆ. ಇದನ್ನೆಲ್ಲ ಅರ್ಜುನ ಸಾವಿನ ಕದ ತಟ್ಟುವ ಮುನ್ನ ತನ್ನ 2 ಪುಟಗಳ ಸಾವಿನ ಪತ್ರದಲ್ಲಿ ಗೀಚಿದ್ದಾನೆ. ಪೊಲೀಸರು ಈಗ ಹುಡುಗಿಯ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications