ಚುನಾವಣೆ ಕಾಲೇ ಬಿಜೆಪಿಗೆ 50ಲಕ್ಷ ಸದಸ್ಯರು ಬೇಕಂತೆ
ಸದ್ದಿಲ್ಲದೆ ಚುನಾವಣೆ ತಯಾರಿ: ಸೆಪ್ಟೆಂಬರ್ 9 ರಿಂದ 16 ರವರೆಗೆ ನಡೆಯಲಿರುವ ಈ ಸದಸ್ಯತ್ವ ಆಂದೋಲನವು ಪಕ್ಷದ ರಾಷ್ಟ್ರೀಯ ಮಟ್ಟದ ಸಾಂಸ್ಥಿಕ ಚುನಾವಣೆಗಳಿಗೆ ಪೂರ್ವ ತಯಾರಿಯಾಗಿ ನಡೆಯಲಿದೆಯಾದರೂ ರಾಜ್ಯ ಬಿಜೆಪಿ ಅವಧಿ ಮುನ್ನ ಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಸುತ್ತಿದೆಯಾ ಎನಿಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ತಂಡೋಪಾದಿಯಾಗಿ ಬರ ಅಧ್ಯಯನಕ್ಕೆಂದು ಹೊರಟು ಮತದಾರನ ನಾಡಿ ಮಿಡಿತ ಅರಿಯುವ ಪ್ರಯುತ್ನವೂ ನಡೆದಿರುವುದು ಗಮನಾರ್ಹವಾಗಿದೆ.
ಸದ್ಯಸ್ಯತ್ವ ನೋಂದಣಿ ಕಾರ್ಯಕ್ಕೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಾಲನೆ ದೊರೆಯಲಿದೆ. ನಿನ್ನೆ ಪಕ್ಷದ ಮಲ್ಲೇಶ್ವರಂ ಕಚೇರಿಯಲ್ಲಿ ನಡೆದ ಪಕ್ಷದ ನಾನಾ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸರಣಿ ಚಟುವಟಿಕೆಗಳು: ಸದ್ಯಸ್ಯತ್ವ ನೋಂದಣಿ ಕಾರ್ಯ ಸಾಧಿಸಲು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಭಾರತೀಯ ಜನತಾ ಪಕ್ಷವು ಸಜ್ಜಾಗಿದೆ. ಜಿಲ್ಲಾ ಮಟ್ಟದ ಕಾರ್ಯಾಗಾರಗಳು ಆಗಸ್ಟ್ 28-29 ನಡೆಯಲಿವೆ. ಹಾಗೆಯೇ ತಾಲೂಕು ಮಟ್ಟದ ಕಾರ್ಯಾಗಾರಗಳು ಸೆಪ್ಟೆಂಬರ್ 3-4 ನಡೆಯಲಿವೆ. ಈ ಮಧ್ಯೆ, ರಾಜ್ಯ ಬಿಜೆಪಿ ರೈತ ಮೋರ್ಚಾವು ಆಗಸ್ಟ್ 27ರಂದು ರಸಗೊಬ್ಬರ ಬೆಲೆಯೇರಿಕೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ.
ಇದರ
ಜತೆಜತೆಗೆ
ಪಕ್ಷವು
ಇನ್ನೂ
ಅನೇಕ
ಸಂಘಟನಾ
ಚಟುವಟಿಕೆಗಳನ್ನೂ
ಹಮ್ಮಿಕೊಂಡಿದೆ.
*
ರಾಜ್ಯ
ಬಿಜೆಪಿ
ಕಾರ್ಯಕಾರಿ
ಸಭೆ
ಬೆಂಗಳೂರಿನಲ್ಲಿ
ಸೆ.
8
*
ರಾಜ್ಯ
ಬಿಜೆಪಿ
ಮಹಿಳಾ
ಮೋರ್ಚಾ
ಸಭೆ
ಮುರುಡೇಶ್ವರದಲ್ಲಿ
ಆಗಸ್ಟ್
25-26
*
ರಾಜ್ಯ
ಬಿಜೆಪಿ
ಯುವ
ಮೋರ್ಚಾ
ಸಭೆ
ಬೆಳಗಾವಿಯಲ್ಲಿ
ಆಗಸ್ಟ್
25-26