ಕೋಟಾ ಕೆಟರಾಕ್ಟ್ ದುರಂತ: 1ಸಾವು, 7ಮಂದಿಗೆ ದೃಷ್ಟಿನಾಶ

ಆಗಸ್ಟ್ 1ರಿಂದ 3 ರ ಮಧ್ಯೆ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆ ವೇಳೆ ಕಲುಷಿತಗೊಂಡಿದ್ದ ದ್ರಾವಣ ಬಳಿಸಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.
CNSL Eye Hospital ನಲ್ಲಿ ಒಟ್ಟು 38 ಮಂದಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರಲ್ಲಿ 7 ಮಂದಿಗೆ ಸೋಂಕು ತಗುಲಿತು. ಇನ್ನು, ಐರೊಡಿ ಗ್ರಾಮದ ನರಸಿಂಹ ಶೆಟ್ಟಿ (72) ಎಂಬುವವರು ಆಗಸ್ಟ್ 2ರಂದು ಸಾವನ್ನಪ್ಪಿದ್ದಾರೆ.
ಹೃದಯಾಘಾತಕ್ಕೆ ತುತ್ತಾದ ಇವರನ್ನು ತಕ್ಷಣ ಮಣಿಪಾಲದಲ್ಲಿ ಕಸ್ತೂರ್ ಬಾ ಆಸ್ಪತ್ರೆಗೆ ಸೇರಿಸಲಾಗಿ, ಅಲ್ಲಿ ಮೃತಪಟ್ಟರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ ತಿಳಿಸಿದ್ದಾರೆ.
ದೃಷ್ಟಿ ಕಳೆದುಕೊಂಡವರ ವಿವರ: ಗಿಳಿಯಾರು ಗ್ರಾಮದ ಶಿವರಾಂ ಜೋಗಿ (60), ಸಾಲಿಗ್ರಾಮದ ಗಿರಿಜಾ (50), ಬ್ರಹ್ಮಾವರ ಹೆರೂರಿನ ಪಂಜು ಪೂಜಾರಿ (68), ಕುಂದಾಪುರದ ಸೀತಾ ಬಿ ಪೂಜಾರಿ (52), ಅಂಪಾರದ ಮಂಜುನಾಥ ಉಡುಪ (75), ಕೋಟೇಶ್ವರದ ನರಸ ಪೂಜಾರಿ (62) ಮತ್ತು ನರಸಿಂಗ ಶೆಟ್ಟಿ. ಇವರೆಲ್ಲ ಬಡ ಕುಟುಂಬಗಳಿಂದ ಬಂದವರು ಎನ್ನಲಾಗಿದೆ.
'ಇವರಿಗೆಲ್ಲಾ ತುರ್ತು ಚಿಕಿತ್ಸೆ ನಿಡಲಾಗುತ್ತಿದೆ. ಆದರೆ ದೃಷ್ಟಿ ಮರಳಿ ಬರುವ ಸಾಧ್ಯತೆ ತುಂಬ ಕಡಿಮೆ. CNSL Eye Hospitalನಲ್ಲಿ ಕೆಟರಾಕ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಎಲ್ಲರಿಗೂ ಹೀಗಾಗಿದೆ ಎನ್ನುವ ಹಾಗಿಲ್ಲ.
ಮೆದುಳಿಗೆ ಸೋಂಕು ತಲುಪುವುದನ್ನು ತಡೆಗಟ್ಟಲು ಕಣ್ಣುಗುಡ್ಡೆ ಮೇಲಿನ ನಿರ್ಜೀವ ಅಂಗಾಂಶವನ್ನು ತೆಗೆಯಲು ಈ ದ್ರಾವಣ ಬಳಸಲಾಗಿತ್ತು. ಯಾರೆಲ್ಲ ಕಲುಷಿತ ದ್ರಾವಣ ಬಳಿಸಿದ್ದಾರೋ ಅವರಿಗೆ ದೃಷ್ಟಿ ಹೋಗಿದೆ' ಎಂದು ಡಾ. ಬಾಯಾರಿ ಹೇಳಿದ್ದಾರೆ.
'ಒಬ್ಬರ ಸಾವು ಮತ್ತು 7 ಮಂದಿಯ ದೃಷ್ಟಿ ನಾಶಕ್ಕೆ ಕಾರಣವಾಗಿರುವ ಕಲುಷಿತ ದ್ರಾವಣವನ್ನು ಇಂದು (ಆಗಸ್ಟ್ 17) ಹೆಚ್ಚಿನ ಪರೀಕ್ಷೆ ಮತ್ತು ತನಿಖೆಗಾಗಿ ಕಳಿಸಲಾಗುವುದು. ಇಡೀ CNSL Eye Hospitalಯನ್ನು ಪರಿವೀಕ್ಷಿಸಲಾಗುವುದು. ವರದಿಯ ಆಧಾರದ ಮೇಲೆ ತಪ್ಪಿತಸ್ಥರ ಮೇಲೆ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿ ಎಂ ಟಿ ರೇಜು ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications