ಮೊಟೊರೊಲಾ: 4000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ಸರ್ಚ್ ಇಂಜಿನ್ ದಿಗ್ಗಜ್ಅ ಗೂಗಲ್ ಸಂಸ್ಥೆ ಮೊಟೊರೊಲಾ ಹ್ಯಾಂಡ್ ಸೆಟ್ ವಿಭಾಗವನ್ನು ಕಳೆದ ಮೇ ನಲ್ಲಿ 12.5 ಬಿಲಿಯನ್ ಡಾಲರ್ ನೀಡಿ ಖರೀದಿಸಿತ್ತು. ನಂತರ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿ ಬೆಳಸಲು ಸಂಸ್ಥೆ ಸಾಕಷ್ಟು ಶ್ರಮಿಸಿತ್ತು. ಗುರ್ ಗಾಂವ್ ನ ಕಚೇರಿಯಲ್ಲಿ ಸುಮಾರು 300 ಉದ್ಯೋಗಿಗಳಿದ್ದಾರೆ.
ಒಟ್ಟಾರೆ ಸಿಬ್ಬಂದಿಯ ಸಂಖ್ಯೆಯಲ್ಲಿ ಶೇ 20 ರಷ್ಟು(ಸುಮಾರು 4,000 ಜನ) ಸಿಬ್ಬಂದಿಯನ್ನು ಮೊಟೊರೊಲಾ ಕಳೆದುಕೊಳ್ಳಲಿದೆ. ಆದರೆ, ಪಿಂಕ್ ಸ್ಲಿಪ್ ಜೊತೆಗೆ ಹೊರ ಹೋಗುವ ಉದ್ಯೋಗಿಗಳಿಗೆ ಸೂಕ್ತ ಪ್ಯಾಕೇಜ್ ಹಾಗೂ ಇತರೆಡೆ ಉದ್ಯೋಗಿ ದೊರಕಿಸಿಕೊಡುವಲ್ಲಿ ಸಹಾಯ ಹಸ್ತ ಚಾಚಿದೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿರುವ ಪೈಪೋಟಿ ಸುಧಾರಣೆಗಾಗಿ ಹಾಗೂ ತನ್ನ 17,000 ಪೇಟೆಂಟ್ ಗಳನ್ನು ಸಮರ್ಥವಾಗಿ ಬಳಸಲು ಮೊಟೊರೊಲಾ ಮೊಬೈಲ್ ಸಂಸ್ಥೆಯನ್ನು ಗೂಗಲ್ ಖರೀದಿಸಿತ್ತು. ಮೊಟೊರೊಲಾ ತನ್ನದೇ ಸ್ಮಾರ್ಟ್ ಫೋನ್ ಹಾಗೂ ಇತರೆ ಮೊಬೈಲ್ ಸಾಧಕಗಳನ್ನು ತಯಾರಿಸುವ ಸೌಲಭ್ಯ ಕೂಡಾ ನೀಡಲಾಗಿತ್ತು.
ಆಪಲ್ ಹಾಗೂ ಸ್ಯಾಮ್ ಸಂಗ್ ಜೊತೆ ಪೈಪೋಟಿ ನಡೆಸಲು ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಮತ್ತೆ ಜಿಗಿದೇಳಲು ಮೊಟೊರೊಲಾ ಚಿಂತನೆ ನಡೆಸಿದೆ ಎನ್ನಲಾಗಿದೆ.
1928ರಲ್ಲಿ ಚಿಕಾಗೋದಲ್ಲಿ ಆರಂಭವಾದ ಮೊಟೊರೊಲಾ, 1973ರಲ್ಲಿ ಮೊಟ್ಟಮೊದಲ ವಾಣಿಜ್ಯ ಸೆಲ್ ಫೋನ್ ಹೊರಬಿಟ್ಟಿತ್ತು. 2004ರ ಹೊತ್ತಿಗೆ Razr ಮಾಡೆಲ್ ಮೂಲಕ ಸೆಲ್ ಫೋನ್ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆಯಿತು.
ಮೊಟೊರೊಲಾ ಸಲ್ಯೂಷನ್ ಬಿಟ್ಟು ಗೂಗಲ್ ಜೊತೆ ಸೇರಿದ ಮೇಲೆ ಮೊಟೊರೊಲಾ ಮೊಬಿಲಿಟಿ ಮೊದಲ 6 ವಾರದಲ್ಲೇ 233 ಮಿಲಿಯನ್ ಡಾಲರ್ ಕಳೆದುಕೊಂಡಿತ್ತು. ಬಹುತೇಕ ತ್ರೈಮಾಸಿಕದಲ್ಲಿ ಲಾಭವಿಲ್ಲದೆ ಸಂಸ್ಥೆ ಮುಂದುವರೆಯಿತು. ಸಿಬ್ಬಂದಿ ಕಡಿತದ ನಂತರ ಉನ್ನತಾಧಿಕಾರಿಗಳ ಮಟ್ಟದಲ್ಲಿ ಕತ್ತರಿಯಾಗುವ ಸಾಧ್ಯತೆಗಳಿದೆ. ಅದರಲ್ಲೂ ಏಷ್ಯಾ ಹಾಗೂ ಭಾರತದ ಕೇಂದ್ರಗಳ ಅಧಿಕಾರಿಗಳು ಹುದ್ದೆ ತ್ಯಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications