ಸುಶೀಲ್ ಕುಮಾರ್ಗೆ ಕುಸ್ತಿಯಲ್ಲಿ ಬೆಳ್ಳಿ ಪದಕ
ಒಲಿಂಪಿಕ್ಸ್ ನ ಅಂತಿಮ ದಿನವಾದ ಭಾನುವಾರ (ಆ.12) ಸಂಜೆ 6.20 ಗಂಟೆಗೆ ಆರಂಭವಾದ ಪಂದ್ಯದಲ್ಲಿ ಸುಶೀಲ್ ಕುಮಾರ್ ವಿರುದ್ಧ ಜಪಾನಿನ ಯೊನೆಮಿಟ್ಸು ಅವರು ಮೊದಲ ಗೇಮ್ ನಲ್ಲಿ 1-0 ಮುನ್ನಡೆ ಪಡೆದರು. ಸುಶೀಲ್ ಕುಮಾರ್ ಗಿಂತ ಕೊಂಚ ವೇಗವಾಗಿ ಪಟ್ಟುಗಳನ್ನು ಹಾಕಿದ ಜಪಾನಿನ ಕುಸ್ತಿ ಪಟು ಮೊದಲ ಗೇಮ್ ಮುನ್ನಡೆ ಲಾಭದಾಯಕವಾಗಿ ಪರಿಣಮಿಸಿತು.
ಎರಡನೇ ಗೇಮ್ (ಅವಧಿ) ನಲ್ಲಿ ಕೂಡಾ ಜಪಾನಿನ ಯೊನೆಮಿಟ್ಸು ಅವರು 2-1ರ ಅಂತರದಿಂದ ಗೆದ್ದುಕೊಂಡರು. ಒಟ್ಟಾರೆ ತಲಾ 2 ನಿಮಿಷದ 2 ಅವಧಿಯಲ್ಲಿ 3-1 ಅಂಕದಿಂದ ಜಪಾನ್ ಕುಸ್ತಿಪಟು ಯೊನೆಮಿಟ್ಸು ಚಿನ್ನದ ಪದಕ ಕೊರಳಿಗೇರಿಸಿಕೊಂಡರು.
ರಜತ ಪದಕಕ್ಕೆ ತೃಪ್ತಿ ಪಟ್ಟರೂ ಸುಶೀಲ್ ಸಾಧನೆಗೆ ಸಾಟಿ ಇಲ್ಲ. ಸತತ ಎರಡನೇ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವುದು ಹಾಗೂ ಒಲಿಂಪಿಕ್ಸ್ ನಲ್ಲಿ ಕುಸ್ತಿ ಫೈನಲ್ ಸ್ಪರ್ಧಿಸಿ ರಜತ ಗೆದ್ದಿರುವುದು ಇದೇ ಮೊದಲು.
ಒಟ್ಟಾರೆ ಭಾರತ 2 ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ 6 ಪದಕ ಗೆದ್ದು 55ನೇ ಸ್ಥಾನದಲ್ಲಿ ಒಲಿಂಪಿಕ್ಸ್ ಅಭಿಯಾನಕ್ಕೆ ಮುಕ್ತಾಯ ಹಾಡಿದೆ.
ಆದರೆ, ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ಎ ಟನಾಟರೊವ್ ವಿರುದ್ಧ 3-1ರ ಅಂತರದಿಂದ ಸುಶೀಲ್ ಜಯ ಗಳಿಸಿದರು. ಸುಶೀಲ್ ಕುಮಾರ್ ಫೈನಲ್ ನಲ್ಲಿ ಸೆಣಸುವ ಅರ್ಹತೆ ಪಡೆಯುವ ಮೂಲಕ ಚಿನ್ನ ಅಥವಾ ಬೆಳ್ಳಿ ಪದಕ ಗ್ಯಾರಂಟಿಯಾಗಿತ್ತು. ಫೈನಲ್ ಪ್ರವೇಶಿಸುವ ಮೂಲಕ ಸತತವಾಗಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ದಾಖಲೆ ನಿರ್ಮಿಸಿರುವ ಸುಶೀಲ್ ಕುಮಾರ್ ಅವರು ಚಿನ್ನದ ಪದಕ ಆಸೆ ಹುಟ್ಟಿಸಿದ್ದರು.
ಫೈನಲ್ ನಲ್ಲಿ ಕೆಂಪು ಬಣ್ಣದ ದಿರಿಸು ಧರಿಸಿ ಆಡಿದ 29 ವರ್ಷದ ವಿಶ್ವದ ನಂ.1 ಕುಸ್ತಿ ಪಟು ಸುಶೀಲ್ ಕುಮಾರ್ ಅವರಿಗೆ ವಿಶ್ವದ ನಂ.2 ಕುಸ್ತಿ ಪಟು ಜಪಾನಿನ ಯೊನೆಮಿಟ್ಸು ಕಠಿಣ ಸವಾಲು ಎಸೆದರು.
ಇದಕ್ಕೂ ಮುನ್ನ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಶೀಲ್ ಸೆಮಿಫೈನಲ್ ನಲ್ಲಿ ಟಂಟಾರೋವ್ ವಿರುದ್ಧ 3-1 ರಲ್ಲಿ ಜಯ ಗಳಿಸಿದರು. ಉಜ್ಬೆಕ್ ಪ್ರತಿಸ್ಪರ್ಧಿ ನವರುಜೊರ್ ಇಕ್ತಿಯೊರ್ ರನ್ನು 6-3 ಅಂತರದಲ್ಲಿ ಸೋಲಿಸಿದರು. ಭಾನುವಾರ ಪ್ರೀ ಕ್ವಾಟರ್ ಫೈನಲ್ ನಲ್ಲಿ ಬೀಜಿಂಗ್ 2008ರಲ್ಲಿ ಚಿನ್ನ ಗೆದ್ದಿದ್ದ ಸ್ಪರ್ಧಿಯನ್ನು ಸುಶೀಲ್ ಸುಲಭವಾಗಿ ಕೆಡವಿದ್ದರು. ಟರ್ಕಿಯ ರಮಜಾನ್ ಸಹೀನ್ ಅವರನ್ನು 3-1 ಅಂತದಿಂದ ಸುಶೀಲ್ ಸೋಲಿಸಿದ್ದರು.
ಜಪಾನಿನ ಕುಸ್ತಿ ಪಟು ಸೆಮಿಫೈನಲ್ ನಲ್ಲಿ ಹಸನೋವ್ ರನ್ನು 3-0 ಅಂತರದಿಂದ ಭರ್ಜರಿಯಾಗಿ ಸೋಲಿಸಿದ್ದಾರೆ. ಕ್ವಾಟರ್ ಫೈನಲ್ ನಲ್ಲಿ ವೆರನೆಸ್ ರನ್ನು 3-1 ಅಂತರದಿಂದ ಹಾಗೂ ಪ್ರೀ ಕ್ವಾಟರ್ ಫೈನಲ್ ನಲ್ಲಿ ಲೋಪೇಜ್ ರನ್ನು 3-1 ಅಂತರದಿಂದ ಸೋಲಿಸಿದ್ದಾರೆ.
ಒಲಿಂಪಿಕ್ಸ್ 2012 ಕುಸ್ತಿ ಸ್ಪರ್ಧೆಯಲ್ಲಿ ಶನಿವಾರ(ಆ.11) ನಡೆದ 60 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದ ಸಾಧನೆ ಮೆರೆದಿದ್ದರು.29 ವರ್ಷದ ಯೋಗೇಶ್ವರ್ ಅವರು ಉತ್ತರ ಕೊರಿಯಾದ ಜೊಂಗ್ ಮ್ಯಾಂಗ್ ರಿ ಅವರನ್ನು 3-1 ಅಂತರದಿಂದ ಸೋಲಿಸಿ ಪದಕ ಕೊರಳಿಗೇರಿಸಿಕೊಂಡರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ













Click it and Unblock the Notifications