ಇನ್ಫೋಸಿಸ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಕಾಂಗ್ನಿಜೆಂಟ್

ವಿಶೇಷವೆಂದರೆ ವಾರ್ಷಿಕ ಪ್ರಗತಿ (Y-o-Y) ನಲ್ಲಿ ಟಿಸಿಎಸ್ 13.1% ಪ್ರಗತಿ ಹಾಗೂ ಇನ್ಫೋಸಿಸ್ 4.8% ರಷ್ಟು ಪ್ರಗತಿ ಸಾಧಿಸಿದ್ದರೆ ಸಿಟಿಎಸ್ ಸಂಸ್ಥೆ 20% ರಷ್ಟು ಪ್ರಗತಿಯೊಂದಿಗೆ ಉತ್ತಮ ಅಂತರ ಕಾಯ್ದುಕೊಂಡಿದೆ.
ಸುಮಾರು ಎರಡು ದಶಕಗಳ ಕಾಲ ಎರಡನೇ ಸ್ಥಾನದಲ್ಲಿದ್ದ ಇನ್ಫೋಸಿಸ್ ಸಂಸ್ಥೆಗೆ ತೀವ್ರ ಮುಖಭಂಗ ಅನುಭವಿಸಿದೆ. ನ್ಯಾಸ್ಡಕ್ ನಲ್ಲೂ ಕಾಣಿಸಿಕೊಂಡಿರುವ ಕಾಂಗ್ನಿಜೆಂಟ್ ಸಂಸ್ಥೆಯ ಶೇ 75ಕ್ಕೂ ಅಧಿಕ ಉದ್ಯೋಗಿಗಳು ಭಾರತದ ಅಭಿವೃದ್ಧಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೇ 11-14ರಷ್ಟು ಕೈಗಾರಿಕಾ ಪ್ರಗತಿ ಕಾಣಲು ನಿರ್ದೇಶನ ನೀಡಿದ್ದ ನ್ಯಾಸ್ ಕಾಮ್ ಗೆ ಸಿಟಿಎಸ್ ಪ್ರಗತಿ ಕೊಂಚಮಟ್ಟಿಗೆ ನಿರಾಳತೆ ತಂದಿದೆ.
ಆದಾಯದ ಮೇಲೆ ಆದಾಯ: ಶೇ 21ರಷ್ಟು ನಿವ್ವಳ ಲಾಭದೊಂದಿಗೆ 252 ಮಿಲಿಯನ್ ಡಾಲರ್ ಗಳಿಸಿರುವ ಸಿಟಿಎಸ್, 2011ರ 2ನೇ ತ್ರೈಮಾಸಿಕದಲ್ಲಿ 208 ಮಿಲಿಯನ್ ಡಾಲರ್ ಮಾತ್ರ ಗಳಿಸಿತ್ತು. ಆದಾಯ 1.8 ಬಿಲಿಯನ್ ಡಾಲರ್ ನಂತೆ ಶೇ 20ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 1.5 ಬಿಲಿಯನ್ ಡಾಲರ್ ಇತ್ತು.
ಪ್ರಸಕ್ತ ತ್ರೈಮಾಸಿಕದಲ್ಲಿ ನಿವ್ವಳ ಉದ್ಯೋಗಿಗಳ ಸಂಖ್ಯೆ 4,700ಕ್ಕೇರಿದೆ. ನೇಮಕಾತಿಯಲ್ಲಿ ಶೇ 35ರಷ್ಟು ಪಾಲು ನೇರವಾಗಿ ಕಾಲೇಜು ಕ್ಯಾಂಪಸ್ ಸಂದರ್ಶನ ಮೂಲಕ ನಡೆದಿದೆ. ಶೇ 65 ರಷ್ಟು ಅನುಭವಿ ವೃತ್ತಿಪರರನ್ನು ಸೇರಿಸಿಕೊಳ್ಳಲಾಗಿದೆ. ಕಳೆದ ವರ್ಷ ಲಕ್ಷ ಉದ್ಯೋಗಿಗಳ ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಾಂಗ್ನಿಜೆಂಟ್ ಈಗ ಒಟ್ಟಾರೆ 1,45,000 ಉದ್ಯೋಗಿಗಳಿದ್ದಾರೆ.
ಮೂರನೇ ತ್ರೈಮಾಸಿಕದಲ್ಲಿ ಕನಿಷ್ಠ ಪಕ್ಷ 1.87 ಬಿಲಿಯನ್ ಡಾಲರ್ ಆದಾಯ ನಿರೀಕ್ಷಿಸಲಾಗಿದೆ. 2012ರ ಆರ್ಥಿಕ ವರ್ಷದ ಆದಾಯ ನಿರೀಕ್ಷೆ 7.34 ಬಿಲಿಯನ್ ಡಾಲರ್ ಗೇರಿದೆ. 2011ಕ್ಕೆ ಹೋಲಿಸಿದರೆ ಶೇ 20ರಷ್ಟು ಅಧಿಕವಾಗಿದೆ ಎಂದು ಕಾಂಗ್ನಿಜೆಂಟ್ ಅಧ್ಯಕ್ಷ ಗಾರ್ಡನ್ ಕೊಬರ್ನ್ ಹೇಳಿದ್ದಾರೆ.
ಎರಡನೇ ತ್ರೈಮಾಸಿಕದ ಕೊನೆಗೆ ಸಿಟಿಎಸ್ ಸಂಸ್ಥೆ 815 ರಿಂದ 202 ರಷ್ಟು ಸಕ್ರಿಯ ಗ್ರಾಹಕರನ್ನು ಹೊಂದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸೋಷಿಯಲ್, ಮೊಬೈಲ್, ಅನಾಲಿಟಕಲ್ ಹಾಗೂ ಕ್ಲೌಡ್ ತಂತ್ರಜ್ಞಾನದಲ್ಲಿ ಕಾಂಗ್ನಿಜೆಂಟ್ ಉತ್ತಮ ಪ್ರಗತಿ ಸಾಧಿಸುವ ಗುರಿ ಇದೆ ಎಂದು ಸಿಇಒ ಫ್ರಾನ್ಸಿಸ್ಕೋ ಡಿ ಸೋಜಾ ಹೇಳಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications