ತಿರುಪತಿ ಲಡ್ಡು ಪೇಟೆಂಟ್ ತಿಮ್ಮಪ್ಪನಿಗೇ ಉಳಿಯಿತು

ಈ ಹಿಂದೆಯೇ ಅಂದರೆ 2009ರ ಸೆಪ್ಟೆಂಬರಿನಲ್ಲಿ ತಿರುಪತಿ ತಿರುಮಲ ದೇವಸ್ಥಾನ (TTD) ಆಡಳಿತ ಮಂಡಳಿ ವಿತರಿಸುವ ಲಡ್ಡುವಿಗೆ ವಿಶಿಷ್ಠ ಭೌಗೋಳಿಕ ಸ್ಥಾನಮಾನದ ಪೇಟೆಂಟ್ ನೀಡಲಾಗಿತ್ತು. ಆದರೆ ಇದಕ್ಕೆ ತಕರಾರು ತೆಗೆದ ವ್ಯಕ್ತಿಯೊಬ್ಬರು ತಿರುಪತಿ ಲಡ್ಡು ತಯಾರಿಕೆ ಹಕ್ಕು ತನಗೇ ನೀಡಬೇಕು ಎಂದು ರಗಳೆ ತೆಗೆದಿದ್ದರು. ಇದರಿಂದ ಭಕ್ತರು ಮತ್ತು ಟಿಟಿಡಿ ಆತಂಕಗೊಂಡಿತ್ತು.
ತಿಮ್ಮಪ್ಪನ ಪ್ರಸಾದಕ್ಕೆ ಯಾವುದೇ ಧಕ್ಕೆಯಿಲ್ಲ: ತಿರುವನಂತಪುರದ CSIR-NIIST ವಿಜ್ಞಾನಿ ಆರ್ ಎಸ್ ಪ್ರವೀಣ್ ರಾಜ್ ಸಲ್ಲಿಸಿದ್ದ ವಾದವನ್ನು TTD ಅಲ್ಲಗಳೆದಿತ್ತು. 'ತಿಮ್ಮಪ್ಪನ ಪ್ರಸಾದವಾದ ಲಡ್ಡುವಿನ ತಯಾರಿಕೆ, ಗುಣಮಟ್ಟ ಮತ್ತು ಖ್ಯಾತಿ ವಿಶಿಷ್ಟವಾಗಿದೆ. ಹಾಗಾಗಿ ಲಡ್ಡು ಮೇಲಿನ ಸರ್ವಾಧಿಕಾರವನ್ನೂ ತನಗೇ ನೀಡಬೇಕು' ಎಂದು ಪೇಟೆಂಟ್ ರಿಜಿಸ್ಟ್ರಾಟ್ ಅವರನ್ನು ಮಂಡಳಿ ಕೇಳಿತ್ತು.
ಹಾಗಾಗಿ, ಟಿಟಿಡಿ ಲಡ್ಡುವಿನ ಮೇಲೆ ಪಡೆದಿದ್ದ ವಿಶಿಷ್ಠ ಭೌಗೋಳಿಕ ಸೂಚ್ಯಂಕದ ಪೇಟೆಂಟ್ Geographical Indicator (GI) tag ಪ್ರಶ್ನಿಸಿದ್ದ ಅರ್ಜಿಯನ್ನು ಮೊನ್ನೆ ಸೋಮವಾರ ವಜಾ ಮಾಡಲಾಗಿದೆ.
ಚೆನ್ನೈನಲ್ಲಿರುವ Trade Marks ಮತ್ತು Geographical Indicator ಸಂಸ್ಥೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಚೆನ್ನರಾಜ ಜಿ ನಾಯ್ಡು ಅವರು ಟಿಟಿಡಿ ಪರ ತೀರ್ಪು ನೀಡುತ್ತಾ, ಅರ್ಜಿದಾರ ಪ್ರವೀಣ್ ರಾಜ್ ಅವರಿಗೆ 10,000 ರೂಪಾಯಿ ದಂಡ ವಿಧಿಸಿದರು. ಹೀಗಾಗಿ ವಿಶಿಷ್ಠ ರುಚಿಯ ಲಡ್ಡುವಿನ ಮೇಲಿನ ಪೇಟೆಂಟ್ ಟಿಟಿಡಿಯ ಬಳಿಯೇ ಉಳಿದುಕೊಳ್ಳಲಿದೆ.
ತಿಮ್ಮಪ್ಪನ ಪ್ರಸಾದವಾದ ಲಡ್ಡುವಿಗೆ ಭಾರಿ ಬೇಡಿಕೆ ಇದೆ. ಹಾಗಾಗಿ ನಿಜವಾದ ಲಡ್ಡು ಕಾಳಸಂತೆಯಲ್ಲೂ ಮಾರಾಟವಾಗುತ್ತದೆ. ಜತೆಗೆ ಬೆಟ್ಟದ ಕೆಳಗೆ ತಿರುಪತಿ ಊರಿನಲ್ಲೂ ನಕಲಿ ಲಡ್ಡು ಮಾರಾಟವಾಗುತ್ತದೆ. ಅಮಾಯಕ ಭಕ್ತರು ಅದುವೇ ತಿಮ್ಮಪ್ಪನ ಪ್ರಸಾದ ಅಂದುಕೊಂಡು ಖರೀದಿಸಿ ಮೋಸ ಹೋಗುತ್ತಾರೆ.
ಇದಕ್ಕೆಲ್ಲ ಕಡಿವಾಣ ಹಾಕಲು Geographical Indications of Goods (Registration and Protection) Act, 1999 ಅನುಸಾರ ತಿಮ್ಮಪ್ಪನ ಪ್ರಸಾದಕ್ಕೆ GI tag ನೀಡಬೇಕು ಎಂದು ಟಿಟಿಡಿ ಕೋರಿತ್ತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications