ಉಜಿರೆ: ಇಬ್ಬರು ಕಾಲೇಜು ಯುವತಿಯರ ಆತ್ಮಹತ್ಯೆ

ಪ್ರೇಮ-ಪೀಡನೆ: ಇಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ 17 ವರ್ಷದ ಐಶ್ವರ್ಯಾ ದೀಪಿಕಾ ಶುಕ್ರವಾರ ಬೇಳಗ್ಗೆಯೇ ನೇಣು ಹಾಕಿಕೊಂಡು ಸತ್ತಿದ್ದಾಳೆ.
ಪಕ್ಕದ ಮನೆಯ ಹರ್ಷನ್ ನಾಯರ್ ಪೀಡೆ ಪ್ರೀತಿಗೆ ಬೇಸತ್ತು ಈಕೆ ಸಾವಿಗೀಡಾಗಿದ್ದಾಳೆ. ತನ್ನನ್ನು ಪ್ರೀತಿಸುವಂತೆ ಹರ್ಷನ್ ಸದಾ ಕಾಟಕೊಡುತ್ತಿದ್ದ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಐಶ್ವರ್ಯಾ ದೀಪಿಕಾ ಸೀದಾ ನೇಣಿಗೆ ಕೊರಳೊಡ್ಡಿದ್ದಾಳೆ.
ಹರ್ಷನ್ ನಾಯರನ ಪ್ರೇಮ-ಪೀಡೆ ಬಗ್ಗೆ ಐಶ್ವರ್ಯಾ ದೀಪಿಕಾ ತನ್ನ ಪೋಷಕರು ಮತ್ತು ಅಣ್ಣ ದೀಪಕ್ ಗೆ ಹೇಳಿಕೊಂಡಿದ್ದಳು. ಒಮ್ಮೆ ದೀಪಕ್, ಹರ್ಷನನ್ನು 'ವಿಚಾರಿಸಿಕೊಂಡಿದ್ದ'.
ಇದಕ್ಕೆ ಪ್ರತಿಯಾಗಿ ಪ್ರೇಮಪೀಡಿತ ಹರ್ಷನ್ ತನ್ನ ಸ್ನೇಹಿತರ ಜತೆಗೂಡಿ ಸಾರ್ವಜನಿಕರೆದುರು ದೀಪಕ್ ಗೆ ಗೂಸಾ ಕೊಟ್ಟಿದ್ದ. ಮತ್ತು ಐಶ್ವರ್ಯಾ ದೀಪಿಕಾ ಅಪ್ಪ-ಅಮ್ಮನನ್ನು ಹೀಯಾಳಿಸಿದ್ದ.
ಗಾಯಗೊಂಡ ದೀಪಕ್ ಗೆ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ದೀಪಿಕಾ ತಂದೆ-ತಾಯಿ ಮಾನಸಿಕವಾಗಿ ಆಘಾತಗೊಂಡಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಐಶ್ವರ್ಯಾ ದೀಪಿಕಾ ಸಾವಿಗೆ ಶರಣಾದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪೊಲೀಸರು ಹರ್ಷನ್ ನಾಯರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಐಶ್ವರ್ಯಾ ದೀಪಿಕಾ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ನಿನ್ನೆ ರಜೆ ಘೋಷಿಸಲಾಗಿತ್ತು.
ಮತ್ತೊಂದು ಪ್ರಕರಣದಲ್ಲಿ 20 ವರ್ಷದ ಸೋನಿಯಾಲ್ ಶುಕ್ರವಾರ ಸಾಯಂಕಾಲ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳು ಕೈಕಂಬದ ಸಾಮ್ರಾಟ್ ಇಂಡಸ್ಟ್ರಿಯ ಮಾಲೀಕ ಪದ್ಮನಾಭ ಭಂಡಾರಿ ಅವರ ಪುತ್ರಿ.
ಕಾಲೇಜಿನ ವಾಪಸಾದ ಸೋನಿಯಾಲ್ ಸೀದಾ ತನ್ನ ಕೊಠಡಿ ಸೇರಿಕೊಂಡವಳೇ ನೇಣಿಗೆ ಗೋಣೊಡ್ಡಿದ್ದಾಳೆ. ಸೋನಿಯಾಲ್ ಸಾವಿಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.












Click it and Unblock the Notifications