ಜನಾರ್ದನ ರೆಡ್ಡಿಯೇ ಜಡ್ಜಿಗೆ ಲಂಚದ ಸ್ಕೆಚ್ ಹಾಕಿದ್ದು

ಈ ಸಂಬಂಧ, ಜನಾರ್ದನ ರೆಡ್ಡಿಯ ನಿಕಟ ಬಂಧು, ಜೈಲುವಾಸಿ ಜಿ ದಶರಥ ರಾಮರೆಡ್ಡಿ ಅವರು ಭ್ರಷ್ಟಾಚಾರ ನಿಗ್ರಹ ದಳದೆದುರು (ACB) ನೀಡಿರುವ ತಪ್ಪೊಪ್ಪಿಗೆ ಹೇಳಿಕೆ ನಿಜಕ್ಕೂ ಗಾಬರಿ ಹುಟ್ಟಿಸುವಂತಾಗಿದೆ. 'ಜಾಮೀನಿಗಾಗಿ-ಲಂಚ' ಪ್ರಕರಣ ಮೊಳಕೆಯೊಡೆದಿದ್ದೇ ಚಂಚಲಗೂಡ ಜೈಲಿನಲ್ಲಿ.
ಹೇಗಾದರೂ ಮಾಡಿ ಜಾಮೀನು ಪಡೆಯಲೇಬೇಕು. ಅದಕ್ಕಾಗಿ ನೇರವಾಗಿ ಸಿಬಿಐ ನ್ಯಾಯಾಧೀಶರನ್ನೇ ಬುಕ್ ಮಾಡುಕೊಂಡರೂ ಆಯ್ತು. ಅದಕ್ಕೆ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ವಾ' ಎಂದು ಜನಾರ್ದನ ರೆಡ್ಡಿಯೇ ಬೀಜ ಬಿತ್ತಿದರು ಎಂದು ದಶರಥ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಇದರಿಂದ 'ಜಾಮೀನಿಗಾಗಿ ಲಂಚ' ಪ್ರಕರಣದ ಒಳಕೋವೆಗಳು ಚಂಚಲಗೂಡ ಜೈಲನ್ನು ತಲುಪಿವೆ. 'ನಾನು ಜೈಲಿನಲ್ಲಿದ್ದೆ. ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಅಂದರೆ ನನ್ನ ಜಾಮೀನಿಗಾಗಿ ಯಾರು ಯಾರಿಗೆ ಲಂಚ ನೀಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ' ಎಂದು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂಬ ದೂರಾಲೋಚನೆಯಲ್ಲಿದ್ದ ಜನಾರ್ದನ ರೆಡ್ಡಿಗೆ ದಶರಥ ರೆಡ್ಡಿ ಹೇಳಿಕೆ ಈಗ ಮುಳುಗು ನೀರು ತಂದಿರುವುದಂತೂ ಗ್ಯಾರಂಟಿ.
ಎಲ್ಲರ ಬೊಟ್ಟು ಜೈಲು ಜನಾರ್ದನನತ್ತ: ಅಷ್ಟಕ್ಕೂ ರೆಡ್ಡಿಗೆ ಜೈಲುವಾಸ ಅಷ್ಟೊಂದು ಬೇಸರ ತರಿಸಿತ್ತಾ? ಅಥವಾ 'ದುಡ್ ಬಿಸಾಕಿದ್ರೆ ಏನ್ ಬೇಕಾದ್ರೂ ಸಿಗುತ್ತೆ' ಎಂದು ತಾವು ಬೆಳೆಸಿಕೊಂಡು ಬಂದಿದ್ದ ತಮ್ಮದೇ ಸಿದ್ಧಾಂತದಲ್ಲಿ ಆತನಿಗೆ ಅಷ್ಟೊಂದು ನಂಬಿಕೆಯಿತ್ತಾ?
ನೋಡಿ, ಸನ್ಮಾನ್ಯ ಜನಾರ್ದನ ರೆಡ್ಡಿಗಾರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬಂದವರೇ ಕೆಲವೇ ನಿಮಿಷಗಳಲ್ಲಿ ಒಂದು ಮಾತು ಹೇಳುತ್ತಾರೆ: ಕನ್ನಡದ ನೆಲ-ಜಲ ಚೆನ್ನ. ಏನೇ ಆಗಲಿ ನಾನು ಇನ್ನು ಚಂಚಲಗೂಡ ಜೈಲಿಗೆ ವಾಪಸು ಹೋಗುವುದಿಲ್ಲ. ಇಲ್ಲಿನ ಅಧಿಕಾರಿಗಳು ತುಂಬಾ ಒಳ್ಳೆಯವರು ಎಂದು ಎದುರಿಗಿದ್ದ ಪೊಲೀಸರನ್ನು ತೋರಿಸುತ್ತಾ ಹೇಳಿದ್ದರು. ಈ ಮಾತಿನ ಮರ್ಮ ಈಗ ಬಯಲಾಗಿದೆ.
ಜನಾರ್ದನ ರೆಡ್ಡಿಯ ಈ ಮಾತುಗಳನ್ನು ಕೇಳಿದ ಮಂದಿ ಹೌದಾ? ರೆಡ್ಡಿ ಹಾಗಾದರೆವಾಪಸು ಹೈದರಾಬಾದಿಗೆ ಹೋಗೋದಿಲ್ವಾ? ಎಂಬ ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೇಳಿದ್ದರು. ರೆಡ್ಡಿ ಅಂದು ಅಷ್ಟೊಂದು ಆತ್ಮವಿಶ್ವಾಸದಿಂದ ಹೇಳಿದ್ದ ಆ ಮಾತಿಗೆ ಇಂದು ಅರ್ಥ ಸಿಕ್ಕಿದೆ. ಜಾಮೀನು ಪಡೆಯಲು ಖುದ್ದು ನ್ಯಾಯಾಧೀಶರಿಗಳೇ ಬುಕ್ ಆಗಿದ್ದಾರೆ. ಹಾಗಾಗಿ, ಜಾಮೀನು ಪಡೆದು ಹೊರಬರುವುದು ನಿಶ್ಚಿತ ಎಂದು ರೆಡ್ಡಿ ತುಂಬು ವಿಶ್ವಾಸದಿಂದ ಹೇಳಿದ್ದರು.
ಆಂಧ್ರದ ದಶರಥ, ಜನಾರ್ದನ ರೆಡ್ಡಿಯ ಸಂಬಧಿ ಹೇಗೆ? ಆಂಧ್ರದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಉದ್ಯಮಿ ದಶರಥ ರೆಡ್ಡಿಯದು ದೊಡ್ಡ ಹೆಸರು. ಇವರು ತಮ್ಮ ಪುತ್ರಿಯನ್ನು ಜನಾರ್ದನ ರೆಡ್ಡಿಯ ಸೋದರಳಿಯನಿಗೆ ಕೊಟ್ಟು ಮದುವೆ ಮಾಡಿಕೊಂಡಿದ್ದಾರೆ.
KMF ಸೋಮಶೇಖರ ರೆಡ್ಡಿ ಅನೇಕ ಸಲ ಚಂಚಲಗೂಡ ಜೈಲಿಗೆ ಭೇಟಿ ನೀಡಿ ಸೊದರ ಜನಾರ್ದನನನ್ನು ಭೇಟಿಯಾಗುತ್ತಿದ್ದರು. ಆದರೆ ಅದೊಮ್ಮೆ ಜನಾರ್ದನ ರೆಡ್ಡಿ ಜಾಮೀನು ಸ್ಕೆಚ್ ಸಿದ್ಧಪಡಿಸುತ್ತಿದ್ದಂತೆ plan ಪ್ರಕಾರ ನ್ಯಾಯಾಧೀಶರುಗಳನ್ನು ಬುಕ್ ಮಾಡಿಕೊಳ್ಳಲು ದಶರಥನನ್ನು ಸಂಪರ್ಕಿಸುವಂತೆ ಸೋಮಶೇಖರ್ ಗೆ ಜನಾರ್ದನ ಹಿತವಚನ ಹೇಳುತ್ತಾರೆ.
ಆಗ ದಶರಥ ರೆಡ್ಡಿ ಕಣಕ್ಕಿಳಿಯುತ್ತಾರೆ. ಮತ್ತು ತಮಗೆ ಪರಿಚಯವಿರುವ ವಕೀಲರುಗಳ ಮೂಲಕ KMF ಸೋಮಶೇಖರ ಜತೆಗೂಡಿ ಜಡ್ಜುಗಳನ್ನು ಭೇಟಿಯಾಗಿ ಜಾಮೀನಿಗೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲೇ ಸ್ವತಃ KMF ಸೋಮಶೇಖರ 100 ಕೋಟಿ ರುಪಾಯಿ ಲಂಚದ ಪ್ರಸ್ತಾವನೆ ಮಾಡುತ್ತಾರೆ.
'ಜಾಮೀನಿಗಾಗಿ-ಲಂಚ' ಪ್ರಕರಣದಲ್ಲಿ ಮತ್ತೊಂದು ಹೆಸರೂ ಪ್ರಮುಖವಾಗಿ ಕೇಳಿಬಂದಿದೆ. ಅವರೇ ಆಂಧ್ರದ ಹಾಲಿ ಕಾನೂನು ಸಚಿವ ಎರಸು ಪ್ರತಾಪ ರೆಡ್ಡಿ. ಇವರೂ ಸಹ ಜನಾರ್ದನ ರೆಡ್ಡಿಯ ಸಂಬಂಧಿ. ಆದರೆ ಅವರು ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications