ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ

ಈ ನಡುವೆ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರು ಇಲ್ಲದ್ದನ್ನು ಗಮನಿಸಿದ ಸಿಎಂ, ತಕ್ಷಣವೇ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ. ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ.
33 ಸಚಿವರ ಪೈಕಿ 23 ಸಚಿವರು ತಮಗೆ ಸಿಕ್ಕಿರುವ ಖಾತೆ ಹಾಗೂ ಕೊಠಡಿಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳಿದವರ ಗೊಂದಲ ಮುಂದುವರೆದಿದೆ.
ನಾಲ್ಕು ಸಚಿವರಿಗೆ ಯಾವುದೇ ಜಿಲ್ಲೆ ಉಸ್ತುವಾರಿ ನೀಡಿಲ್ಲ. ಎಸ್ ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ಬಾಲಚಂದ್ರ ಜಾರಕಿಹೊಳಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಯಾವುದೇ ಜಿಲ್ಲೆಗಳ ಉಸ್ತುವರಿ ನೀಡಿಲ್ಲ. ಧಾರವಾಡ ಜಿಲ್ಲೆ ಉಸ್ತುವಾರಿಯನ್ನು ಸ್ವತಃ ಸಿಎಂ ಶೆಟ್ಟರ್ ಅವರೇ ವಹಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಉಸ್ತುವಾರಿ ಡಿ.ಎನ್. ಜೀವರಾಜ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ಸಿಟಿ ರವಿಗೆ ನೀಡುವ ಮೂಲಕ ಒಂದೇ ಕ್ಷೇತ್ರ ಇಬ್ಬರು ಸಚಿವರಿಗೆ ಅವರ ಕ್ಷೇತ್ರಗಳನ್ನೇ ನೀಡಲಾಗಿದೆ.
ಯಾರಿಗೂ ಬೇಡವಾದ ಚಾಮರಾಜನಗರ ಜಿಲ್ಲೆ ಉಸ್ತುವಾರಿಯನ್ನು ವಿ ಸೋಮಣ್ಣ ವಹಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಸೋಮಣ್ಣ ಅವರಿಂದ ಜನರಿಗೆ ಹೆಚ್ಚಿನ ನಿರೀಕ್ಷೆಗಳಿದೆ.
| ಜಿಲ್ಲೆ | ಉಸ್ತುವಾರಿ ಸಚಿವರು |
| ಧಾರವಾಡ | ಜಗದೀಶ್ ಶೆಟ್ಟರ್ |
| ಬಾಗಲಕೋಟೆ | ಗೋವಿಂದ ಕಾರಜೋಳ |
| ಬಿಜಾಪುರ | ಎಸ್.ಕೆ. ಬೆಳ್ಳುಬ್ಬಿ |
| ಕೊಪ್ಪಳ | ಮುರುಗೇಶ್ ನಿರಾಣಿ |
| ಬೆಳಗಾವಿ | ಉಮೇಶ್ ಕತ್ತಿ |
| ಗದಗ | ಕಳಕಪ್ಪ ಬಂಡಿ |
| ಶಿವಮೊಗ್ಗ | ಕೆ.ಎಸ್. ಈಶ್ವರಪ್ಪ |
| ಹಾವೇರಿ | ಸಿ.ಎಂ. ಉದಾಸಿ |
| ದಾವಣಗೆರೆ | ಎಸ್. ಎ. ರವೀಂದ್ರನಾಥ್ |
| ಯಾದಗಿರಿ | ನರಸಿಂಹ ನಾಯಕ(ರಾಜೂ ಗೌಡ) |
| ಚಿಕ್ಕಮಗಳೂರು | ಜೀವರಾಜ್ |
| ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ |
| ಉಡುಪಿ | ಶ್ರೀನಿವಾಸ್ ಪೂಜಾರಿ |
| ದಕ್ಷಿಣ ಕನ್ನಡ | ಸಿ.ಟಿ ರವಿ |
| ತುಮಕೂರು | ಸೊಗಡು ಶಿವಣ್ಣ |
| ಹಾಸನ | ಅರವಿಂದ ಲಿಂಬಾವಳಿ |
| ಚಾಮರಾಜನಗರ | ವಿ ಸೋಮಣ್ಣ |
| ಮೈಸೂರು | ಎಸ್. ಎ. ರಾಮದಾಸ್ |
| ಮಂಡ್ಯ | ಸಿ.ಪಿ ಯೋಗೇಶ್ವರ್ |
| ಬೆಂಗಳೂರು ನಗರ | ಆರ್ ಅಶೋಕ್ |
| ಚಿಕ್ಕಬಳ್ಳಾಪುರ | ಎಂ ನಾರಾಯಣಸ್ವಾಮಿ |
| ಕೋಲಾರ | ವರ್ತೂರು ಪ್ರಕಾಶ್ |
| ರಾಯಚೂರು | ಆನಂದ್ ಆಸ್ನೋಟಿಕರ್ |
| ಬಳ್ಳಾರಿ | ಆನಂದ್ ಸಿಂಗ್ |
| ಚಿತ್ರದುರ್ಗ | ಬಿಜೆ ಪುಟ್ಟಸ್ವಾಮಿ |
| ರಾಮನಗರ | ಎಂಪಿ ರೇಣುಕಾಚಾರ್ಯ |
| ಕೊಡಗು | ಅಪ್ಪಚ್ಚು ರಂಜನ್ |
| ಬೀದರ್ | ಸುನೀಲ್ ವ್ಯಾಲೆಪುರೆ |
| ಬೆಂಗಳೂರು ಗ್ರಾಮಾಂತರ | ಬಿ.ಎನ್. ಬಚ್ಚೇಗೌಡ |
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications