ಮೈಂಡ್ ಟ್ರೀ ಲಾಭದಲ್ಲಿ ಶೇ 116 ರಷ್ಟು ಪ್ರಗತಿ

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ 116ರಷ್ಟು ಹೆಚ್ಚುವರಿ ಲಾಭ ಗಳಿಸಿದ ಸಾಧನೆ ಮಾಡಿದೆ. 16.7 ಮಿಲಿಯನ್ ಡಾಲರ್ ನಂತೆ year on year ನಲ್ಲಿ ಲಾಭ ಬಂದಿದೆ. ಜೂನ್ 30,2012ಕ್ಕೆ ಕೊನೆ ಗೊಂಡ ತ್ರೈಮಾಸಿಕದ Mತೆ ರುಪಾಯಿ ಮೌಲ್ಯದಲ್ಲಿ ಶೇ 157.2 ರಷ್ಟು ಏರಿಕೆ ಕಂಡಿದೆ.
ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ(q-o-q) ಸಂಸ್ಥೆಯ ಡಾಲರ್ ಆದಾಯ ಶೇ 0.4ರಷ್ಟು ಏರಿಕೆ ಹಾಗೂ y-o-y ನಂತೆ 105.5 ಮಿಲಿಯನ್ ಡಾಲರ್ ನಂತೆ ಶೇ.14ರಷ್ಟು ಆದಾಯ ಗಳಿಸಿದೆ. ರುಪಾಯಿ ಮೌಲ್ಯದಲ್ಲಿ ಕಳೆದ ಬಾರಿಗೆ ಹೋಲಿಸಿದರೆ 527.7 ಕೋಟಿ ರು ಇದ್ದ ಆದಾಯ 563ಕೋಟಿ ರು.ಗೆ ಏರಿದೆ. ಶೇ 7ರಷ್ಟು ಹೆಚ್ಚುವರಿ ಆದಾಯ ಬಂದಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ 272 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೈಂಡ್ ಟ್ರೀ ಸಂಸ್ಥೆಯಲ್ಲಿ ಒಟ್ಟು 10,830 ಉದ್ಯೋಗಿಗಳಿದ್ದಾರೆ. ಸೋಮವಾರ ಸಂಸ್ಥೆಯ ಷೇರುಗಳು ಬಿಎಸ್ ಇನಲ್ಲಿ ಮಧ್ಯಾಹ್ನ 12ಕ್ಕೆ 681 ರು.ನಂತೆ ಶೇ 3.50ರಷ್ಟು ಏರಿಕೆ ಕಂಡಿತ್ತು.
ಲಾಭವೋ ಲಾಭ: ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಮೈಂಡ್ ಟ್ರೀ ನಿವ್ವಳ ಲಾಭ ದ್ವಿಗುಣವಾಗಿದೆ. ಕಳೆದ ವರ್ಷ 34.6 ಕೋಟಿ ರು ಗಳಿಸಿದ್ದ ಮೈಂಡ್ ಟ್ರೀ ಈ ಬಾರಿ 89 ಕೋಟಿ ಲಾಭ ದಾಖಲಿಸಿದೆ.
ಕಳೆದ ವರ್ಷ ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ 413.1 ಕೋಟಿ ರು ಇದ್ದ ಆದಾಯ ಈ ಬಾರಿ 563ಕ್ಕೇರಿದೆ ಎಂದು ಬಿಎಸ್ ಇಗೆ ನೀಡಿದ ಮಾಹಿತಿಯನ್ನು ಮೈಂಡ್ ಟ್ರೀ ಸಂಸ್ಥೆ ಹೇಳಿದೆ.
ಐಟಿ ಬಂಡವಾಳ ಹೂಡಿಕೆಯಲ್ಲಿ ಗ್ರಾಹಕರು ಸೂಕ್ಷ್ಮವಾಗಿ ವರ್ತಿಸುತ್ತಿದ್ದಾರೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇನ್ನೂ ಮುಂದುವರೆದಿದೆ. ನ್ಯಾಸ್ ಕಾಮ್ ನ 2012-13ರಲ್ಲಿ ಸಂಸ್ಥೆಯ ಪ್ರಚಲಿತ ಅಂದಾಜಿನಂತೆ ಸಂಸ್ಥೆ ತನ್ನ ಮುಂದಿನ ಹೆಜ್ಜೆ ಇಡಲಿದೆ ಎಂದು ಮೈಂಡ್ ಟ್ರೀ ಸಂಸ್ಥೆಯ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ನಟರಾಜನ್ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೈಂಡ್ ಟ್ರೀ ಸಂಸ್ಥೆ ಶೇ 11 ರಿಂದ 14 ರಷ್ಟು ಪ್ರಗತಿ ಸಾಧಿಸಲಿದೆ ಎಂದು ನ್ಯಾಸ್ ಕಾಮ್ ಅಂದಾಜಿಸಿದೆ. ಭಾರತದಲ್ಲಿ ಮೈಂಡ್ ಟ್ರೀ ಷೇರುಗಳು ಉತ್ತಮ ವ್ಯವಹಾರ ಮಾಡುತ್ತಿದ್ದು,
ಬಿಎಸ್ ಇನಲ್ಲಿ 1.46 ಲಕ್ಷ ಷೇರುಗಳು ಕೈಬದಲಾಯಿಸಿದೆ. ಹಾಗೂ ಎನ್ ಎಸ್ ಇನಲ್ಲಿ ಸುಮಾರು 4 ಲಕ್ಷ ಷೇರುಗಳು ವಹಿವಾಟು ನಿರತವಾಗಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.
-
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ












Click it and Unblock the Notifications