ಬಲಿಷ್ಠ ಜರ್ಮನ್ನರ ಕಾಲ್ತುಳಿತಕ್ಕೆ ಸಿಕ್ಕ ಗ್ರೀಸ್ ಜಜ್ಜಿ

ಈ ಗೆಲುವಿನೊಂದಿಗೆ ಜರ್ಮನ್ನರು ಕಳೆದ ವಿಶ್ವಕಪ್ ಹಾಗೂ ಯುರೋ 2008 ಸೆಮಿ ಫೈನಲ್ಸ್ ತಲುಪಿದ ತಂಡ ಎಂಬ ಸಾಧನೆ ಮಾಡಿದೆ. 1980ರಲ್ಲಿ ಚೆಕೋಸ್ಲೋವಾಕಿಯಾ ವಿರುದ್ಧ 3-1ರ ಅಂತರದಿಂದ ಸೋತಿದ್ದ ಮಾಜಿ ಯುರೋ ಚಾಂಪಿಯನ್ಸ್ ಗ್ರೀಕ್ ತಂಡಕ್ಕೆ ಇದು ದೊಡ್ಡ ಅಂತರದ ಸೋಲಾಗಿದೆ.
ರಾಜಕೀಯ ಹಾಗೂ ಆರ್ಥಿಕ ವಿಷಯದಲ್ಲಿ ವೈಮನಸ್ಯ ಬೆಳೆಸಿಕೊಂಡಿರುವ ಜರ್ಮನಿ ಹಾಗೂ ಗ್ರೀಸ್ ಕದನ ಭಾರಿ ಕುತೂಹಲ ಕೆರಳಿಸಿತ್ತು. ಆದರೆ, 2004 ಯುರೋ ಕಪ್ ಚಾಂಪಿಯನ್ ಗ್ರೀಸ್ ಕನಸನ್ನು ಜರ್ಮನ್ನರು ನುಚ್ಚುನೂರು ಮಾಡಿಬಿಟ್ಟರು.
ಆದರೆ ದ್ವಿತೀಯಾರ್ಧದಲ್ಲಿ ಹತ್ತು ನಿಮಿಷದ ಆಟ ಮುಗಿಯುತ್ತಿದ್ದಂತೆ ಜಾರ್ಜಿಯಸ್ ಸಮರಸ್ ಬಾರಿಸಿದ ಗೋಲಿನ ನೆರವಿನಿಂದ ಸಮಬಲ ಸಾಧಿಸಿ ಜರ್ಮನಿಗೆ ಆಘಾತ ನೀಡಿತು. 61ನೇ ನಿಮಿಷದಲ್ಲಿ ಸಾಮಿ ಖದಿರಾ ಬಾರಿಸಿದ ಗೋಲಿನಿಂದ ಮತ್ತೆ ಮುನ್ನಡೆಯನ್ನು ಕಾಯ್ದುಕೊಂಡಿತು. ಏಳು ನಿಮಿಷದ ಬಳಿಕ ಮಿರೊಸ್ಲಾವ್ ಕ್ಲೋಸ್ ಬಾರಿಸಿದ ಗೋಲಿನಿಂದ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಮಾರ್ಕೊ ರೆಯುಸ್ ಪಂದ್ಯ ಕೊನೆಗೊಳ್ಳಲು 15 ನಿಮಿಷಗಳಿರುವ ಬಾರಿಸಿದ ಗೋಲಿನಿಂದ ಜರ್ಮನಿ ಗೆಲುವು ಸ್ಪಷ್ಟವಾಯಿತು.
ಪಂದ್ಯ ಕೊನೆಗೊಳ್ಳಲು ಕೇವಲ ಒಂದು ನಿಮಿಷ ಇರುವಾಗ ಸಿಕ್ಕಿದ ಪೆನಾಲ್ಟಿ ಸಲ್ಪಿಂಜಿಡಿಸ್ ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಇದಕ್ಕೂ ಮುನ್ನ ಸಮರಾಸ್ ಗ್ರೀಸ್ ಗೆ ಆಧಾರವಾಗಿ ಒಂದು ಗೋಲು ಗಳಿಸಿದ್ದರು. ಆದರೆ, ಜರ್ಮನ್ನರ ದಾಳಿಗೆ ಗ್ರೀಸ್ ಬಳಿ ಉತ್ತರ ವಿರಲಿಲ್ಲ. ಆದರೆ ಜರ್ಮನಿ ಸತತ ನಾಲ್ಕನೇ ಸಲ ಯುರೋ ಕಪ್ ನ ಸೆಮಿಫೈನಲಿಗೇರಿದೆ.
ಮೊದಲಾರ್ಧದಲ್ಲಿ ಶೇ 70 ರಷ್ಟು ಚೆಂಡಿನ ಹಿಡಿತ ಹೊಂದಿದ್ದ ಜರ್ಮನ್ನರ ಪಾಲಿಗೆ ನಾಯಕ ಫಿಲಿಫ್ ಲಾಮ್ ಮೊದಲ ಯಶಸ್ಸು ತಂದು ಕೊಟ್ಟರು. ಪಂದ್ಯದ ಆರಂಭದಲ್ಲೇ ಯಶ ಸಿಕ್ಕರೂ ಆಫ್ ಸೈಡ್ ಆಗಿ ಬಿಟ್ಟಿತ್ತು. 39ನೇ ನಿಮಿಷದಲ್ಲಿ ಲಾಹ್ಮ್ ಗಳಿಸಿದ ಗೋಲಿನ ನಂತರ ಸಾಮಿ ಖದಿರಾ, ಮಿರೋಸ್ಲವ್ ಕ್ಲೋಸ್, ಮಾರ್ಕೋ ರಿಯೂಸ್ ಭರ್ಜರಿ ಗೋಲುಗಳನ್ನು ಬಾರಿಸಿ ಜರ್ಮನ್ನರ ಪ್ರಾಬಲ್ಯದ ಛಾಪು ಮೂಡಿಸಿದರು.
ಜರ್ಮನ್ನರ ಹೊಸ ತಂತ್ರ ಫಲಿಸಿತು: ಜೋಕಿಮ್ ಲೋಮ್ ಪಂದ್ಯದ ಆರಂಭದಲ್ಲಿ ಎದುರಾಳಿಗಳಿಗೆ ಸಣ್ಣ ಅಚ್ಚರಿ ಮೂಡಿಸಿದರು. ಉತ್ತಮ ಲಯದಲ್ಲಿದ್ದ ಲೂಕಾಸ್ ಪೊಡೊಲ್ ಸ್ಕಿ, ಥಾಮಸ್ ಮುಲ್ಲರ್, ಮರಿಯೋ ಗೊಮೆಜ್ ಕಣಕ್ಕಿಳಿಯದೆ ಬದಲಿ ಆಟಗಾರರಾಗಿ ಡಗ್ ಔಟ್ ನಲ್ಲಿ ಕೂತಿದ್ದರು. ಕ್ಲೋಸ್, ಓಜಿಲ್, ಖದಿರಾ, ಶ್ವೈಸ್ ಟೈಗರ್ ಸಮರ್ಥವಾಗಿ ತಂಡವನ್ನು ಮುನ್ನಡೆಸಿದರಲ್ಲದೆ ರಿಯೂಸ್, ಶ್ಕೂರ್ಲ್ ರಂಥ ಯುವ ಆಟಗಾರರಿಗೂ ಸ್ಥಾನ ಕಲ್ಪಿಸಲಾಯಿತು.
ಗ್ರೀಸ್ ತಂಡದಲ್ಲಿ ಗೋಲ್ ಕೀಪರ್ ಚಾಲಕಾಸ್ ಇಲ್ಲದೆ ಸಿಫಕಾಸ್ ಕೂಡಾ ಗಾಯಾಳು ಆಗಿ ಸಮಸ್ಯೆಯಾಯಿತು. ನಾಯಕ ಕರಗೋನಿಸ್ , ಗೆಕಾಸ್ ಹಾಗೂ ನಿನಿ ಕೂಡಾ ಅಷ್ಟು ಉತ್ತಮ ಪ್ರದರ್ಶನ ನೀಡಲಿಲ್ಲ. ಮಕೋಸ್, ಸಮರಾಸ್ ಉತ್ತಮ ಪ್ರದರ್ಶನ ನೀಡಿದರು. ಸಾಕ್ರಟೀಸ್ ಒರಟಾಟದಲ್ಲೇ ಕಾಲ ಕಳೆದಿದ್ದು ಬಿಟ್ಟರೆ, ಗೋಲು ಗಳಿಸುವ ಲಕ್ಷಣಗಳು ಕಂಡು ಬರಲಿಲ್ಲ.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications