ರೂನಿ ಕಾಲ್ಗುಣದ ಲಕ್, ಇಂಗ್ಲೆಂಡ್ ಎಂಟರ ಘಟಕ್ಕೆ

ಅತಿಥೇಯ ಉಕ್ರೇನ್ ತಂಡ ಅನುಭವಿ ಆಟಗಾರ ನಾಯಕ ಶೆವ್ಚೆಂಕೋ ಅನುಪಸ್ಥಿತಿಯಲ್ಲಿ ಕಣಕ್ಕಿಳಿದರೂ ಪ್ರಥಮಾರ್ಧದಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸಿತ್ತು. ಆದರೆ, ಇಂಗ್ಲೆಂಡ್ ಪರ ರೂನಿ, ವೆಲ್ ಬಾಕ್ ಉತ್ತಮ ಆಟ ಪ್ರದರ್ಶಿಸಿ ಉಕ್ರೇನ್ ರಕ್ಷಣಾ ಪಡೆಗೆ ಸವಾಲೆಸೆದಿದ್ದರು. ದ್ವಿತೀಯಾರ್ಧ ಆರಂಭದ ಮೂರೇ ನಿಮಿಷದಲ್ಲಿ ರೂನಿ ಹೆಡ್ ಮಾಡಿ ಬಾರಿಸಿದ ಗೋಲಿನಿಂದ ಇಂಗ್ಲೆಂಡ್ ಕ್ವಾರ್ಟರ್ ಫೈನಲಿಗೇರುವುದು ಸ್ಪಷ್ಟವಾಯಿತು.
ಅಂತಿಮ ಎಂಟರ ಘಟ್ಟಕ್ಕೇರಬೇಕಿದ್ದರೆ ಉಕ್ರೇನ್ ಗೆ ಗೆಲುವು ತುಂಬಾ ಮುಖ್ಯವಾಗಿತ್ತು. ಆದರೆ 62ನೇ ನಿಮಿಷದಲ್ಲಿ ಮಾರ್ಕೊ ಡೆವಿಕ್ ಗೋಲು ಬಾರಿಸಲು ಪ್ರಯತ್ನಿಸಿದರೂ, ಚೆಂಡು ಗೋಲು ಬಾಕ್ಸ್ ನ ಲೈನ್ ದಾಟಿದೆ ಎಂದು ಉಕ್ರೇನ್ ಆಟಗಾರರು ಮತ್ತು ಅಭಿಮಾನಿಗಳು ವಾದ ಮಾಡಿದರು. ಆದರೆ ರಿಪ್ಲೇಯಲ್ಲಿ ಚೆಂಡು ಲೈನ್ ದಾಟಿರುವುದು ಸ್ಪಷ್ಟವಾಗಿತ್ತು.
ಗೋಲ್ ಲೈನ್ ವಿವಾದ : ಇದು ಮತ್ತೊಂದು ಗೋಲ್ ಲೈನ್ ವಿವಾದವಾಗಿ ಇತಿಹಾಸ ಪುಟ ಸೇರಿಬಿಟ್ಟಿತು. ಗೋಲು ಬಾಕ್ಸ್ ಹಿಂದಿನಿಂತ ಸಹಾಯಕ ರೆಫ್ರಿ ಈ ಗೋಲನ್ನು ಸ್ಪಷ್ಟವಾಗಿ ನೋಡುವ ಎಲ್ಲಾ ಅವಕಾಶ ಇತ್ತು. ಆದರೆ, ಇಂಗ್ಲೆಂಡ್ ಮತ್ತೊಮ್ಮೆ ಅದೃಷ್ಟದಿಂದ ಪಂದ್ಯ ಗೆದ್ದು ಬಿಟ್ಟಿತು.
2010ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ಫ್ರಾಂಕ್ ಲ್ಯಾಂಪರ್ಡ್ ಗೋಲು ಲೈನ್ ವಿವಾದದಂತೆ ಈ ವಿವಾದವೂ ಫೀಫಾಗೆ ಎಚ್ಚರಿಕೆ ಗಂಟೆಯಾಗಿದೆ. ಲ್ಯಾಂಪರ್ಡ್ ಗೋಲು ಹೊಡೆದಿಲ್ಲ ಎಂದು ಫೀಫಾ ನಿಯಮದ ಪ್ರಕಾರ ರೆಫ್ರಿ ಘೋಷಿಸಿದ್ದರು. ನಂತರ ಗೋಲ್ ಲೈನ್ ತಂತ್ರಜ್ಞಾನ ಬದಲಾವಣೆಗೊಳಿಸಲಾಗಿತ್ತು. ಆದರೆ, ಉಕ್ರೇನ್ ಗೆ ಅದೃಷ್ಟವಾಗಲಿ, ತಂತ್ರಜ್ಞಾನವಾಗಲಿ ನೆರವಿಗೆ ಬರಲಿಲ್ಲ.
ಭಾನುವಾರ ನಡೆಯಲಿರುವ ಕ್ವಾರ್ಟರ್ ಫೈನಲಿನಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಆಡಲಿದೆ. ಸಹ ಆತಿಥೇಯತ್ವ ವಹಿಸಿದ್ದ ಉಕ್ರೇನ್ ಟೂರ್ನಿಯಿಂದ ಹೊರಬಿದ್ದು ಸ್ವದೇಶದ ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡಿದೆ.
| ಇಂಗ್ಲೆಂಡ್ | 1 - 0 | ಉಕ್ರೇನ್ |
| 5(4) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 11(5) |
| 6 | ಕಾರ್ನರ್ಸ್ | 10 |
| 13 | ಫೌಲ್ಸ್ | 12 |
| 0 | ಆಫ್ ಸೈಡ್ | 0 |
| 2 | ಹಳದಿ ಕಾರ್ಡ್ | 3 |
| 0 | ಕೆಂಪು ಕಾರ್ಡ್ | 0 |
ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಶೆವ್ಚೆಂಕೋ ಕೂಡಾ ಗಾಯದ ಸಮಸ್ಯೆಯಿಂದ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಯರ್ಮಲೆಂಕೋ, ನಜಾರೆಂಕೋ ಉತ್ತಮ ಆಟವಾಡಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications