ಚಪ್ಪಾಳೆ ತಟ್ಟುವುದು ಬಿಟ್ಟು ಇದೇನ್ರೀ ರೇಣುಕಾಚಾರ್ಯ?

ಶಾಸಕನಾಗುವುದು ಹಣ ತಿಂದು ತೇಗುವುದಕ್ಕಲ್ಲ. ಅದರಲ್ಲೂ ಸ್ಪೀಕರ್ ಸ್ಥಾನಕ್ಕೆ ಒಂದು ಮರ್ಯಾದೆ ಇರುತ್ತದೆ. ಸಭಾಧ್ಯಕ್ಷ ಹುದ್ದೆ ಬೀದಿ ಹಗರಣ ಆಗಬಾರದು, ಸದನದ ಕಲಾಪ, ನಡವಳಿಕೆ ತಿರುಚುವ ಕೆಲಸ ಮಾಡಬಾರದು ಎಂದು, ಕರ್ನಾಟಕ ವಿಧಾನಸಭೆ ವಜ್ರಮಹೋತ್ಸವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಈ ನುಡಿಗಳನ್ನು ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿಕಟವರ್ತಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಅವರೇನು ಸಾಚಾಗಳಾ, ಅವರೇನು ಹರಿಶ್ಚಂದ್ರನ ವಂಶದವರಾ, ಅವರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ರೇಣುಕಾಚಾರ್ಯ ಅವರು ಪ್ರತಿ ಪಕ್ಷದ ನಾಯಕನಂತೆ ತಮ್ಮದೇ ಸಹೋದ್ಯೋಗಿಯನ್ನು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಡಿಬಿ ಚಂದ್ರೇಗೌಡ ಹೇಳುವುದೆಲ್ಲ ಬರೀ ಬೊಗಳೆ. ಅವರೂ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಮ್ಮ ಮಗಳಿಗಾಗಿ ಅಕ್ರಮವಾಗಿ ಸೈಟ್ ಕೊಂಡಿದ್ದರು. ಚಂದ್ರೇಗೌಡ ಅವರು ಸಾಚಾ ರಾಜಕಾರಣಿಯಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ರೇಣುಕಾಚಾರ್ಯ ಅವರು 15ನೇ ಲೋಕಸಭೆಗೆ ಬೆಂಗಳೂರು ಉತ್ತರದಿಂದ ಆಯ್ಕೆಯಾಗಿರುವ ಚಂದ್ರೇಗೌಡರನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ.
ರೇಣುಕಾಚಾರ್ಯ ಅವರ ವಾಗ್ದಾಳಿಗೆ ತಕ್ಕ ಉತ್ತರ ನೀಡಿರುವ ಚಂದ್ರೇಗೌಡ ಅವರು, ನಾನು ಯಾವ ಹಗರಣದಲ್ಲಿಯೂ ಭಾಗಿಯಾಗಿಲ್ಲ. ನನ್ನ ಮಗಳಿಗೆ ಸಿಕ್ಕ ಸೈಟ್ ವಾಪಸ್ ಮಾಡಲಾಗಿದೆ. ರಾಜಕಾರಣದಲ್ಲಿ ರೇಣುಕಾಚಾರ್ಯರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ತಿಳಿದ ವಿಚಾರ ಹಂಚಿಕೊಂಡಿದ್ದೇನಷ್ಟೆ. ನನ್ನ ಭಾಷಣದಲ್ಲಿ ಏನೇ ಸಂಶಯಗಳಿದ್ದರೆ ನನ್ನ ಜೊತೆ ಅವರು ಚರ್ಚಿಸಬಹುದಿತ್ತು. ಹೀಗೆ, ಬಹಿರಂಗವಾಗಿ ಟೀಕಿಸುವ ಅಗತ್ಯವಿರಲಿಲ್ಲ ಎಂದು ಚಂದ್ರೇಗೌಡ ಅವರು ರೇಣುಕಾಚಾರ್ಯಗೆ ತಿರುಗೇಟು ನೀಡಿದ್ದಾರೆ.
ಚಂದ್ರೇಗೌಡ ಅವರ ಭಾಷಣಕ್ಕೆ ಈ ರೀತಿ ಟೀಕಿಸುವ ಅಗತ್ಯವಾದರೂ ರೇಣುಕಾಚಾರ್ಯ ಅವರಿಗೆ ಏನಿತ್ತು? ತಮ್ಮ ಪಕ್ಷದ ಸದಸ್ಯನನ್ನೇ ಈ ಪಾಟಿ ಟೀಕಿಸುವ ಅಗತ್ಯವಿತ್ತಾ? ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ರೇಣುಕಾಚಾರ್ಯ ನೋಡಿಕೊಂಡಿದ್ದು ಸರೀನಾ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications