ಚಪ್ಪಾಳೆ ತಟ್ಟುವುದು ಬಿಟ್ಟು ಇದೇನ್ರೀ ರೇಣುಕಾಚಾರ್ಯ?

ಶಾಸಕನಾಗುವುದು ಹಣ ತಿಂದು ತೇಗುವುದಕ್ಕಲ್ಲ. ಅದರಲ್ಲೂ ಸ್ಪೀಕರ್ ಸ್ಥಾನಕ್ಕೆ ಒಂದು ಮರ್ಯಾದೆ ಇರುತ್ತದೆ. ಸಭಾಧ್ಯಕ್ಷ ಹುದ್ದೆ ಬೀದಿ ಹಗರಣ ಆಗಬಾರದು, ಸದನದ ಕಲಾಪ, ನಡವಳಿಕೆ ತಿರುಚುವ ಕೆಲಸ ಮಾಡಬಾರದು ಎಂದು, ಕರ್ನಾಟಕ ವಿಧಾನಸಭೆ ವಜ್ರಮಹೋತ್ಸವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಈ ನುಡಿಗಳನ್ನು ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿಕಟವರ್ತಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಅವರೇನು ಸಾಚಾಗಳಾ, ಅವರೇನು ಹರಿಶ್ಚಂದ್ರನ ವಂಶದವರಾ, ಅವರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ರೇಣುಕಾಚಾರ್ಯ ಅವರು ಪ್ರತಿ ಪಕ್ಷದ ನಾಯಕನಂತೆ ತಮ್ಮದೇ ಸಹೋದ್ಯೋಗಿಯನ್ನು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಡಿಬಿ ಚಂದ್ರೇಗೌಡ ಹೇಳುವುದೆಲ್ಲ ಬರೀ ಬೊಗಳೆ. ಅವರೂ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಮ್ಮ ಮಗಳಿಗಾಗಿ ಅಕ್ರಮವಾಗಿ ಸೈಟ್ ಕೊಂಡಿದ್ದರು. ಚಂದ್ರೇಗೌಡ ಅವರು ಸಾಚಾ ರಾಜಕಾರಣಿಯಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ರೇಣುಕಾಚಾರ್ಯ ಅವರು 15ನೇ ಲೋಕಸಭೆಗೆ ಬೆಂಗಳೂರು ಉತ್ತರದಿಂದ ಆಯ್ಕೆಯಾಗಿರುವ ಚಂದ್ರೇಗೌಡರನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ.
ರೇಣುಕಾಚಾರ್ಯ ಅವರ ವಾಗ್ದಾಳಿಗೆ ತಕ್ಕ ಉತ್ತರ ನೀಡಿರುವ ಚಂದ್ರೇಗೌಡ ಅವರು, ನಾನು ಯಾವ ಹಗರಣದಲ್ಲಿಯೂ ಭಾಗಿಯಾಗಿಲ್ಲ. ನನ್ನ ಮಗಳಿಗೆ ಸಿಕ್ಕ ಸೈಟ್ ವಾಪಸ್ ಮಾಡಲಾಗಿದೆ. ರಾಜಕಾರಣದಲ್ಲಿ ರೇಣುಕಾಚಾರ್ಯರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ತಿಳಿದ ವಿಚಾರ ಹಂಚಿಕೊಂಡಿದ್ದೇನಷ್ಟೆ. ನನ್ನ ಭಾಷಣದಲ್ಲಿ ಏನೇ ಸಂಶಯಗಳಿದ್ದರೆ ನನ್ನ ಜೊತೆ ಅವರು ಚರ್ಚಿಸಬಹುದಿತ್ತು. ಹೀಗೆ, ಬಹಿರಂಗವಾಗಿ ಟೀಕಿಸುವ ಅಗತ್ಯವಿರಲಿಲ್ಲ ಎಂದು ಚಂದ್ರೇಗೌಡ ಅವರು ರೇಣುಕಾಚಾರ್ಯಗೆ ತಿರುಗೇಟು ನೀಡಿದ್ದಾರೆ.
ಚಂದ್ರೇಗೌಡ ಅವರ ಭಾಷಣಕ್ಕೆ ಈ ರೀತಿ ಟೀಕಿಸುವ ಅಗತ್ಯವಾದರೂ ರೇಣುಕಾಚಾರ್ಯ ಅವರಿಗೆ ಏನಿತ್ತು? ತಮ್ಮ ಪಕ್ಷದ ಸದಸ್ಯನನ್ನೇ ಈ ಪಾಟಿ ಟೀಕಿಸುವ ಅಗತ್ಯವಿತ್ತಾ? ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ರೇಣುಕಾಚಾರ್ಯ ನೋಡಿಕೊಂಡಿದ್ದು ಸರೀನಾ?
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications